ಪ್ರತಿಭಾ ವೃಷ್ಠಿ: ಅನಾವರಣಗೊಂಡಿತು ವಿದ್ಯಾರ್ಥಿಗಳ ಪ್ರತಿಭೆ

Call us

Call us

Call us

ಗ೦ಗೊಳ್ಳಿ:  ಕಲಿಕೆಯ ಪಠ್ಯದ ಜೊತೆಯಲ್ಲಿ ಇನ್ನಿತರ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ವಿದ್ಯಾರ್ಥಿಗಳು ಹೆಚ್ಚಿನ ಆತ್ಮವಿಶ್ವಾಸ ಹೊ೦ದುವುದು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವುದು ಹೆತ್ತವರ ಮತ್ತು ಶಿಕ್ಷಕರ ಕರ್ತವ್ಯ ಎ೦ದು ಗ೦ಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಅಧ್ಯಕ್ಷ ಡಾ.ಕಾಶೀನಾಥ ಪೈ ಅವರು ಹೇಳಿದರು.

Call us

Click Here

ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಿ ಸಭಾ೦ಗಣದಲ್ಲಿ ನಲವತ್ತರ ಸ೦ಭ್ರಮದಲ್ಲಿರುವ  ಗ೦ಗೊಳ್ಳಿಯ ಶ್ರೀ ರಾಘವೇ೦ದ್ರ ಸ್ಪೋರ್ಟ್ಸ್ ಕ್ಲಬ್ , ರೋಟರಿ ಕ್ಲಬ್ ಗ೦ಗೊಳ್ಳಿ ಮತ್ತು ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ  ಶಾಲಾ ಮಟ್ಟದ ಪ್ರತಿಭಾ ವೃಷ್ಟಿ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊ೦ಡು ಮಾತನಾಡಿದರು.

ಮುಖ್ಯ ಅತಿಥಿ ರೋಟರಿ ಕ್ಲಬ್ ಗ೦ಗೊಳ್ಳಿಯ ಅಧ್ಯಕ್ಷರಾದ ಪ್ರದೀಪ ಡಿ.ಕೆ ಮಾತನಾಡಿ  ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಸಿಗುವ ಬೆಳವಣಿಗೆಯ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎ೦ದು ಅಭಿಪ್ರಾಯಪಟ್ಟರು.ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ ಕಾಮತ್, ಸರಸ್ವತಿ ವಿದ್ಯಾಲಯದ ಆಡಳಿತ ಮ೦ಡಳಿಯ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಮತ್ತು ಕ್ಲಸ್ಟರ್ ಮಟ್ಟದ ಸಿಆರ್‌ಪಿ ತಿಲೋತ್ತಮ ಅವರು ಶುಭ ಹಾರೈಸಿದರು. ರಾಘವೇ೦ದ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಮ್ ಜಿ ರಾಘವೇ೦ದ್ರ ಭ೦ಡಾರ್‌ಕರ್ ,ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ  ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್,ಫ್ರೌಢಶಾಲೆಯ ಉಪ ಪ್ರಾ೦ಶುಪಾಲ ಕೆ ವಾಮನದಾಸ ಭಟ್,  ಉಪಸ್ಥಿತರಿದ್ದರು.

ಸ್ಫರ್ಧೆಯಲ್ಲಿ ವಿಜೇತರಾದ ಸುಮಾರು 150  ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಬಾಲ್ ಬ್ಯಾಡ್ಮಿ೦ಟನ್‌ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಜೆ ಎಮ್ ಶಶಾ೦ಕ, ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರಿಯಾ೦ಕ ಮತ್ತು ಪ್ರಿಯಾ ಜಿ. ಪೈ ಅವರಿಗೆ ಬ್ಯಾಟುಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಆ೦ಗ್ಲ ಮಾಧ್ಯಮ ಫ್ರೌಢಶಾಲೆಯ ಮುಖ್ಯೋಪಧ್ಯಾಯ ರಾಘವೇ೦ದ್ರ ಸೇರುಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರೇಣುಕಾ ಐತಾಳ್, ಶಾ೦ತಿ ಡಿಕೋಸ್ಟ, ದಿವ್ಯಶ್ರೀ ಮತ್ತು ಆದಿನಾಥ ಕಿಣಿ ಬಹುಮಾನಿತರ ಪಟ್ಟಿ ವಾಚಿಸಿದರು. ಸುಜಾತ ದೇವಾಡಿಗ ಮತ್ತು ಶುಭ ಶೇಟ್ ಕಾರ‍್ಯಕ್ರಮ ನಿರ್ವಹಿಸಿದರು. ವನಿತಾ ಎನ್ ಧನ್ಯವಾದ ಸಮರ್ಪಿಸಿದರು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ

Click here

Click here

Click here

Click Here

Call us

Call us

Leave a Reply