ಕೊಲ್ಲೂರಿನಲ್ಲಿ ಸಿಎಂ ಜೊತೆಗೆ ನಟ ರಿಷಬ್ ಶೆಟ್ಟಿ. ರಾಜಕೀಯಕ್ಕೆ ಬರಲ್ಲ, ಸದ್ಯ ಕಾಂತರ ಬರವಣಿಗೆಯಲ್ಲಿ ಬ್ಯೂಸಿ ಎಂದ ನಟ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡುವ ವೇಳೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರೂ ಕಾಣಿಸಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಶೆಟ್ಟಿ ರಾಜಕೀಯಕ್ಕೆ ಬರುತ್ತಾರಾ ಎಂಬ ಚರ್ಚೆ ಎದ್ದಿದೆ.

Call us

Click Here

ಇದಕ್ಕೆ ಪ್ರತಿಕ್ರಿಯಿಸಿರುವ ನಟ ರಿಷಬ್ ಶೆಟ್ಟಿ, ಕೊಲ್ಲೂರು ದೇವಸ್ಥಾನಕ್ಕೆ ಹೋಗಿದ್ದಾಗ ಮುಖ್ಯಮಂತ್ರಿ ಅವರ ಭೇಟಿ ಆಯಿತು. ನನಗೆ ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ಸದ್ಯ ಕಾಂತರದ ಬರವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಿಷಬ್ ಅವರದ್ದು ಆಕಸ್ಮಿಕ ಭೇಟಿಯಾಷ್ಟೇ. ಆದರೆ ಅವರ ಸಿದ್ಧಾಂತ ಹಾಗೂ ವಿಚಾರಧಾರೆಗಳು ನಮ್ಮ ಪಕ್ಷಕ್ಕೆ ಹತ್ತಿರವಾಗಿವುದರಿಂದ ಆಗಾಗ ಅವರು ಬಹಿರಂಗವಾಗಿ ನಮ್ಮ ಪಕ್ಷದ ಪರ ಪ್ರತಿಪಾದನೆ ಮಾಡುತ್ತಿದ್ದಾರೆ. ನಟ ಸುದೀಪ್ ಅವರಂತೆ ರಿಷಬ್ ಶೆಟ್ಟಿಯವರನ್ನು ಪ್ರಚಾರಕ್ಕೆ ತೊಡಗಿಸಿಕೊಳ್ಳುವ ಬಗ್ಗೆ ಈಗ ಯಾವುದೇ ಯೋಚನೆ ಇಲ್ಲ, ಅದು ದೇವರ ಇಚ್ಛೆ ಎಂದಿದ್ದಾರೆ.

ಒಟ್ಟಿನಲ್ಲಿ ಕಾಂತರದ ಗೆಲುವಿನ ನಂತರ ರಿಷಬ್ ಶೆಟ್ಟಿ ಅವರ ಪ್ರತಿ ನಡೆಯ ಬಗ್ಗೆಯೂ ಸುದ್ದಿಯಾಗುತ್ತಿದೆ. ರಾಜಕೀಯಕ್ಕೆ ಬರೋದಿಲ್ಲ ಎಂಬ ಮಾತುಗಳು ಅವರೇ ಪದೇ ಪದೇ ಹೇಳುತ್ತಿದ್ದರೂ ಮತ್ತೆ ಅಲ್ಲಿಗೆ ತಳಕು ಹಾಕಲಾಗುತ್ತಿದೆ.

Leave a Reply