ಡಿ.12: ವಿದ್ಯಾರ್ಥಿಗಳಿಗೆ ಕಾರ್ಟೂನು ಸ್ವರ್ಧೆ

Call us

Call us

Call us

ಕುಂದಾಪುರ: ಡಿ.10ರಿಂದ 13 ವರೆಗೆ ಕುಂದಾಪುರದ ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಜರುಗುವ ಕಾರ್ಟೂನ್ ಹಬ್ಬ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಾರ್ಟೂನ್ ಬಿಡಿಸೋ ಸ್ವರ್ಧೆ – ಕಾರ್ಟೂನ್ ಮೊಗ್ಗು ಜರುಗಲಿದ್ದು ಹೋಟೆಲ್ ಪಾರಿಜಾತದ ಗಣೇಶ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

Call us

Click Here

ಡಿ.12ರ ಶನಿವಾರ ಮಧ್ಯಾಹ್ನ 3ಗಂಟೆಗೆ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆಗಳು ನಡೆಯಲಿದೆ. ಭ್ರಷ್ಟಾಚಾರ, ರಾಜಕೀಯ, ವಿದ್ಯಾರ್ಥಿ ಜೀವನ ಈ ಮೂರು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ಕಾರ್ಟೂನ್ ರಚಿಸಬಹುದಾಗಿದ್ದು ಡ್ರಾಯಿಂಗ್ ಹಾಳೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪರಿಕರಗಳನ್ನು ಸ್ವರ್ಧಾಳುಗಳೇ ತರಬೇಕೆಂದು ಕೋರಲಾಗಿದೆ. ವಿಜೇತರಿಗೆ ಮರುದಿನ ಸಂಜೆ ಪ್ರಮಾಣಪತ್ರದೊಂದಿಗೆ ನಗದು ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9482736873 ಅಥವಾ cartoonuhabba@gmail.com ಗೆ ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply