Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಉಳ್ಳೂರು-74: ಪತ್ನಿಯ ವಿವಾಹೇತರ ಸಂಬಂಧ. ಮೊಸದ ಮದುವೆ ಬಗ್ಗೆ ಪತಿಯಿಂದ ದೂರು ದಾಖಲು
    ಅಪಘಾತ-ಅಪರಾಧ ಸುದ್ದಿ

    ಉಳ್ಳೂರು-74: ಪತ್ನಿಯ ವಿವಾಹೇತರ ಸಂಬಂಧ. ಮೊಸದ ಮದುವೆ ಬಗ್ಗೆ ಪತಿಯಿಂದ ದೂರು ದಾಖಲು

    Updated:14/07/20231 Comment
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ವಧುವಿಗೆ ಇಷ್ಟವಿಲ್ಲದ ಮದುವೆಯೊಂದು 2 ತಿಂಗಳೋಳಗೆ ಮುರಿದು ಬಿದ್ದಿದೆ. ಮದುವೆಯಾಗಿ ನಾಲ್ಕೇ ದಿನ ಗಂಡನ ಮನೆಯಲ್ಲಿ ವಾಸವಿದ್ದು, ತವರು ಸೇರಿದ್ದ ಪತ್ನಿ, ಆಕೆಯ ಪೋಷಕರು ಹಾಗೂ ಪತ್ನಿ ಪ್ರಿಯಕರನ ವಿರುದ್ಧ ದೂರು ದಾಖಲಾದ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಕ್ತಿಯಲ್ಲಿ ನಡೆದಿದೆ.

    Click Here

    Call us

    Click Here

    ತಾಲೂಕಿನ ಉಳ್ಳೂರು-74 ಗ್ರಾಮದ ಸಂಪಿಗೇಡಿ ನಿವಾಸಿ ಸಂಕೇತ್ ಶೆಟ್ಟಿ ಎಂಬುವವರೊಂದಿಗೆ ಹಾಗೂ ವಡೇರಹೋಬಳಿಯ ಸ್ಪೂರ್ತಿ ಶೆಟ್ಟಿ ಎಂಬವವರ ವಿವಾಹ ಮೇ. 21ರಂದು ನಡೆದಿತ್ತು. ಆದರೆ ಮದುವೆಯ ಬಳಿಕ ಸ್ಪೂರ್ತಿ ಶೆಟ್ಟಿ 4 ದಿನ ಮಾತ್ರ ಗಂಡನ ಮನೆಯಲ್ಲಿ ಇದ್ದು ಬಳಿಕ ಪದೇ ಪದೇ ತವರು ಮನೆಗೆ ಹೋಗುತ್ತಿದ್ದರು. ಈ ಬಗ್ಗೆ ಪತಿ ಸಂಕೇತ್ ಶೆಟ್ಟಿ ಪತ್ನಿಯಲ್ಲಿ ವಿಚಾರಿಸಿದಾಗ ಹೊಸದಾಗಿ ಮದುವೆಯಾಗಿರುವುದರಿಂದ ಹೊಂದಾಣಿಕೆ ಮಾಡಿಕೊಳ್ಳಲು ಸ್ವಲ್ಪ ಸಮಯಬೇಕು ಎಂಬ ಉತ್ತರ ಬಂದಿದೆ. ಇದಕ್ಕೆ ಪತಿಯೂ ಒಪ್ಪಿ ಸುಮ್ಮನಾಗಿದ್ದರು. ಆದರೆ ದಿನ ಕಳೆದಂತೆ ಪತ್ನಿ ಯಾರೊಂದಿಗೋ ಮೊಬೈಲ್ನಲ್ಲಿ ಮಾತನಾಡುತ್ತಿರುವುದು, ವಾಟ್ಸಪ್ ವೀಡಿಯೋ ಕಾಲಿಂಗ್ ಮಾಡುವುದನ್ನು ಹೆಚ್ಚು ಮಾಡಿದ್ದಾಳೆ. ಈ ಬಗ್ಗೆ ಪತಿ ಸಂಕೇತ್ ಶೆಟ್ಟಿ ಮತ್ತೆ ಪ್ರಶ್ನಿಸಿದ್ದಾರೆ. ಈ ವೇಳೆ ನಿನ್ನ ಮದುವೆ ಆಗಲು ಇಷ್ಟವಿರಲಿಲ್ಲ ನಾನು ಮತ್ತು ನವೀನ್ ಎಂಬಾತ ಮದುವೆಯಾಗಲು ಬಯಸಿದ್ದೆವು. ಈ ಹಿಂದೆ ನಾವಿಬ್ಬರೂ ಒಟ್ಟಿಗೆ ಇದ್ದೆವು. ಈ ವಿಷಯ ನಮ್ಮ ಮನೆಯವರಿಗೂ ತಿಳಿದಿದೆ. ನಾನು ಮದುವೆ ಆಗಿದ್ದು ನಿನ್ನೊಂದಿಗೆ ಸಂಸಾರ ಮಾಡಲು ಅಲ್ಲ. ನಾನು ನವೀನ್ ಇವನೊಂದಿಗೆ ಹೋಗುತ್ತೇನೆ ಎಂದು ಸ್ಪೂರ್ತಿ ಶೆಟ್ಟಿ ಹೇಳಿದ್ದಾಳೆ.

    ಈ ಬಗ್ಗೆ ಸಂಕೇತ್ ಶೆಟ್ಟಿ. ಪತ್ನಿಯ ತಂದೆ ತಾಯಿ ಹಾಗೂ ಅವಳ ದೊಡ್ಡಪ್ಪ ಅಶೋಕ ಶೆಟ್ಟಿ ಅವರಲ್ಲಿ ವಿಚಾರಿಸಿದಾಗ, ನವೀನ್ ಹಾಗೂ ಸ್ಪೂರ್ತಿ ಒಟ್ಟಿಗೆ ಇರುವ ವಿಷಯ ನಮಗೆ ಗೊತ್ತು. ಅವನು ನಮ್ಮ ಜಾತಿಯವನು ಅಲ್ಲ ಎಂದು ಮರ್ಯಾದೆಗೆ ಅಂಜಿ ನಾವು ನಿನಗೆ ಮದುವೆ ಮಾಡಿಕೊಟ್ಟಿದ್ದು. ನೀನು ಅವಳು ಹೇಳಿದ ಹಾಗೇ ಕೇಳಿಕೊಂಡು ಇರು. ಇಲ್ಲವಾದರೆ ನೀನು ಅವಳಿಗೆ ಹಿಂಸೆ ಕೊಟ್ಟಿದೆ ಎಂದು ಕಂಪ್ಲೇಟ್ ಮಾಡಿ ನಿನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿರುವುದು ತಿಳಿದುಬಂದಿದೆ.

    ಆ ಬಳಿಕ ಸ್ಪೂರ್ತಿ ಶೆಟ್ಟಿ ಮದುವೆ ಸಂದರ್ಭದಲ್ಲಿ ತನಗೆ ನೀಡಿದ್ದ 10 ಲಕ್ಷ ಮೌಲ್ಯದ ಚಿನ್ನ, ವಜ್ರ ಮುಂತಾದ ಆಭರಣಗಳ ಸಮೇತ ಗಂಡನ ಮನೆ ತೊರೆದಿದ್ದಾರೆ. ಈ ಬಗ್ಗೆ ಸಂಕೇತ್ ಶೆಟ್ಟಿ ಪತ್ನಿ ಸ್ಪೂರ್ತಿ ಶೆಟ್ಟಿ, ಆಕೆಯ ತಂದೆ ಸತೀಶ್ ಶೆಟ್ಟಿ, ತಾಯಿ ಸುಜಾತ ಶೆಟ್ಟಿ ಹಾಗೂ ಸೂರ್ತಿಯ ಪ್ರಿಯಕರ ನವೀನ್ ಮೈಸೂರು ಎಂಬುವವನ ವಿರುದ್ದ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್‌ಗೆ ಚಿನ್ನದ ಪದಕ

    05/12/2025

    ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳಿಗೆ ಕಾರಂತ ಬಾಲ ಪುರಸ್ಕಾರ

    03/12/2025

    ಶಂಕರನಾರಾಯಣ: ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

    28/11/2025

    1 Comment

    1. K N Hegde on 18/07/2023 7:35 am

      Kundapura surroundings had a legacy of behaviours merged with the very blood & culture of the people over there. I was a victim of same story and the real culprit was the poojari of Hattiyangahi siddhivinayak temple during 85 to 91.

      Reply

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d