Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬದುಕಿನಲ್ಲಿ ಪ್ರಾಮಾಣಿಕತೆ, ಯಶಸ್ಸನ್ನು ನಿರ್ಧಾರಿಸುತ್ತದೆ: ಪ್ರಮೋದ ಮಧ್ವರಾಜ್
    alvas nudisiri

    ಬದುಕಿನಲ್ಲಿ ಪ್ರಾಮಾಣಿಕತೆ, ಯಶಸ್ಸನ್ನು ನಿರ್ಧಾರಿಸುತ್ತದೆ: ಪ್ರಮೋದ ಮಧ್ವರಾಜ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ:
    ಪ್ರಾಮಾಣಿಕತೆ ಎಂಬುದು ನಮ್ಮ ನೈತಿಕ ಮತ್ತು ಸಾಮಾಜಿಕ ಬದುಕಿನ ಬಹುಮುಖ್ಯ ಅಂಶ. ಜೀವನದಲ್ಲಿ ಕಷ್ಟ, ವಿಫಲತೆಗಳು ಹಾಗೂ ಆಕಸ್ಮಿಕ ಸಮಸ್ಯೆಗಳು ಬಂದರೂ, ಪ್ರಾಮಾಣಿಕತೆಯ ಹಾದಿಯಲ್ಲಿ ನಡೆದರೆ ಯಶಸ್ಸು ನಮಗೆ ಖಂಡಿತ ಒಲಿಯುತ್ತದೆ ಎಂದು ಮಾಜಿ ಸಚಿವ ಹಾಗೂ ರಾಜ್ ಫಿಶ್ ಮೀಲ್ ಆಂಡ್ ಆಯಿಲ್ ಕಂಪೆನಿಯ ವ್ಯವಸ್ಥಾಪಕ ಪಾಲುದಾರ ಪ್ರಮೋದ ಮಧ್ವರಾಜ್ ನುಡಿದರು.

    Click Here

    Call us

    Click Here

    ಅವರು ಕುವೆಂಪು ಸಭಾಂಗಣದಲ್ಲಿ ನಡೆದ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ನೂತನ ವಿದ್ಯಾರ್ಥಿ ಸ್ಟಾರ್ಟ್‌ಅಫ್ ವೇದಿಕೆ ’ಟ್ರೈಬ್ಲೇಜ್’ನ್ನು ಉದ್ಘಾಟಿಸಿ, ’ಯಶಸ್ವಿ ನಾಯಕತ್ವದ ತಂತ್ರಗಳುʼ ವಿಷಯದ ಕುರಿತು ಮಾತನಾಡಿದರು.

    ನಮ್ಮ ಪರಂಪರೆ, ಸಂಸ್ಕೃತಿ, ಆಚರಣೆ, ಗುರುಹಿರಿಯರು, ಪಾಲಕರು, ಪೋಷಕರನ್ನು ಮರೆತ ದಿನ, ನಮ್ಮ ಅವನತಿ ಪ್ರಾರಂಭವಾಗುತ್ತದೆ. ದುರಾದೃಷ್ಟಾವಷಾತ್ ನಮ್ಮ ಇಂದಿನ ಸಮಾಜ ಭಾರತೀಯ ಭವ್ಯ ಪರಂಪರೆಯನ್ನು ಕಡೆಗಾಣಿಸುತ್ತಾ ಸಾಗಿದೆ. ನಮ್ಮ ಸಂಸ್ಕೃತಿಯ ಭಾಗವಾಗಿದ್ದ ಎರಡು ಕೈಗಳನ್ನು  ಜೋಡಿಸಿ ವಂದಿಸುವ ಸಂಸ್ಕೃತಿ ನಮ್ಮಲ್ಲಿ ಮರೆಯಾಗಿ ವಿದೇಶಗಳಲ್ಲಿ ಆಳವಡಿಸಿಕೊಳ್ಳಲಾಗುತ್ತಿದೆ. ಇದು ಸಲ್ಲದು ಎಂದರು.

    ತನ್ನ ಜೀವನ ವೃತಾಂತವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು, ತಾನು ಪ್ರಸಿದ್ಧ ರಾಜಕೀಯ ಮನೆತನ ಹಾಗೂ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ, ತನ್ನ ಅಸ್ಮಿತೆಯನ್ನು ಕಂಡಕೊಳ್ಳಲು ತಡಕಾಡಿದ ಬದುಕಿನ ವಿವಿಧ ಘಟ್ಟಗಳನ್ನು  ವಿವರಿಸಿದರು. ಪ್ರಾರಂಭದಲ್ಲಿ ಪೌಲ್ಟ್ರಿ ವ್ಯವಹಾರ ಪ್ರಾರಂಭಿಸಿ ನಷ್ಟ ಅನುಭವಿಸಿದ ನಂತರ ಲಾಂಡ್ರಿ ವ್ಯಹಾರವನ್ನು ಆರಂಭಿಸಿ ನಂತರದಿನಗಳಲ್ಲಿ ಮೀನಿನ ವ್ಯವಹಾರದಲ್ಲಿ ಸಫಲತೆಯನ್ನು ಕಂಡುಕೊಂಡ ಪರಿಯನ್ನು ಎಳೆಎಳೆಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

    15 ಪೈಸೆಯ ಲಾಭದಿಂದ 1ರೂಪಾಯಿಗೆ ಎರಿಸಿದ ಕಥೆ
    ಮೀನು ವ್ಯವಹಾರಕ್ಕೆ ಇಳಿದ ಕ್ಷಣದಿಂದ ಮೀನುಗಾರಿಕೆಯನ್ನು ತಂತ್ರಜ್ಞಾನ ಮತ್ತು ಆಧುನಿಕ ಮಾರುಕಟ್ಟೆ ತಂತ್ರಗಳೊಂದಿಗೆ ಬೆಸೆದು, ಈ ವಲಯದಲ್ಲಿ ಹೊಸ ಆಯಾಮಗಳನ್ನು ತಂದುಕೊಟ್ಟರು.  2002 ರಲ್ಲಿ ವೇ ಬ್ರಿಡ್ಜ್‌ನ್ನು ಆರಂಭಿಸಿ ಗಾತ್ರದ ಆಧಾರದಲ್ಲಿ  ಮೀನನ್ನು ಮಾರುವ ವ್ಯವಸ್ಥೆಯಿಂದ ತೂಕದ ಆಧಾರದಲ್ಲಿ ಪ್ರಾರಂಬಿಸಿ, ಪ್ರತೀ ಕೆಜಿಗೆ ಮುಂಚೆ ಲಭಿಸುತ್ತಿದ್ದ 15 ಪೈಸೆಯ ಲಾಭದಿಂದ 1ರೂಪಾಯಿ ಲಾಭವನ್ನು ಮೀನುಗಾರರಿಗೆ ಒದಗಿಸಿದನ್ನು ವಿವರಿಸಿದರು.

    Click here

    Click here

    Click here

    Call us

    Call us

    ಲಕ್ಷ ಸಾಲ ನೀಡಲು ಹಿಂಜರಿದ ಬ್ಯಾಂಕಗಳಿಂದ ಕೋಟಿ ಸಾಲದ ಆಫರ್
    ಒಂದು ಕಾಲದಲ್ಲಿ 20 ಲಕ್ಷ ಹಣವನ್ನು ಸಾಲವಾಗಿ ನೀಡಲು ಹಿಂದೆ ಮುಂದೆ ನೋಡಿದ ಬ್ಯಾಂಕ್‌ಗಳು ಯಶಸ್ವಿ ಉದ್ಯಮಿಯಾದಾಗ 50 ಕೋಟಿಯಷ್ಟು ಹಣವನ್ನು ನೀಡಲು ಮುಂದೆ ಬಂದ ಸನ್ನಿವೇಶವನ್ನು ವಿವರಿಸಿದರು.   ಪ್ರತಿಯೊಬ್ದರ ಜೀವನದಲ್ಲೂ ಕಷ್ಟಗಳು, ಏಳು ಬೀಳುಗಳು ಬಂದೆ ಬರುತ್ತವೆ, ಆದರೆ ನಾವದನ್ನು ಹೇಗೆ ನಿಭಾಯಿಸುತ್ತವೆ ಎಂಬುದರ ಮೇಲೆ ನಮ್ಮ ಏಳಿಗೆ ನಿರ್ಧಾರವಾಗುತ್ತದೆ ಎಂದರು. 

    ತಾನು ರಾಜ್ಯದ ಮಂತ್ರಿಯಾಗಿದ್ದಾಗ ತನ್ನ ವ್ಯವಹಾರದಲ್ಲಾದ ಆರ್ಥಿಕಮುಗ್ಗಟ್ಟಿನಿಂದಾಗಿ ಆತ್ಮಹತ್ಯೆಮಾಡಿಕೊಳ್ಳುವ ಮನಸ್ಥಿತಿ ಏದುರಾಗಿತ್ತು, ಆದರೆ ಪರಿಸ್ಥಿತಿಯನ್ನು ನಿಭಾಯಿಸಿದ್ದರಿಂದಾಗಿ ತಾನಿಂದು ಯಶಸ್ವಿಯಾಗಿ ಸಮಾಜದ ಎಲ್ಲಾ ರಂಗದಲ್ಲೂ ಗುರುತಿಸುವಂತಾಯಿತು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. 

    ನಿಯಂತ್ರಿತ ಸಮಸ್ಯೆಗಳಿಗೆ ಪರಿಹಾರ ನಮ್ಮ ಬಳಿಯಲ್ಲಿದೆ
    ಬದುಕಿನಲ್ಲಿ ಬರುವ ಸಮಸ್ಯೆಗಳು ಎರಡು ರೀತಿಯಲ್ಲಿದ್ದು, ನಿಯಂತ್ರಿತ ಸಮಸ್ಯೆ ಹಾಗೂ ಅನಿಯಂತ್ರಿತ ಸಮಸ್ಯೆಗಳು. ಇವುಗಳಲ್ಲಿ ನಿಯಂತ್ರಿತ ಸಮಸ್ಯೆಗಳನ್ನು ನಾವು ದೃಢವಾಗಿ ಎದುರಿಸಿ ಮುಂದೆ ಸಾಗಬೇಕು, ಆದರೆ ಅನಿಯಂತ್ರಿತ ಸಮಸ್ಯೆಗಳನ್ನು ದೇವರ ಮೇಲಿನ ನಂಬಿಕೆ, ಪ್ರಾಮಾಣಿಕತೆಯ ನೆಲೆಯಲ್ಲಿ ಎದುರಿಸಿ ಜಯಶಾಲಿಗಳಾಗಬೇಕು ಎಂದರು. ನಮ್ಮ ಏಳಿಗೆ ಸದಾ ನಮ್ಮ ಜೊತೆಗಿರುವವರ ಅಭ್ಯುದಯದ ಮೇಲೆ ನಿರ್ಧಾರಿತವಾಗುತ್ತದೆ, ಆ ಹಿನ್ನಲೆಯಲ್ಲಿ ನಮ್ಮ ಜೊತೆಗಿರುವವರ ಹಿತಾಸಕ್ತಿ ಕಾಪಾಡುವುದು ಅಷ್ಟೇ ಮುಖ್ಯ, ಇದು ವ್ಯವಹಾರ ಕ್ಷೇತ್ರದಲ್ಲಿ ಬಹಳ ಪ್ರಾಮುಖ್ಯತೆಹೊಂದಿದೆ ಎಂದು ತಿಳಿಸಿದರು.

    ಕಾರ್ಯ ಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಮೋದ ಮಧ್ವರಾಜ್ ಮಂತ್ರಿಗಳಾಗಿದ್ದಾಗ ಹತ್ತು ಹಲವು ಸಮಾಜಮುಖಿ ಕ್ರಮಗಳನ್ನು ಜಾರಿಗೊಳಿಸಿದರು. ಪ್ರಮುಖವಾಗಿ ಕ್ರೀಡಾ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿ, ಕರ್ನಾಟಕದ ಕ್ರೀಡಾಪಟುಗಳಿಗೆ ಕ್ರೀಡಾ ಕೋಟಾದಡಿಯಲ್ಲಿ ಸರಕಾರಿ ನೌಕರಿಗಳಲ್ಲಿ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿದರು ಎಂದರು.

    ನವ ಉದ್ಯಮಗಳು ಕಾಲೇಜಿನಲ್ಲಿ ಹುಟ್ಟಿಕೊಳ್ಳಲಿ
    ವಿದ್ಯಾರ್ಥಿಗಳು ಜೀವನದಲ್ಲಿ ಸಾಧಿಸುವ ದೃಢ ಸಂಕಲ್ಪವನ್ನು ಹೊಂದಬೇಕು. ತಮ್ಮ ಮೇಲೆ ನಂಬಿಕೆ, ಗುರಿಯೆಡೆಗಿನ ಅಛಲ ನಿಲುವಿನ ಜೊತೆಯಲ್ಲಿ ಮೌಲ್ಯ ಹಾಗೂ ಪ್ರಾಮಾಣಿಕತೆಯ ದಾರಿಯಲ್ಲಿ ನಡೆದರೆ ಸಫಲತೆ ಸಾಧ್ಯ. ’ಟ್ರೈಬ್ಲೇಜ್’ ವಿದ್ಯಾರ್ಥಿ ಸ್ಟಾರ್ಟ್‌ಅಫ್ ವೇದಿಕೆ ಮೂಲಕ ಹತ್ತು ಹಲವು ವ್ಯವಹಾರದ ನವ ಉದ್ಯಮಗಳು ಕಾಲೇಜಿನಲ್ಲಿ ಹುಟ್ಟಿಕೊಳ್ಳಲಿ. ಸಂಸ್ಥೆ ಅಂತಹ ಕಾರ‍್ಯಕ್ಕೆ ಸದಾ ಬೆಂಬಲಿಸುತ್ತದೆ ಎಂದರು.

    ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಮಾತನಾಡಿದರು. ’ಟ್ರೈಬ್ಲೇಜ್’ವಿದ್ಯಾರ್ಥಿ ಸ್ಟಾರ್ಟ್‌ಅಫ್ ವೇದಿಕೆಯ ನೂತನ ಲಾಂಛನ ಹಾಗೂ ಬುಲೆಟಿನ್‌ನ್ನು ಬಿಡುಗಡೆಗೊಳಿಸಲಾಯಿತು. ನೂತನ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ವೇದಿಕೆಯ ನಿರ್ದೇಶಕಿ ಸೋನಿ, ವೇದಿಕೆಯ ಅಧ್ಯಕ್ಷ ಹಾರ್ದಿಕ್ ಶೆಟ್ಟಿ, ಕಾರ್ಯದರ್ಶಿ ಕಿರಣ್‌ಕುಮಾರ್ ಇದ್ದರು.

    ಅಫ್ತಾಬ್ ಮೊಹಮ್ಮದ್ ನಿರೂಪಿಸಿ, ಚಿನ್ಮಯಿ ಹೊಳ್ಳ ಅತಿಥಿಯನ್ನು ಪರಿಚಯಿಸಿ, ಇಶಿಕಾ ಅಂಚನ್ ಸ್ವಾಗತಿಸಿ, ದುರ್ಗಾ ಬಾಕರ್ ವಂದಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ

    17/12/2025

    ನಾವುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ

    17/12/2025

    ಧನ್ವಿ ಮರವಂತೆ ಅವರಿಗೆ ರಾಜ್ಯಮಟ್ಟದ ಬಾಲಗೌರವ ಪ್ರಶಸ್ತಿ ಪ್ರದಾನ

    17/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.