ಗಂಗೊಳ್ಳಿ: ಜಾನುವಾರುಗಳನ್ನು ಸಾಕಲು ಅಶಕ್ತರಾದವರ ಮನೆಯವರ ಜಾನುವಾರುಗಳನ್ನು ಮತ್ತು ಬೀಡಾಡಿ ಜಾನುವಾರುಗಳನ್ನು ಗೋಶಾಲೆಗೆ ಸಾಗಿಸುವ ಮೂಲಕ ಗಂಗೊಳ್ಳಿ ಹಿಂಜಾವೇ ಕಾರ್ಯಕರ್ತರು ಮಾನವೀಯತೆ ಮೆರೆದಿದ್ದಾರೆ.
ಗಂಗೊಳ್ಳಿ ಪರಿಸರದಲ್ಲಿ ಜಾನುವಾರುಗಳನ್ನು ಸಾಕಲು ಸಾಧ್ಯವಾಗದಿರುವವ ಮನೆಯ ಜಾನುವಾರುಗಳನ್ನು ಹಾಗೂ ಬೀಡಾಡಿ ಜಾನುವಾರುಗಳನ್ನು ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಒಟ್ಟು ಸೇರಿಸಿ ಈ ಎಲ್ಲಾ ಜಾನುವಾರುಗಳನ್ನು ನೀಲಾವರದ ಗೋಶಾಲೆಗೆ ಸಾಗಿಸಿದ್ದಾರೆ. ಪ್ರತಿವರ್ಷ ಈ ರೀತಿಯಾಗಿ ಅನೇಕ ಜಾನುವಾರುಗಳನ್ನು ಗೋಶಾಲೆಗಳಿಗೆ ಸಾಗಿಸುವ ಕಾರ್ಯವನ್ನು ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ನಡೆಸುತ್ತಿದ್ದಾರೆ.