ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಧಾರ್ಮಿಕ ಕೈಂಕರ್ಯಗಳು ಧರ್ಮದ ತಳಹದಿಯನ್ನುಗಟ್ಟಿಗೊಳಿಸುತ್ತದೆ ಎಂದು ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಹೇಳಿದರು.
ಅವರು ಇಲ್ಲಿನ ಮಹಾಲಿಂಗೇಶ್ವರ ಕಲ್ಯಾಣ ಮಂದಿರದಲ್ಲಿ ಛಾಯಾ ತರಂಗಿಣಿ ಸಂಗೀತ ಶಾಲೆ ಹರ್ತಟ್ಟು ಮಣೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಹಾಗೂ ಹೇರಂಬ ಮಹಾಗಣಪತಿ ದೇಗುಲದ ಆಡಳಿತ ಮಂಡಳಿ, ಸ್ನೇಹ ಕೂಟ ಮಣೂರು, ಗೀತಾನಂದ ಫೌಂಡೇಶನ್ ಮಣೂರು ಸಹಭಾಗಿತ್ವದಲ್ಲಿ ಶತಕಂಠ ಗಾಯನ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸನಾತನ ಹಿಂದೂ ಧರ್ಮದ ವಿವಿಧ ಆಚರಣೆಗಳು ಧರ್ಮಜಾಗೃತಿಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಶಾಂತಿ ನೆಮ್ಮದಿಯ ವಾತಾವರಕ್ಕೆ ಇಂತಹ ಶತಕಂಠ ಗಾನಗಳು ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದರು.
ಮುಖ್ಯ ಅಭ್ಯಾಗತರಾಗಿ ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ಸ್ನೇಹ ಕೂಟದ ಸಂಚಾಲಕಿ ಭಾರತಿ ವಿ.ಮಯ್ಯ ಮಣೂರು, ವಿದ್ವಾನ್ ಮಧುರ ಪಿ. ಬಾಲಸುಬ್ರಹ್ಮಣ್ಯಂ, ವಿಧೂಷಿ ಉಷಾ ಹೆಬ್ಬಾರ್, ವೈಲಿನ್ ವಾದಕಿ ವಿಧೂಷಿ ಶರ್ಮಿಳಾ ರಾವ್, ಮೃದಂಗ ವಿದ್ವಾನ್ ಬಾಲಚಂದ್ರ ಭಾಗವತ್, ಹಾಗೂ ಗಾಯಕಿ ಆಶಾ ತಿಮ್ಮಪ್ಪ ಅವರು ಶತ ಕಂಠ ಗಾಯನ ಹಾಡಿದರು. ಕಾರ್ಯಕ್ರಮದಲ್ಲಿ ಇನ್ನೂರಕ್ಕೂ ಅಧಿಕ ಭಜಕರು ಪಾಲ್ಗೊಂಡು ಶತಕಂಠ ಗಾಯನದ ಮೆರುಗು ಹೆಚ್ಚಿಸಿದರು. ಪಾಂಚಜನ್ಯ ಹೋಂ ಪ್ರಾಡಕ್ಟ್ ಮಾಲಿಕ ಜಿ. ಗೋಪಾಲಕೃಷ್ಣಯ್ಯ ಸ್ವಾಗತಿಸಿದರು.
ಛಾಯಾ ತರಂಗಣಿ ಶಿಕ್ಷಕಿ ಭಾಗ್ಯಶ್ರೀ ಜಿ. ಮಯ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
















