ಶಿರೂರು ಜೆ.ಸಿ.ಐ: ಜೇಸಿ ಸಪ್ತಾಹ 2015

Call us

Call us

Call us

ಬೈಂದೂರು: ಜೆ.ಸಿ.ಐ ಶಿರೂರು ಇದರ 2015ನೇ  ಸಾಲಿನ ಜೇಸಿ  ಸಪ್ತಾಹ ಕಾರ್ಯಕ್ರಮವನ್ನು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಪೇಟೆ ಶ್ರೀ ವೆಂಕಟರಮಣ ಸಭಾ ಭವನದಲ್ಲಿ ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಅವರು ಜೆ.ಸಿ.ಐ ಸಂಸ್ಥೆ ತನ್ನ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.ಗ್ರಾಮೀಣ ಭಾಗದಲ್ಲಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಲಯ ಮಟ್ಟದಲ್ಲಿ ಗುರುತಿಸಿಕೊಂಡ ಶಿರೂರು ಜೆ.ಸಿ.ಐ ನ ಸಾಧನೆ ಶ್ಲಾಘನೀಯ ಎಂದರು.

Call us

Click Here

ಶಿರೂರು ಜೆ.ಸಿ.ಐ ಅಧ್ಯಕ್ಷ ಪ್ರಕಾಶ ಮಾಕೋಡಿ ಅಧ್ಯಕ್ಷತೆ ವಹಿಸಿದ್ದರು.ಈ ಸಂಧರ್ಭದಲ್ಲಿ ವಲಯ ನಿರ್ದೇಶಕ ಮಂಗೇಶ್ ಶ್ಯಾನುಭಾಗ್,ಮಾಜಿ ಗ್ರಾ.ಪಂ ಅಧ್ಯಕ್ಷ ರಾಮ ಮೇಸ್ತ, ವಿಜಯ ಬ್ಯಾಂಕ್ ಶಾಖಾದಿಕಾರಿ ಸತೀಶ ಶೆಟ್ಟಿ, ಪೂರ್ವಾಧ್ಯಕ್ಷ ಜೇಸಿ ಪ್ರಸಾದ ಪ್ರಭು,ಕಾರ್ಯದರ್ಶಿ ಹರೀಶ್ ಶೇಟ್ ಮುಂತಾದವರು ಉಪಸ್ಥಿತರಿದ್ದರು

ಈ ಸಂಧರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಸಿ.ಎಂ.ಮ್ಯಾಥ್ಯೂ ಹಾಗೂ ಹಿರಿಯ ಉದ್ಯಮಿಗಳಾದ ನಾಗೇಶ ಮೇಸ್ತರವರನ್ನು ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ಶ್ರೀಕಾಂತ ಕಾಮತ್ ಸ್ವಾಗತಿಸಿದರು.ಗಿರೀಶ್ ಮೇಸ್ತ ಕಾರ್ಯಕ್ರಮ ನಿರೂಪಿಸಿದರು, ಚಂದ್ರ ಕೊಠಾರಿ ವಂದಿಸಿದರು.

Leave a Reply