Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಜೀರ್ಣೋದ್ಧಾರ ಕಾರ್ಯದಲ್ಲಿ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟುವಿನ ಶ್ರೀ ಕಾಲಭೈರವ ದೇವಸ್ಥಾನ
    ಊರ್ಮನೆ ಸಮಾಚಾರ

    ಜೀರ್ಣೋದ್ಧಾರ ಕಾರ್ಯದಲ್ಲಿ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟುವಿನ ಶ್ರೀ ಕಾಲಭೈರವ ದೇವಸ್ಥಾನ

    Updated:23/11/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ.
    ಕುಂದಾಪುರ:
    ಕರಾವಳಿಯಿಂದ ಕೊಡಚಾದ್ರಿಯ ತಪ್ಪಲಿನ ತನಕದ ಪುಣ್ಯಭೂಮಿಯಲ್ಲಿ, ಆಸ್ತಿಕ ಬಂಧುಗಳ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ದೈವೀಶಕ್ತಿಗಳು ಅನೇಕಾನೇಕ. ಹೀಗೆ ಸಮೃದ್ಧ ಕೃಷಿ ಭೂಮಿಯ ಹಸಿರು ಹೊದಿಕೆ ನಡುವೆ ನೆಲೆನಿಂತು, ಭಕ್ತವರ್ಗವನ್ನು ಪೊರೆಯುತ್ತಿರುವ ಕಾರಣಿಕ ಸನ್ನಿಧಿಗಳಲ್ಲೊಂದು ಶ್ರೀ ಕ್ಷೇತ್ರ ತೆಂಕಬೆಟ್ಟುವಿನ ಶ್ರೀ ಕಾಲಭೈರವ ದೇವಸ್ಥಾನ.

    Click Here

    Call us

    Click Here

    ಸನಾತನ ಹಿಂದೂ ಸಂಸ್ಕೃತಿಯ ಪ್ರತಿಪಾದರಾದ ನಾಥಪಂಥದ ಪರಮಪೂಜ್ಯ ಗುರು ಶ್ರೀ ಮತ್ಸೇಂದ್ರನಾಥರು ಹಾಗೂ ಶ್ರೀ ಗೋರಕ್ಷನಾಥರ ಆಶೀರ್ವಾದದೊಂದಿಗೆ ನಾಥಪಂಥದ ಗುರುಗಳಿಂದಲೇ ಸುಮಾರು 800 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ಸನ್ನಿಧಿಯೇ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನ. ಬೈಂದೂರು ತಾಲೂಕು ಕಂಬದಕೋಣೆ ಗ್ರಾಮದ ಹಳಗೇರಿಯಲ್ಲಿ, ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹಾಗೂ ನಾಗೂರು ಪೇಟೆಯಿಂದ 1 ಕಿ.ಮೀ ದೂರದಲ್ಲಿ ಶ್ರೀ ಕಾಲಭೈರವನ ಸಾನಿಧ್ಯವಿದೆ.

    • default
    • default

    ಶ್ರೀ ಕಾಲಭೈರವ ದೇವಸ್ಥಾನವು ದಕ್ಷಿಣ ಭಾರತದ ನಾಥ ಪಂಥದ ಮೂಲ ಮಠವಾದ ಕದ್ರಿ ಜೋಗಿ ಮಠ, ಯಡಮೊಗೆಯ ಶ್ರೀ ಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವರಿ ಮಠಕ್ಕೆ ಸಂಬಂಧಿಸಿದ್ದಾಗಿದ್ದು, ಐತಿಹ್ಯವುಳ್ಳ ಕ್ಷೇತ್ರವಾಗಿದೆ. ಇಲ್ಲಿನ ಭೂನಾಗ ಸಾನಿಧ್ಯದಲ್ಲಿ ಅತ್ಯಂತ ವಿರಳ ಹಾಗೂ ಪ್ರಾಚಿನವೂ ಆದ ಚಿತ್ರಕೂಟ ಮತ್ತು ಶಿರಸಿ ಶ್ರೀ ಮಾರಿಕಾಂಬಾ ಹಾಗೂ ಭೂತರಾಯನ ಸಾನಿಧ್ಯವನ್ನೂ ಒಳಗೊಂಡಿದೆ.

    ಪೌರಾಣಿಕ ಹಿನ್ನೆಲೆ:
    ಸ್ಕಂದ ಪುರಾಣದಲ್ಲಿ ದಾಖಲಾದಂತೆ ಪರಮೇಶ್ವರನ ಕೋಪಾಗ್ನಿಯಿಂದ ಶ್ರೀ ಕಾಲಭೈರವ ಸ್ವಾಮಿಯ ಜನನವಾಯಿತೆಂದು ತಿಳಿದುಬಂದಿರುತ್ತದೆ. ಆದಿಯಲ್ಲಿ ಕಾಶಿ ಪುಣ್ಯಕ್ಷೇತ್ರದ ರಕ್ಷಣೆಗಾಗಿ ಅಷ್ಟದಿಕ್ಕುಗಳಲ್ಲಿ ಕಾಶಿ ಶ್ರೀ ವಿಶ್ವನಾಥನೇ, ಶ್ರೀ ಕಾಲಭೈರವ ದೇವರನ್ನು ನೇಮಿಸಿದ್ದನೆಂದು, ಹೀಗೆ ಶ್ರೀ ಕಾಲಭೈರವ ಸ್ವಾಮಿ ಭಕ್ತರನ್ನು ಪೊರೆಯುತ್ತಾ ನೆಲೆನಿಂತನೆಂದು ಪುರಾಣಗಳಿಂದ ತಿಳಿದು ಬರುತ್ತದೆ.

    ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾರಾಷ್ಟ್ರದ ತ್ರಯಂಬಕೇಶ್ವರದಲ್ಲಿ ಜರುಗುವ ಪವಿತ್ರ ಪೂರ್ಣಕುಂಭ ಮೇಳದಿಂದ ಅನೇಕ ಸಾಧುಸಂತರು, ಯೋಗಿಗಳು, ಮಹಂತರನ್ನೊಳಗೊಂಡು ಹೊರಡುವ ಭಾರಪಂಥ್ ಝಂಡಿಯಾತ್ರೆಯು ದಕ್ಷಿಣದ ಶ್ರೀ ಕದ್ರಿ ಕ್ಷೇತ್ರಕ್ಕೆ ರಾಜ ಪಟ್ಟಾಭಿಷೇಕಕ್ಕಾಗಿ ಪಾತ್ರದೇವತೆಯನ್ನು ಹಿಡಿದು ಸಾಗಿ ಬರುತ್ತದೆ. ಹೀಗೆ ಸುಮಾರು 800 ವರ್ಷಗಳ ಹಿಂದೆ ಕದ್ರಿ ಕ್ಷೇತ್ರಕ್ಕೆ ಬಂದ ಯೋಗಿಗಳೇ, ಹಳಗೇರಿ ತೆಂಕಬೆಟ್ಟು ಎಂಬಲ್ಲಿ ಶ್ರೀ ಕಾಲಭೈರವ ದೇವಸ್ಥಾನವನ್ನು ಸ್ಥಾಪಿಸಿ, ನಾಥಪಂಥದ ಅನುಯಾಯಿಗಳಾದ ಜೋಗಿ ಸಮಾಜ ಭಾಂದವರಿಗೆ ಪೂಜಾ ದೀಕ್ಷೆ ನೀಡಿದರೆಂಬುದು ಐತಿಹ್ಯ. ಅಂದಿನಿಂದಲೂ ಹಳಗೇರಿ – ತೆಂಕಬೆಟ್ಟುವಿನಲ್ಲಿ ಭಕ್ತರ ಕಷ್ಟನಷ್ಟಗಳನ್ನು ದೂರಿಕರಿಸಿ, “ಓಂ ನಮಃ ಶ್ರೀ ಕಾಲಭೈರವಾಯ ನಮಃ” ಎಂದು ಭಜಿಸುವವರ ಇಷ್ಟಾರ್ಥಗಳನ್ನು ಅನುಗ್ರಹಿಸುವ ಪ್ರಭುವಾಗಿ ಕಾಲಭೈರವ ಸ್ವಾಮಿ ನೆಲೆನಿಂತಿದ್ದಾನೆ.

    Click here

    Click here

    Click here

    Call us

    Call us

    ಸ್ವಾಮಿಯ ಸನ್ನಿಧಿಯಲ್ಲಿ ಪ್ರತಿನಿತ್ಯ ಪೂಜಾ ಪುನಸ್ಕಾರಗಳು, ವರ್ಷಂಪ್ರತಿ ಶ್ರೀ ದೇವರ ಉತ್ಸವ ಮೂರ್ತಿಯ ಮೆರವಣಿಗೆ (ದೇವರು ಕಟ್ಟು) ಸೇವೆಯನ್ನು ಶ್ರೀ ಕ್ಷೇತ್ರದ ಸುತ್ತಮುತ್ತಲಿನ 8 ಊರುಗಳಿಗೆ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಜೋಗಿ ಕುಟುಂಬಸ್ಥರು ಸಾಂಗವಾಗಿ ನಡೆಸಿಕೊಂಡು ಬಂದಿದ್ದಾರೆ. ಸಂಕ್ರಾಂತಿ ಮತ್ತು ಅಮಾವಾಸ್ಯೆ ಪೂಜೆ, ಉಂಡಲಗಾಯಿ ಸೇವೆ ಹಾಗೂ ವಾರ್ಷಿಕೋತ್ಸವನ್ನು ಯಥಾವತ್ತಾಗಿ ನಡೆಸಲಾಗುತ್ತಿದೆ.

    ಅಂತಿಮ ಹಂತದಲ್ಲಿ ಜೀರ್ಣೋದ್ಧಾರ ಕಾರ್ಯ:
    ದೇವಸ್ಥಾನವು ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡು ಅಷ್ಟಮಂಗಳ ಪ್ರಶ್ನೆಯಿಟ್ಟು, ಭಾದದೋಷಗಳಿಗೆ ತಂತ್ರಿವರೇಣ್ಯರ ಮಾರ್ಗದರ್ಶನದಂತೆ ಪ್ರಾಯಶ್ಚಿತಾದಿಗಳನ್ನು ನೆರವೇರಿಸಿ, ವಾಸ್ತು ತಜ್ಞರ ಸಲಹೆಯಂತೆ ಸಂಪೂರ್ಣ ಶಿಲಾಮಯ ತಾಮ್ರದ ಹೊದಿಕೆಯ ನೂತನ ದೇವಾಲಯವನ್ನು ನಿರ್ಮಿಸುವ ನಿರ್ಧಾರವನ್ನು ಜೀರ್ಣೋದ್ಧಾರ ಸಮಿತಿ ಕೈಗೊಂಡಿತು. ಖ್ಯಾತ ವಾಸ್ತುಶಿಲ್ಪಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರು ರೂ. 3 ಕೋಟಿ ವೆಚ್ಚದ ದೇವಸ್ಥಾನ ಪುನರ್ ನಿರ್ಮಾಣದ ಯೋಜನೆಗೆ ನೀಲನಕ್ಷೆ ಸಿದ್ಧಪಡಿಸಿಕೊಟ್ಟರು. ಅದರಂತೆ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಂಡು, ಕಾಮಗಾರಿ ಭರದಿಂದ ಸಾಗುತ್ತಿದೆ.

    ಜನವರಿಯಲ್ಲಿ ನವೀಕೃತ ಶಿಲಾದೇಗುಲ ಲೋಕಾರ್ಪಣೆ:
    2023ನೇ ಜನವರಿ 26ರಿಂದ ಮೊದಲ್ಗೊಂಡು ಜನವರಿ 30ರ ತನಕ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟುವಿನಲ್ಲಿ ನವೀಕೃತ ಶಿಲಾದೇಗುಲ ಲೋಕಾರ್ಪಣೆ – ಪುನರ್ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮಕಲಶೋತ್ಸವ – ಶ್ರೀ ನಾಗದೇವರಿಗೆ ಢಕ್ಕೆ ಮಂಡಲೋತ್ಸವ ಸಾಮೂಹಿಕ ಜೋಗಿ ದೀಕ್ಷಾ ಕಾರ್ಯಕ್ರಮ, ಮಹಾ ಅನ್ನಸಂತರ್ಪಣೆ – ಧಾರ್ಮಿಕ, ಸಾಂಸ್ಕೃತಿಕ ವೈಭವೋತ್ಸವಗಳು ಗುರು ಹಿರಿಯರ ಮಾರ್ಗದರ್ಶನದಲ್ಲಿ, ಭಕ್ತಾಭಿಮಾನಿಗಳ ಸಹಕಾರದೊಂದಿಗೆ ನಡೆಸಲು ನಿಶ್ಚಯಿಸಲಾಗಿದೆ.

    ತನು – ಮನ – ಧನ ಸಹಕಾರದ ಕೋರಿಕೆ:
    ಸದ್ರಿ ದೇವಸ್ಥಾನಕ್ಕೆ ಮೂಲಸ್ವರೂಪದ ಆರ್ಥಿಕತೆ ಇಲ್ಲದಿರುವುದರಿಂದ ಜೀರ್ಣೋದ್ಧಾರ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಭಕ್ತರ ತನು – ಮನ – ಧನ ಅಗತ್ಯವಿದೆ. ದೇಗುಲದ ಎಲ್ಲಾ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಜೊತೆಗೆ ಆರ್ಥಿಕ ನೆರವನ್ನು ನೀಡಿ ದೇವರ ಕೃಪೆ ಪಾತ್ರವಾಗುವಂತೆ ಶ್ರೀ ಕಾಲಭೈರವ ಸೇವಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಕೋರಿಕೊಂಡಿದೆ.

    ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಲು “ಜೀಣೋದ್ಧಾರ ಸಮಿತಿ, ಶ್ರೀ ಕಾಲಭೈರವ ದೇವಸ್ಥಾನ” ಹಳಗೇರಿ ತೆಂಕಬೆಟ್ಟು ಕಂಬದಕೋಣೆ – 576219 ಇದರ ಕೆನರಾ ಬ್ಯಾಂಕ್ ಹಣ ಸಂದಾಯ ಮಾಡಬಹುದಾಗಿದೆ.

    ಕೆನರಾ ಬ್ಯಾಂಕ್ ನಾಗೂರು ಶಾಖೆ
    ಖಾತೆ ನಂ 02902200017733
    IFSC : CNRB0010290

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊ : 9845618331, 7411117213, 9964380570

    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

    17/12/2025

    ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ

    17/12/2025

    ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ

    17/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.