ಕುಂದಾಪುರ: ಮೂಡುಬಿದ್ರೆ ಆಳ್ವಾಸ್ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿನಿ ಕೊಕ್ಕರ್ಣೆಯ ಶುಭಾಲಕ್ಷ್ಮೀ ಅಂತರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುವುದಕ್ಕಾಗಿ ಇತ್ತೀಚೆಗೆ ಮೊಗವೀರಪೇಟೆಯ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಸಮಾರಂಭದಲ್ಲಿ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್ರವರು ಸನ್ಮಾನಿಸಿ ಗೌರವಿಸಿದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆ.ಬಾಬು ಗಾಂಧೀನಗರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೊಗವೀರ ಪೇಟೆ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ಆನಂದ ಮರಕಾಲ ಬೆಂಗಳೂರಿನ ಉದ್ಯಮಿ ಗುಣಕರ್, ಉಪಾಧ್ಯಕ್ಷರಾದ ದೇವಕಿ ಎಸ್. ಕೋಟ್ಯಾನ್, ಸದಸ್ಯರಾದ ರಘುವೀರ ಕಿಣಿ, ರಾಘವೇಂದ್ರ ಕುಂದರ್, ಶ್ರೀಮತಿ ನಿರ್ಮಲ ಜಯಪ್ರಕಾಶ್ ಹೆಗ್ಡೆ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಂತ ಶುಭ ಹಾರೈಸಿದರು.
ಚಂದ್ರಹಾಸ ಸ್ವಾಗಿಸಿದರೆ, ಪ್ರೀತೇಶ್ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಅಮೀನ್ ವಂದಿಸಿದರು.