Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ ಪುರಸಭೆ ಯುಜಿಡಿ ಭೂ ಖರೀದಿ ಅವ್ಯವಹಾರ: ತನಿಕೆಗೆ ಸಾಮಾನ್ಯ ಸಭೆಯಲ್ಲಿ ಪರ-ವಿರೋಧ ಅಭಿಪ್ರಾಯ
    ಊರ್ಮನೆ ಸಮಾಚಾರ

    ಕುಂದಾಪುರ ಪುರಸಭೆ ಯುಜಿಡಿ ಭೂ ಖರೀದಿ ಅವ್ಯವಹಾರ: ತನಿಕೆಗೆ ಸಾಮಾನ್ಯ ಸಭೆಯಲ್ಲಿ ಪರ-ವಿರೋಧ ಅಭಿಪ್ರಾಯ

    Updated:29/09/2021No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ಯುಜಿಡಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದರೆ ನನ್ನ ತನಿಖೆಗೆ ಬೆಂಬಲವಿದೆ. ತನಿಖೆ ಯಾರಿಂದ ಆಗಬೇಕು ಅನ್ನೊದನ್ನ ಸಭೆ ನಿರ್ಧರಿಸಲಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

    Click Here

    Call us

    Click Here

    ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಅವರು ಯುಜಿಡಿ ಕಾಮಗಾರಿ ನಿಮಿತ್ತ ಭೂಮಿ ವಿಕ್ರಯದಲ್ಲಿ ಅವ್ಯವಹಾರ ಆಗಿದೆ ಎಂದು ಸದಸ್ಯ ಗಿರೀಶ್ ದೇವಾಡಿಗ ಮಾಡಿದ ಆರೋಪದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ನೀವು ಏನೇ ಹೇಳುವುದಿದ್ದರೂ ಬರವಣಿಗೆ ಮೂಲಕ ಕೊಡಿ ಎಂದು ಸೂಚಿಸಿದರು.

    ಭೂಮಿ ವಿಕ್ರಯ ಬಗ್ಗೆ ಹಿಂದಿನ ಸಭೆಯಲ್ಲಿ ತನಿಖೆಗೆ ಸರ್ವಾನುಮತದ ನಿರ್ಣಯ ಮಾಡಲಾಗಿದೆ ಎಂದು ಬರೆಯಲಾಗಿದ್ದು, ಅದಕ್ಕೆ ವಿರೋಧವಿದೆ ಎಂದು ಹೇಳಿದರು ಸರ್ವಾನುಮತ ನಿರ್ಣಯ ಸರಿಯಲ್ಲ. ವಿರೋಧದ ಬಗ್ಗೆ ಪತ್ರ ಕೊಟ್ಟಿದ್ದು, ಸರ್ವಾನು ಮತ ಬದಲು ಬಹುಮತ ನಿರ್ಣಯ ಎಂದು ತಿದ್ದುಪಡಿ ಮಾಡುವಂತೆ ಸದಸ್ಯ ಚಂದ್ರಶೇಖರ ಖಾರ್ವಿ ಒತ್ತಾಯಿಸಿದ್ದು, ಇದಕ್ಕೆ ಕೋಡಿ ಸದಸ್ಯ ಅಶ್ಪಕ್ ಖಾರ್ವಿ ಬೆಂಬಲಿಸಿದರು.

    ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ ಭೂ ಅವ್ಯವಹಾರ ತನಿಖೆಗೆ ನಿಮ್ಮ ಬೆಂಬಲವಿಲ್ವಾ ಎಂದು ಪ್ರಶ್ನಿಸಿದರು. ತನಿಖೆಗೆ ನಮ್ಮ ಬೆಂಬಲವಿದೆ ಆದರೆ ಸರ್ವಾನುಮತ ನಿರ್ಣಯಕ್ಕೆ ಬೆಂಬಲವಿಲ್ಲ ಎಂದು ಚಂದ್ರಶೇಖರ ಖಾರ್ವಿ ಹೇಳಿದರು. ಚರ್ಚೆ ನಡೆದು ನಿರ್ಣಯ ಮಾಡುವಾಗ ವಿರೋಧ ಪಕ್ಷದ ಸದಸ್ಯರು ಮಾತೇ ಆಡಿರಲಿಲ್ಲ. ಹಾಗಾಗಿ ಅದು ಸರ್ವಾನುಮತ ನಿರ್ಣಯ ಆಗುತ್ತದೆ ಎಂದು ಆಡಳಿತ ಸದಸ್ಯರು ಹೇಳಿದ್ದು, ಸಭೆಯಲ್ಲಿ ಮಾತಿನ ಗದ್ದಲಕೆ ಕಾರಣವಾಯಿತು.

    ಹಾಲಾಡಿ ಸದಸ್ಯರ ಕೂರಿಸಿ, ಅವ್ಯವಹಾರ ತನಿಖೆಗೆ ಯಾರ ವಿರೋಧವಿದೆ ಎಂದು ಪ್ರಶ್ನಿಸಿದ್ದು, ಚಂದ್ರಶೇಖರ ಮತ್ತು ಅಶ್ಪಕ್ ತನಿಖೆಗೆ ಸಮ್ಮತವಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದು, ಸರ್ವಾನುಮತದ ಬದಲು ಬಹುಮತದಿಂದ ತೀರ್ಮಾನ ಎಂದು ಲಾಗ್ ಪುಸ್ತಕದಲ್ಲಿ ಬರೆಯಲು ಸೂಚಿಸಿದರು. ವಿರೋಧ ಪಕ್ಷದ ಸದಸ್ಯ ಶ್ರೀಧರ ಶೇರೆಗಾರ್ ಮಾತನಾಡಿ, ಬಡವರ ತೆರಿಗೆ ದುಡ್ಡು ಪೋಲಾಗಬಾರದು ಭೂಮಿ ಅವ್ಯವಹಾರದ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದು, ಭೂವ್ಯವಹಾರ ತನಿಖೆ ವಿಷಯದಲ್ಲಿ ವಿರೋಧಿ ಸದಸ್ಯರಲ್ಲಿ ಒಮ್ಮತ ಮೂಡಲಿಲ್ಲ.

    Click here

    Click here

    Click here

    Call us

    Call us

    ನಾಮ ನಿರ್ದೇಶಕ ಸದಸ್ಯರಿಗೆ ಸಭೆಯಲ್ಲಿ ಮಾತನಾಡುವುದಕ್ಕೆ ಅವಕಾಶವಿದೆಯಾ, ಅವರ ಹಕ್ಕುಗಳೇನು ಎಂದು ಚಂದ್ರಶೇಖರ ಖಾರ್ವಿ ಪ್ರಶ್ನಿಸಿದ್ದು ನಾಮನಿರ್ದೇಶಕ ಸದಸ್ಯರ ಕೆರಳಿಸಿತು. ಹಿರಿಯ ಸದಸ್ಯ ಮೋಹನದಾಸ ಶೆಣೈ ನಾಮನಿರ್ದೇಶಕ ಸದಸ್ಯರಿಗೆ ವೋಟಿನ ಹಕ್ಕು ಬಿಟ್ಟು ಸಭೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಏನೆಲ್ಲಾ ಹಕ್ಕಿದೆಯೋ ಅವೆಲ್ಲಾ ಅನ್ವಯವಾಗಿತ್ತದೆ ಎಂದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ನಾಮನಿರ್ದೇಶಕ ಸದಸ್ಯರ ಹಕ್ಕುಗಳ ಬಗ್ಗೆ ಓದಿ ಹೇಳಿದ ನಂತರ ಸಭೆ ಮುಂದುವರಿಯಿತು.

    ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

    ಕುಂದಾಪುರ ರಿಂಗ್ ರಸ್ತೆಯು 25 ಕೋಟಿ ಅನುದಾನದಲ್ಲಿ ಸರ್ವಋತು ರಸ್ತೆಯಾಗಿ ಅಭಿವೃದ್ಧಿ ಹೊಂದಲಿದೆ ಎಂದ ಶಾಸಕ ಹಾಲಾಡಿ ಅವರ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಮೇಜುತಟ್ಟಿ ಸ್ವಾಗತಿಸಿದರು. ವಿರೋಧ ಸದಸ್ಯ ಚಂದ್ರಶೇಖರ ಖಾರ್ವಿ ಅವರು ಮಾತನಾಡಿ, ವಿಧಾನಸಭೆಯಲ್ಲಿ ಚುಕ್ಕಿ ಪ್ರಶ್ನೆಯಲ್ಲಿ ಯಾವುದೇ ಅನುದಾನ ಇಲ್ಲ ಎಂದು ಹೇಳಿದ್ದಾರಲ್ಲ ಎಂದು ಮರುಪ್ರಶ್ನೆ ಹಾಕಿದರು. ಇದಕ್ಕೆ ಹಾಲಾಡಿ ಅವರು ಅನುದಾನ ದೊರೆತಿರುವ ಬಗ್ಗೆ ಸರ್ಕಾರಿ ಆದೇಶ ಪ್ರತಿ ತೋರಿಸಿದರು. ಕೋಡಿ ಸರ್ವಋತು ರಸ್ತೆಗೆ 5, ಕೋಟಿ, ಚರ್ಚ್‌ರಸ್ತೆ, ಪೆರ್ರಿ ರಸ್ತೆ, ಖಾರ್ವಿಕೇರಿ ರಸ್ತೆ ಸರ್ವಋತು ರಸ್ತೆಗೆ ಅನುದಾನ ಮಂಜೂರಾಗಿದ್ದು, ಶಾಸಕನಾಗಿ ಇವೆಷ್ಟು ನನ್ನಿಂದ ಸಾಧ್ಯ. ನಿಮ್ಮ ಎಲ್ಲಾ ಬೇಡಿಕೆ ಈಡೇರಿಸಲು ನಾನು ಸಿಎಂ ಆದಮೇಲೆ ನೋಡುವ ಎಂದರು. ಅದಕ್ಕೆ ಸಭೆಯಲ್ಲಿ ನೀವಿನ್ನು ಮಂತ್ರಿಯೇ ಆಗಿಲ್ವಲಾ ಎಂದು ಕಾಲೆಳೆದರೆ, ಸದಸ್ಯ ಶ್ರೀಧರ ಶೇರೆಗಾರ್ ಮಂತ್ರಿಯಾಗದೆ ಸಿಎಂ ಆಗಿದ್ವಾರೆ ಎಂದು ಶಾಸಕರ ರಕ್ಷಣೆಗೆ ಬಂದರು. ಹಾಲಾಡಿ ಸಿಎಂ ಆದರೆ ನಮ್ಮೂರಿಗೆ ಹೆಮ್ಮೆಯೇ ಆದರೆ ಇದೂವರಗೆ ಕುಂದಾಪುರಕ್ಕೆ ಮಂತ್ರಿಸ್ಥಾನ ಸಿಕ್ಕಿಲ್ಲ. ಮಂತ್ರಿಯಾಗಿದ್ದರೆ ನಮ್ಮೂರಿಗೆ ಗೌರವ ಬರುತ್ತಿತ್ತು ಎಂದು ವಿರೋಧ ಸದಸ್ಯರು ಹೇಳಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರದ ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನ ಬಹುಮಾನ ವಿತರಣೆ ಕಾರ್ಯಕ್ರಮ

    20/12/2025

    ವಂಡ್ಸೆ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ

    20/12/2025

    ಕೋಡಿ ಕನ್ಯಾಣ: ಉಂಜಲೋತ್ಸವ ಹೊರೆಕಾಣಿಕೆ ಸಮರ್ಪಣೆ

    20/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರದ ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನ ಬಹುಮಾನ ವಿತರಣೆ ಕಾರ್ಯಕ್ರಮ
    • ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವು
    • ವಂಡ್ಸೆ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ
    • ಆಳ್ವಾಸ್ ಕ್ರಿಸ್ಮಸ್ ಸಂಭ್ರಮಾಚರಣೆ
    • ಸರ್ಕಾರಿ, ಸರ್ಕಾರೇತರ ಸಂಸ್ಥೆಗಳ ದೈನಂದಿನ ಚಟುವಟಿಕೆಯಲ್ಲಿ ಕನ್ನಡ ಭಾಷೆಯ ಬಳಕೆ ಕಡ್ಡಾಯ: ಜಿಲ್ಲಾಧಿಕಾರಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.