ಕುಂದಾಪುರದ ಶ್ರೀ ಬಗಳಾಂಬ ಚಂಡೆ ಬಳಗದ ವ್ಯವಸ್ಥಾಪಕ, ಖ್ಯಾತ ಚಂಡೆ ವಾದಕ ಮಿಥುನ್ ಸುವರ್ಣ ಅವರ ಪ್ರತಿಭೆ, ಕಲಾ ಸೇವೆಯನ್ನು ಗುರುತಿಸಿ ಕುಂದಾಪುರದ ಫ್ಯಾಶನ್ ಕೋರ್ಟ್ ವತಿಯಿಂದ ಸಂಮಾನಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಮಿ ಕೆ. ಎಲ್. ಮಧ್ಯಸ್ಥ, ಬೆಂಗಳೂರಿನ ಉದ್ಯಮಿ ನಾಗರಾಜ ಮಧ್ಯಸ್ಥ, ಕುಂಭಾಸಿ ಅನಂತ ಪದ್ಮನಾಭ ಉಪಧ್ಯಾಯ, ಫ್ಯಾಶನ್ ಕೋರ್ಟ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಕೆ. ಕಾರ್ತಿಕೇಯ ಮಧ್ಯಸ್ಥ, ನಿರ್ದೇಶಕರಾದ ಪ್ರೇಮಲತಾ ಮಧ್ಯಸ್ಥ, ಶಿಲ್ಪಾ ಕೆ. ಮಧ್ಯಸ್ಥ, ನಿವೃತ್ತ ಶಿಕ್ಷಕ ಗುಂಡ್ಮಿ ರಾಮಚಂದ್ರ ಐತಾಳ್, ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ್, ಆಶಾ ಉಪಧ್ಯಾಯ, ರಂಜಿತ್ ಐತಾಳ್, ಕುಂದಾಪುರದ ಶ್ರೀ ಬಗಳಾಂಬ ಚಂಡೆ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಸುನಿಲ್ ಹೆಚ್. ಜಿ. ಬೈಂದೂರು
ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.









