Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ರೀಡರ್ ಮೇಲ್: ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆಯಲ್ಲಿ ಮೋಸ
    ರೀಡರ್ ಮೇಲ್

    ರೀಡರ್ ಮೇಲ್: ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆಯಲ್ಲಿ ಮೋಸ

    Updated:25/10/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯ ಸರಕಾರದ ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾಣೆಯ ಕೌನ್ಸಿಲಿಂಗ್‌ನ ಭ್ರಷ್ಟ ನಾಟಕ ನಡೆಯಿತು. ಪರಸ್ಪರ ವರ್ಗಾವಣೆ; ನಗರ ಗ್ರಾಮಾಂತರ ಪ್ರದೇಶ ಬದಲಾವಣೆ; ದಂಪತಿಗಳು ಒಂದೇ ಕಡೆ ಕೆಲಸ ನಿರ್ವಹಿಸುವ ಅವಕಾಶ; ಅನಾರೋಗ್ಯದ ನೆಲೆಯಲ್ಲಿ ವರ್ಗಾವಣೆ; ನೇರವಾಗಿ ಖಾಲಿ ಇರುವ ಸ್ಥಳಕ್ಕೆ ವರ್ಗಾವಣೆ ಹೀಗೆ ಹಲವು ಪ್ರಕಾರಗಳಿವೆ. ಅರ್ಜಿ ಸಲ್ಲಿಸಿದ ನಂತರ ವರ್ಗಾವಣೆಗೆ ಅರ್ಹರಾದವರ ಪಟ್ಟಿ ಪ್ರಕಟಿಸಲಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ. ವರ್ಗಾವಣೆಗೆ ಅರ್ಹರಾದವರ ಪಟ್ಟಿಯಿಂದ ಹಿಡಿದು ಬೆಂಗಳೂರಿನ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕೌನ್ಸಿಲಿಂಗ್ ನಡೆದು ವರ್ಗಾವಣೆಯ ಅಂತಿಮ ಆದೇಶ ಹೊರಡಿಸುವ ವರೆಗೆ ಸಾಕಷ್ಟು ಗೋಲ್‌ಮಾಲ್ ನಡೆದಿದೆ.

    Click Here

    Call us

    Click Here

    ದಂಪತಿಗಳು ಒಂದೇ ತಾಲೂಕಿನ ಒಳಗೆ ದೂರ ದೂರದ ಊರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ವರ್ಗಾವಣೆಗೆ ಅವಕಾಶ ಇದ್ದರೂ ಕೆಲವರಿಗೆ ವರ್ಗಾವಣೆ ನಿರಾಕರಿಸಲಾಗಿದೆ. ಸೇವಾ ಹಿರಿತನಕ್ಕೆ ಬೆಲೆ ಇಲ್ಲ. 10-15 ವರ್ಷ ದೂರದ ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ನಿರ್ವಹಿಸಿದವರಿಗೆ ಹತ್ತಿರದ ನಗರ ಪ್ರದೇಶಕ್ಕೆ ಅವಕಾಶವಿದ್ದರೂ ವರ್ಗಾವಣೆ ನಿರಾಕರಿಸಲಾಗಿದೆ. ವರ್ಗಾವಣೆ ಬಯಸಿದ 5ರಿಂದ 10 ಶೇಕಡಾ ಉಪನ್ಯಾಸಕರಿಗೆ ಮಾತ್ರ ವರ್ಗಾವಣೆ ನೀಡಿದ್ದಾರೆ. ಕೌನ್ಸಿಲಿಂಗ್ ವೇಳೆ ಇಲಾಖಾ ಸಿಬ್ಬಂದಿಗಳು ಉಪನ್ಯಾಸಕರನ್ನು ರಾಕ್ಷಸರಂತೆ ಬೆದರಿಸುತ್ತಿದ್ದರು. ಪ್ರತಿಕ್ರಿಯೆಯ ಬಿಸಿ ಏರಿದಾಗ ಹಠಾತ್ ಕೌನ್ಸಿಲಿಂಗ್ ಕಾರ್ಯ ಸ್ಥಗಿತಗೊಳಿಸುತ್ತಿದ್ದರು. ಮೇಲಧಿಕಾರಿಗಳಿಗೆ ದೂರು ನೀಡಲು ಅವಕಾಶ ಕೇಳಿದರೆ ಬೆದರಿಸಿ ಹೊರಗೆ ತಳ್ಳುತ್ತಿದ್ದರು. ಅದೇ ಮುಂಚಿತವಾಗಿ ಮೇಜಿನಡಿಯಿಂದ ಹಣ ನೀಡಿ ಒಳ ಒಪ್ಪಂದ ಮಾಡಿಕೊಂಡವರಿಗೆ ವರ್ಗಾವಣೆ ಸುಲಭ. ಸೀದಾಸಾದಾ ಆಗಿದೆ. ಮೇಲಾಧಿಕಾರಿಗಳಿಗೆ ವರ್ಗಾವಣೆ ನಿರಾಕರಿಸಲು ಹಲವು ಕಾನೂನಿನ ಅಸ್ತ್ರವಿದೆ. ಅದೇ ವರ್ಗಾವಣೆ ನೀಡಲು ಒಂದೇ ಅಸ್ತ್ರ ! ಲಂಚಾಸ್ತ್ರ! ಇದಕ್ಕ ಯಾವುದೇ ಕಾನೂನು ಅಡ್ಡಿಯಾಗುವುದಿಲ್ಲ. ಒಟ್ಟಿನಲ್ಲಿ ಪದವಿಪೂರ್ವ ಇಲಾಖೆಯಲ್ಲಿ ಪಠ್ಯಪುಸ್ತಕದ ತಯಾರಿ, ಪ್ರಶ್ನೆ ಪತ್ರಿಕೆಯ ತಯಾರಿ, ಉತ್ತರ ಪತ್ರಿಕೆ ತಿದ್ದುವುದು, ಉಪನ್ಯಾಸಕರ ಭಡ್ತಿ, ವರ್ಗಾವಣೆ ಎಲ್ಲಾ ಹಂತದಲ್ಲೂ ಭ್ರಷ್ಟಾಸುರ ತಾಂಡವವಾಡುತ್ತಿರುವುದು ನಾಚಿಕೆಗೇಡು.

    -ನೊಂದ ಉಪನ್ಯಾಸಕರು
    ಉಡುಪಿ ಜಿಲ್ಲೆ

    Mail Readers mail teacher
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರಾಷ್ಟ್ರೀಯವಾದ ಮತ್ತು ರಾಜಕೀಯ – ದೇಶಕ್ಕಾಗಿ ನಾನೇನು ಮಾಡಿದ್ದೇನೆಂಬ ಚಿಂತನೆ ನಮ್ಮೊಳಗಿರಲಿ

    14/08/2021

    ನಾವಡರ ‘ಸೇನಾನುಭವ’ ಪುಸ್ತಕ – ಇದು ಸೈನಿಕರೊಬ್ಬರ ಅನುಭವದ ಸಾರ

    05/04/2021

    ಕುಂದಾಪುರ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಖಾಲಿ

    23/09/2015
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಕಟಪಾಡಿ ಓವರ್ ಪಾಸ್ ಕಾಮಗಾರಿ ಹಿನ್ನೆಲೆ, ವಾಹನಗಳ ಸುಗಮ ಸಂಚಾರಕ್ಕೆ ಮಾರ್ಗ ಕಲ್ಪಿಸಿ: ಜಿಲ್ಲಾಧಿಕಾರಿ
    • ನಾವುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ
    • ಧನ್ವಿ ಮರವಂತೆ ಅವರಿಗೆ ರಾಜ್ಯಮಟ್ಟದ ಬಾಲಗೌರವ ಪ್ರಶಸ್ತಿ ಪ್ರದಾನ
    • ಗಂಗೊಳ್ಳಿ: ಎಸ್.ವಿ. ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ 56ನೇ ವಾರ್ಷಿಕೋತ್ಸವ ಸಮಾರಂಭ
    • ರಂಗಭೂಮಿಯಿಂದ ಸಮಾಜದ ಸವಾಲುಗಳನ್ನು ಎದುರಿಸುವ ಶಿಕ್ಷಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.