ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಮಾವಿನಕಾರು ಗ್ರಾಮದ ಭರತ್ಕುಮಾರ್ ಶೆಟ್ಟಿ ಅವರಿಗೆ ಅವರ ಸಮಾಜಸೇವೆ ಗುರುತಿಸಿ ಬೀದರ್ನಲ್ಲಿ ಪ್ರತಿಷ್ಠಿತ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಪ್ರತಿಷ್ಠಾನ ಹಾಗೂ ಮಂದಾರ ಕಲಾ ವೇದಿಕೆಯಿಂದ ನಡೆದ ಸಮಾರಂಭದಲ್ಲಿ ಕಾಯಕ ಚೂಡಾಮಣಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಡಾ.ಎಂ.ಜಿ.ದೇಶಪಾಂಡೆ, ಮಕ್ಕಳತಜ್ಞ ಡಾ.ಸಿ.ಆನಂದ ರಾವ್, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿದೇರ್ಶಕ ಡಾ.ಸತೀಶ್ ಕುಮಾರ್ ಹೊಸಮನಿ ಬೆಂಗಳೂರು, ಡಾ.ಜಯಪ್ಪ ಹೊನ್ನಾಳಿ(ಜಯಕವಿ) ಮೈಸೂರು, ಲೇಖಕಿ ಪಾರ್ವತಿ ಸೋನಾಲೆ ಬೀದರ್, ಸಾಹಿತಿ ಗೋಪಾಲಕೃಷ್ಣ ವಂಡ್ಸೆ, ಸಂಘಟಕ ಡಾ. ನಿತೇಶ್ಕುಮಾರ್ ಬೀದರ್, ಕವಿ ವಿಶ್ವೇಶ್ವರ ಮೇಟಿ ಮುಂಬೈ ಮೊದಲಾದವರು ಇದ್ದರು.