ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೇಂದ್ರ ಸರಕಾರದ ರೂಪಿಸಿದ ಮಹತ್ವಕಾಂಕ್ಷೆ ಯೋಜನೆಯಾದ ವಿಶ್ವಕರ್ಮ ಯೋಜನೆ ಸಾಮಾನ್ಯ ವರ್ಗದ ಪಾಲಿನ ಆಶಾಕಿರಣ ಯೋಜನೆಯಾಗಿ ಹೊರಹೊಮ್ಮಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶುಕ್ರವಾರ ಕೋಟ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಉಡುಪಿ ಅಂಚೆ ವಿಭಾಗ ಇವರ ಸಹಕಾರದೊಂದಿಗೆ ವಿಶ್ವಕರ್ಮ ಯೋಜನೆಯ ಟೋಲ್ ಕಿಟ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರಕಾರ ಈ ಯೋಜನೆಗಾಗಿ 17283 ಫಲಾನುಭವಿಗಳ ಅರ್ಜಿ ಅಂಗಿಕಾರಗೊಳಿಸಿದ್ದು 8250 ಜನ ತರಭೇತಿ ಪೂರ್ಣಗೊಳಿಸಿದ್ದಾರೆ, ಈಗಾಗಲೇ 6 ಸಾವಿರ ಕಿಟ್ ವಿತರಿಸಲಾಗಿದ್ದು, 36,66,4,000ರೂ. ಸಾಲ ನೀಡಲಾಗಿದ್ದು ಕೇಂದ್ರ ಸರಕಾರ ಈ ಯೋಜನೆಗಾಗಿ 12ಸಾವಿರ ಕೋಟಿ ರೂ ಗಳನ್ನು ಭದ್ರತೆಗಾಗಿ ಮಿಸಲಿರಿಸಿದೆ ಒಟ್ಟು 18ಕ್ಕೂ ಅಧಿಕ ಸಾಂಪ್ರದಾಯಿಕ ಕುಲಕಸಬುಗಳಿಗೆ ಈ ಯೋಜನೆ ಜೀವತುಂಬಲಿದೆ, ಯೋಜನೆಯ ಫಲಾನುಭವಿಗಳ ಕುಟುಂಬಗಳು ಆರ್ಥಿಕ ಬಲವರ್ಧನೆಗೆ ಪೂರಕ ವಾತಾವರಣ ಕಲ್ಪಿಸಿದೆ ಎಂದರು.
ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಿಶ್ವಕರ್ಮ ಟೂಲ್ ಕಿಟ್ ನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಕೋಟ ಪಂಚಾಯತ್ ಆಡಳಿತಾಧಿಕಾರಿ ಪ್ರತಾಪ್ಚಂದ್ರ ಶೆಟ್ಟಿ, ಅಂಚೆ ನಿರೀಕ್ಷಕ ಉಡುಪಿ ಉತ್ತರ ಶಂಕರ್ ಲಮಾಣಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸದ ಆಪ್ತ ಕಾರ್ಯದರ್ಶಿ ಹರೀಷ್ ಕುಮಾರ್ ಶೆಟ್ಟಿ ನಿರೂಪಿಸಿ, ಕೋಟ ಪಂಚಾಯತ್ ಪಿಡಿಒ ಉಮೇಶ್ ಸ್ವಾಗತಿಸಿ, ವಂದಿಸಿದರು. ಸುಮಾರು 25ಕ್ಕೂ ಅಧಿಕ ಫಲಾನುಭವಿಗಳು ಈ ಯೋಜನೆಕ ಕಿಟ್ ಪಡೆದುಕೊಂಡರು.
















