Author: ಒಡ್ಡೋಲಗ

ಯುವ ಬರಹಗಾರ ದಿಲೀಪ್ ಕುಮಾರ್ ಶೆಟ್ಟಿ ಅವರು ಮೂಲತಃ ಕುಂದಾಪುರ ತಾಲೂಕಿನ ಗುಳ್ಳಾಡಿಯವರು. ಬಿಇ ಪದವೀಧರರಾದ ಅವರು ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಾಫ್ಟವೇರ್ ಇಂಜಿನೀಯರ್ ಆಗಿ ದುಡಿಯುತ್ತಿದ್ದಾರೆ. ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಕಂಗ್ಲಿಷ್ ನಡುವೆಯೂ ಹುಟ್ಟೂರಿನ ಪ್ರೀತಿಯಿಂದ ಭಾಷಾಭಿಮಾನ ಮೆರೆಯುತ್ತಿರುವ ದಿಲೀಪ್ ಕುಮಾರ್ ಶೆಟ್ಟಿ, ಸಂಪೂರ್ಣ ಕುಂದಾಪ್ರ ಕನ್ನಡದ ಕಥೆ-ಕವಿತೆಗಳನ್ನೊಳಗೊಂಡ ಅಂಕಣ 'ಕಥೆ-ಕವಿತೆಗಳ ಒಡ್ಡೋಲಗ' ವನ್ನು ಬರೆಯಯುತ್ತಾರೆ

ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ ‘ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೆ, ಹಾಗೂ ನನ್ನ ಒಲವಿನ ಸಹೋದರ ಸಹೋದರಿಯರೆ, ನಾನು ಮಾಡುವ ವಂದನೆಗಳು. ನಾನು ಈ ದಿನ ಚರ್ಚೆಗಿಟ್ಟ ವಿಷಯ ‘ದೂರದರ್ಶನದ’ ಬಗ್ಗೆ ಒಂದೇರಡು ಮಾತುಗಳನ್ನಾಡಲು ಇಚ್ಚಿಸುತ್ತೇನೆ. ‘ನಮ್ಮ ಊರಿನ ಶಾಲೆಗ್ ಓದಿದ ಎಲ್ಲರಿಗೂ ಇದು ಎಂತ ಅಂದೇಳಿ, ಎಷ್ಟೊತ್ತಿಗೆ ಹೇಳ್ತ್ರ್ ಅಂದೇಳಿ ಗೊತ್ತಾಯೇ ಆತ್ತ್. ಹೌದೇ. ನಾನು ಅದೇ ಬಾಲ-ಸಭೆ ಬಗ್ಗ್ ಹೇಳುಕ್ ಹೊರಟದ್ದ್. ಸನಿವಾರ ಬಂತ್ ಅಂದ್ರೆ ಸಾಕ್, 1 ರಿಂದ 4 ನೇ ಕ್ಲಾಸ್ಸಿನ ಮದ್ಯೆ ಇಟ್ಟ್ ತಟ್ಟಿ (ತಡೆಗೊಡೆ)ನ ಬದಿಗ್ ಹಾಕಿ, ಶಾಲಿ ಚೀಲನ ಹೊರಗಡೆ ಬಿಸಾಕಿ, ಮಕ್ಕಳ್ ಎಲ್ಲ ಬಂದ್ ಕೂಕಂಡ್ರ್ ಅಂದ್ರೆ ಬಾಲಸಭೆ ಶುರು. ಪ್ರತಿ ಸಲ ಒಬ್ಬರು ಮಾಷ್ಟ್ರು ಬಾಲಸಭೆಯ ಅಧ್ಯಕ್ಷರಾಗಿ ಸ್ಟೇಜ್ ಮೆಲೆ ಬಂದು ಕೂಕಂಡ್ ಸಭೆಯನ್ನ ಶುರು ಮಾಡುದ್ ವಾಡಿಕಿ. ಅದಾದ್ಮೇಲ್ ಶುರುವಾತ್ತ್ ಕಾಣಿ ಕಾರ್ಯಕ್ರಮ. ಒಂದು ವಾರದ ಮೊದಲೇ ಮುಂದಿನ್ ಬಾಲಸಭೆಗೆ ಯಾರೆಲ್ಲ…

Read More

ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ ರಾತ್ರಿ ಆಟಕ್ಕೆ ಹೊಯಿ ಬೆಳಿಗ್ಗೆ ನಾಲ್ಕ್ ಗಂಟಿಗೆ ಮನಿಗೆ ಬಂದು ಮನಿಕಂಡನಿಗೆ, ”ಡೈರಿಗೆ ಹಾಲು ಕೊಡುಕ್ ಹ್ವಾತಿಲ್ಯನಾ, ಇವತ್ತ್ ಶಾಲಿ-ಗೀಲಿ ಇಲ್ಯ ಹಂಗಾರೆ, ಸೂರ್ಯನ ಬೆಳಕಿನ ರಾಪ್ ಮುಂಗಾಲ್ಗೆಂಟ್ ವರಿಗ್ ಬಂತಲೆ.. ಗಡಾ.. ಎಂತ ಏಳುದಿಲ್ಯಾ..” ಅಂದೇಳಿ ಕೆಮಿ ಗೆಂಡಿ ಹೊಟ್ಟಿ ಹ್ವಾಪುವಂಗೆ ಅಮ್ಮ ಕೂಗದ್ ಕೂಡ್ಲೆ ಅಯ್ಯೋ ದೇವ್ರೆ, ಇವತ್ತ್ ಶಾಲಿ ಇತ್ತಲ್ದಾ. ನಿನ್ನೆ ಹೋಮ್ ವರ್ಕ್ ಕೊಟ್ಟಿರ್, ಅದ್ ಇನ್ನೂ ಬರಿಲಿಲ್ಲ, ಕನ್ನಡ, ಹಿಂದಿ, ಇಂಗ್ಲಿಷ್ ಎರಡೆರಡು ಪೇಜು ಕಾಪಿ ಬರಿಕ್. ನಿನ್ನೆ ಸಮ ಮಾಡಿ ಕೊಪಿ ಬರ್ದ್ಕಂಡ್ ಹೊಯಿದಿದ್ದಕ್ಕೆ ಒಂದು ಪೇಜ್ ಜಾಸ್ತಿ ಬರುಕ್ ಹೇಳಿರ್. ಇವತ್ತ್ ಜಯಲಕ್ಷ್ಮಿ ಮೇಡಂ ಲಾಯ್ಕ್ ಮಾಡಿ ಬರ್ದ್ಕಂಡ್ ಹೊಯಿದೆ ಇದ್ರೆ, ಕೊಂದೆ ಹಾಕತ್ರ್..” ಅಂದೇಳಿ ಮೈ ಎಲ್ಲ ಬಿಸಿ ಆಪು ಶುರುವಾದ ಕೂಡ್ಲೆ, ಚಾಪೆಯಿಂದ ರಪ್ಪ ಮಂಡಿ ಕೊಡ್ಕಂಡ್ ಗಂಟಿ ಕಾಂತಿ, ಗಂಟಿ 8. “ನಾನಿನ್ನೂ ಕಾಪಿ ಬರಿಲಿಲ್ಲ,…

Read More

ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ. ಎಂಥ ಮಳೆ ಮರ್ರೆ. ಕೌಂಚ್ ಮನಿಕಂಡ್ರೆ ಇತ್ತಲೆ, ಒಂದ್ ಕೋರ್ಜಿ ನಿದ್ರಿ ಮಾಡ್ಲಕ್ ಅಲ್ದೆ. ಮನಿ ಹಂಚಿನ್ ಮೇಲೆ ಬಿದ್ದ್ ನೀರು, ಹನಿ-ಹನಿಯಾಯಿ ನೆಲ ಸೇರ್ವತಿಗೆ, ಮಳೆಗಾಲದ ಹಳಿ ನೆನ್ಪ್ ಕಣ್ಣಂಚಗೆ ಹನಿ ಹನಿಯಾಯಿ ತೇಲುಕೆ ಶುರು ಆತಿತ್ತ್. ಆ ಹನಿ ತುಂಬಾ ಹರ್ಕಟಿ ಚಡ್ಡಿ ಹೈಕಂಡ್ ಓಡಾಡದ್ ನೆನ್ಪೇ ತುಂಬಿತ್. ಒಂದ್ ದಿನ ಹೀಂಗೂ ಅಯ್ತ್. ಆ ದಿನ ಸನಿವಾರ. ಶಾಲ್ಯಗ್ ಬಾಲ ಸಭೆ ಮುಗ್ಸಂಡ್, ಬೇಗ ಓಡಿ ಮನೆಗೆ ಬಂದಿ. ಶನಿವಾರ ಒಪ್ಪತ್ತ್ ಅಂದೆಳಿ ಮನೆಗೆ ಬೆಳ್ತಕ್ಕಿ ಅನ್ನ ಮಾಡಿದಿರ್. ಮನಿಲ್ ಬೆಣ್ತಕ್ಕಿ ಕೂಳ್ ಮಾಡುದೆ ಅಪರೂಪ, ನಾವ್ ಬಿಡತ್ತಾ, ಸಮಾ ಹಯ್ಕಂಡ್, ಒಂದ್ ಚ್ವಾಂಕಿ ತಿಂದಿ. “ಆವ್…” ಒಂದು ಒಳ್ಳೆ ತೇಗು ಬಂದ್ಮೇಲೆ, ಎದ್ದು ಹಂಚಿಮನಿ ಮಾವಿನ ಮರದ ಹತ್ರ ಓಡುಕ್ ಶುರು ಮಾಡಿದಿ. ಅವರ ಮನೆ ಮಾಯಿನ್ ಮರದ್ ಬುಡ್ದಗ್ ನಿಂತ್ಕ್ಂಡ್, ಎಷ್ಟೊತ್ತಿಗೆ ಮಾವಿನ…

Read More

ದಿಲೀಪ್ ಕುಮಾರ್ ಶೆಟ್ಟಿ ಜನವರಿ-ಮಾರ್ಚ್ ತಿಂಗಳ್ ಬಂದ್ರೆ ನಮಗೆ ಎಲ್ಲಿಲ್ಲದ್ ಖುಷಿ. ಅದು ಹಬ್ಬದ ಸೀಸನ್. ಕೋಟ, ಸಾಲಿಗ್ರಾಮ, ಕುಂಬಾಶಿ ಅಲ್ಲದೆ ಸಣ್ಣ-ಸಣ್ಣ ಊರು ಬದೆಗೂ ದೇವಸ್ಥಾನದಲ್ಲಿ ಹಾಲು ಹಬ್ಬ ಗೆಂಡ ಸೇವೆ. ಹಬ್ಬದ ದಿನ ರಾತ್ರಿ ಆಟ (ಯಕ್ಷಗಾನ) ಬೇರೆ. (ಗರ್ಗರ್ ಮಂಡ್ಲನೂ ಹಾಡಿ ಬದೆಗ್ ಇರತ್ತ್ ಅಂದ್ ಮಾಡ್ವ). ನಾವ್ ಅಪ್ಪಿ-ತಪ್ಪಿ ಹಬ್ಬಕ್ಕ್ ಹೊಯ್ದೆ ಇದ್ರೂ ಆಟಕ್ಕಂತೂ miss ಇಲ್ಲ. ಬಹುಶ ಆಗಳಿಕ್ ನಾನ್ 5-6 ನೇ ಕ್ಲಾಸ್ಸೆಗ್ ಇದಿನೆನೊ. ಚಂದ್ರ್ ಮಾಷ್ಟ್ರಿಗ್ ಹೆದರ್ಕಂಡ್ ರಾತ್ರಿ ಗೆಂಡಕ್ಕೆ ಮಾತ್ರ ಹೊಯಿ ಬೆಳಿಗ್ಗೆ ಶಾಲೀಗ್ ಹ್ವಾದ್ದೂ ಇತ್ತ್. ಕಟ್ಟಿತನ ನಮಗೆ on the way. ಹಾಂಗಾಯಿ ಬೆಳಿಗ್ಗೆ ಬೇಗೆ ಎದ್ಕಂಡ್, ಅಮ್ಮನ ಹತ್ರ ಪುಸ್ತಕ ತಕಣ್ಕ್ ಅಂದೆಳಿ 10-20 ರೂಪಾಯಿ ಬೇಡ್ಕಂಡ್ ಕಟ್ಟಿತನ ಹಬ್ಬಕ್ಕ್ ಬೇಗ್ ಹೋಯಿ, ಒಂದ್ 2 ice cream, ಪೆಪ್ಸಿ ತಿಂದ್ಕಂಡ್ ಆಚಿ-ಈಚಿ ಗೊತ್ತಿಪ್ಪರ್ ಇದ್ರಾ ಅಂದೇಳಿ ಹುಡ್ಕುಕ್ ಶುರು ಮಾಡ್ತ್. ಯಾರಾದ್ರೂ ಒಬ್ರ್ ಊರ್…

Read More

ದಿಲೀಪ್ ಕುಮಾರ್ ಶೆಟ್ಟಿ “ಅಯ್ಯಬ್ಯೇ, ಪರೀಕ್ಷಿ ಅಂತೂ ಮುಗಿತು. ಈ ಸಲ ರಜಿಗೆ ಬೆಂಗ್ಳೂರಿಗೆ ಹ್ವಾಪ…” ಅಂದೇಳಿ ಲಾಸ್ಟ್ ಪರೀಕ್ಷಿ ಮುಗಿತ್ ಇದ್ದಂಗೆ ಡಿಸೈಡ್ ಮಾಡ್ಕಂಡಿ. ಮನಿಗೆ ಓಡಿ ಹೊಯಿ “ಮನ್ನೆ ಹಬ್ಬಕ್ಕೆ ಬಂದಾಗಳಿಕೆ ಮಮ್ಮ ನಂಗೆ ರಜಿಗೆ ಬೆಂಗ್ಳೂರಿಗೆ ಬಪ್ಪುಕ್ ಹೇಳಿರ್, ನಾನಂತೂ ಹ್ವಾಪನೆ..” ಅಂದೇಳಿ ಅಜ್ಜಿಗೆ ಹೆಳ್ದಿ. “ಈ ಬಿಸ್ಲೆಗೆ ಇಲ್ಲಿ ಕಯಿಟುಕಿಂತ ಹೋಗಿ ಸಾಯತೆ.. “ ಅಂದ್ರ್ ಅಜ್ಜಯ್ಯ. ಅಲ್ಲಿಗೆ ನಮ್ಮ ಬೆಂಗ್ಳೂರ್ ಹ್ವಾಪುದ್ ನಿಕ್ಕಿ ಆಯ್ತು. ಇನ್ನೊಂದು ಹತ್ತು ದಿನ ಬಿಟ್ರೆ, ರಿಸಲ್ಟ್ ಬತತ್ತ್, ಅದು ಆದ ಕೂಡ್ಲೆ ಹೊರಡುದೆ. ಊರೆಗೆ ಯಾರು ಬೆಂಗಳೂರಿಂದ ಇಳ್ದಿರ್, ಅವ್ರು ಎಗಳಿಕೆ ಹ್ವಾತ್ರ್, ಅನ್ನೋ ಎಲ್ಲ ಡಿಟೇಲ್ ಒಟ್ಟ್ ಹಾಕುಕ್ ಶುರು ಮಾಡಿದಿ. ಅವತ್ತ್ ಪಕ್ಕದ ಮನೆಯವ್ರೆ ಊರಿಗ್ ಬಂದಿದಿರ್, ಅವ್ರು ಏಪ್ರಿಲ್ 10 ಕ್ಕೆ ಹ್ವಾತ್ರಂಬ್ರ್ ಅಂದೇಳಿ ಗೊತ್ತಾದ್ದೆ ತಡ, ಅಜ್ಜಿಗೆ ಹೇಳಿ ಅವ್ರ ಹತ್ರ ನನ್ನನ್ನು ಕರ್ಕಂಡ್ ಹ್ವಾಪುಕ್ ಹೇಳ್ ಅಂದೆ. ಅವ್ರು ಅಕ್ಕ್ ಅಂದ್ರ್.…

Read More

ದಿಲೀಪ್ ಕುಮಾರ್ ಶೆಟ್ಟಿ ಅದ್ ಸ್ವಾಣಿ ತಿಂಗಳ್ ಕಾಲ. ಕೆರೆ ತುಂಬಾ ನೀರ್ ತುಂಬ್ಕಂಡ್, ಗದ್ದೆ ಅಂಚಿನ ತುಂಬಾ ಲಾಯಿಕ್ ಹುಲ್ಲ್ ಬೆಳು ಕಾಲ. ಅಲ್ಲಲ್ಲ್ ಸ್ವಲ್ಪ ಸ್ವಲ್ಪ ಸ್ವಾಣಿ ಹೂಗ್ ಮಂಡಿ ಎತ್ತುಕ್ ಶುರು ಆಯಿತ್. ನಾವು ದಿನ ನಿತ್ಯದಂಗೆ ನಿತ್ಯಣ್ಣನ್ ಗೆದ್ದಿ ದಾಂಟ್ಕ೦ಡ್ ಸಾವಂತ್ರ್ ಮನಿ, ಕಟ್ಟಿತನ ಸುತ್ತ್ ಹಯ್ಕಂಡ್ ಹಾಂಗೂ- ಹೀಂಗೂ ಚಡ್ಡಿ ಗೋನ್ರ್ ಮಾಡ್ಕೊಳ್ಳದೆ ಶ್ರೀ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಸಸೂತ್ರವಾಗಿ ಣime ಸರಿಯಾಯಿ ಬಂದ್ ತಲುಪ್ತ್. ಪ್ರಾರ್ಥನೆ ಆದ್ಮೆಲೆ ಶ್ರೀಧರ್ ಮಾಷ್ಟ್ರ್ ಒಂದ್ ಗಂಡಿನ್ ಹತ್ರ ನೋಟಿಸ್ ಕಳ್ಸಿ ಕೊಟ್ರ್. ನಮ್ಮ್ ಛಿಟಚಿss ಮಾಷ್ಟ್ರ್ ಅದನ್ನ ಓದಿ ಹೇಳುಕ್ ಶುರು ಮಾಡ್ರ್ “ ಇದೆ ಬರುವ ಶುಕ್ರವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಣೆ ಆರತಿಯನ್ನು ಹಮ್ಮಿ ಕೊಂಡಿದ್ದು ….” ಆಮೇಲೆ ಏನೋನೊ ಹೇಳ್ತಿದ್ರ್, ನನ್ ಕೆಮಿಗ್ ಅದ್ ಕೆಂತಿರ್ಲಿಲ್ಲ. ನನ್ನ್ ಮನಸ್ಸು ಬೇರೇನೆ ಹೇಳ್ತೀತ್ತ್. “ಇದೆ ಬರುವ ಶುಕ್ರವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ…

Read More

ಬೇಸಿಗಿ ಬಿಸಿ ಬೋಳ್ ಮಂಡಿನ ಕವ್ಲಿ ಮಾಡ್ತೀತ್ತ್. ಕ್ವಜಿ ಹ್ವಂಡ, ಕೆರಿಯೆಲ್ಲ ಬತ್ತುಕ್ ಸುರುವಾಯ್ತ್. ನಮ್ಗು ಶಾಲೀಗ್ ರಜಿ ಸುರುವಯ್ತ್. ಮೂರ್ ಓಡ್ ದ್ವಾಸಿ ತಿಂದ್ಕಂಡ್, ಹ್ವಾದ್ ವರ್ಷದ್ ಹರ್ದ್ ಹ್ವಾದ್ದ್ ಕಾಕಿ ಬಟ್ಟಿ ಚಡ್ಡಿ ಹಯ್ಕಂಡ್, ಗೈಡಿಮಕ್ಕಿ ಜಡ್ಡೆಗ್ ಬೆಳಿಗ್ಗಿಂದ ಸಾಯಂಕಾಲ್ದೊರಿಗ್ ಹ್ಯಡಿಮಂಡಿ ಬ್ಯಾಟ್, ರಬ್ಬರ್ ಬಾಲೆಗ್ ಬಾಜಲ್ ಬೆಟ್ಟ್ ಕಟ್ಕಂಡ್ ಆಡ್ತಿದ್ದ ಕಾಲ. ಆಗಳಿಕ್ ಕಿಸೆಗ್ ಎಂಟಣಿ ಇದ್ರು ರಾಜನ್ ಕಂಡೆಗ್ ಇದ್ದಿತ್. ಗುಡ್ಡಿ ಅಂಗಡಿ ಪಪ್ಸ್, ಬಾಜಲ್ ಕುಡಿಕ್ ಅಂಬಗ್ ಆರ್ಕುಡ್ಲೆ ಗ್ವಾಯಿ ಬೀಜ ಕಳುಕ್ ಹ್ವಾತಿದಿತ್. ಈ ಆuಣಥಿ ಅಷ್ಟ್ ಸುಲ್ಬ ಅಲ್ಲ, ಕೆಲವ್ರ್ ಮರ್ದಿಂದ ಬಿದ್ದ್ ಸ್ವಂಟ ಮುರ್ಕಂಡ್ರೆ, ಕೆಲವ್ರ್ ಸಿಕ್ಕ ಬಿದ್ದ್ ಚವ್ಳಿ ಕ್ವಟ್ಟಿ ಪುಕ್ಳಿಗ್ ಬಿಟ್ಟ್ಕಂಡಿರ್. ಹಾಂಗಾಯಿ, ಎಷ್ಟೇ ಕಷ್ಟ ಇದ್ರೂ… “ಬಲ್ಲವನೇ ಬಲ್ಲ ಗ್ವಾಯಿ ಬೀಜದ ಡಿಚಿಣe”. ಇಷ್ಟಕ್ಕೆ ನಮ್ ರಜಿ ಮುಗಿಲಿಲ್ಲ. ಕ್ವಜಿ ಹ್ವಂಡದೆಗ್ ನೀರ್ ಕಡ್ಮಿ ಆರ್ ಕೂಡ್ಲೆ ನಾವ್ ಮೀನ್ ಹಿಡುಕ್ ಡಿeಚಿಜಥಿ. ಮಾಬ್ಲಣ್ಣನ್ ತೂಂತ್…

Read More

ಮಳ್ಗಾಲ ಮುಗ್ದ್ ನಮ್ಮ ಸೂರ್ಯಣ್ಣ ಬೆಂಕಿ ಉಂಡಿನ ಮಂಡಿ ಮೇಲ್ ಬಿಸಾಕು ಟೈಮ್. ಅದೂ ಅಲ್ದೆ ಮಟ ಮಟ ಮಧ್ಯಾನ ಬೇರೆ, ಕ್ರಿಕೆಟ್ ಆಡಿ ಸಾಕಾಯಿ ಗುಡ್ಡಿ ಅಂಗಡೆಗ್ ಸುಮೇಶ ಬಾಜಲ್ ಕುಡಿತ ಒಣ್ಕಟಿ ಪಫ್ಫ್ಸ್ ತಿಂಬತಿಗ್ ಚೂಡಿದಾರ್ ಶಾಲ್ ಮಂಡಿ ಮೇಲ್ ಹಯ್ಕಂಡ್ ಹೀಂಗೆ ಅಂಗ್ಡಿ ಒಳಗ್ ಬಂದ್ “ಜಯರಾಮಣ್ಣ ಅತ್ತ್ ಯಾವ್ದ್ ರಿಕ್ಷಾ ಹೋಯ್ತೆ ?” ಕೇಂಡಳ್ ಸ್ವಾಮೀಜಿ ಮನಿ ಸುಂದ್ರಿ. ಇಂತಿಪ್ಪ ಸಮಯದಲ್ಲಿ ಸುಮೇಶ ಸುದ್ದಿ ಕೇಳಲಾಗಿ ಚಂಗನೆ ಹಾರಿ ತನ್ನ ಕಿಸೆಯಿಂದ ರೂಪಾಯಿ ಛಿoiಟಿ ತೆಗೆದೊಡೆ… ಅಲ್ಲೇ ಪಕ್ಕದೆಗ್ ಇದ್ದ್ ಛಿoiಟಿ-ಠಿhoಟಿe ನಿಂದ “ಹ್ವಾ ಬಸ್ವ, ಎಲ್ಲಿದ್ದೆ ಮರೆ.. ಕೋಟಕ್ಕ್ ಹ್ವಾಪುಕ್ ರಿಕ್ಷಾ ಬೇಕ್, ಒಂಚೂರ್ ಬೇಗ್ ಬಪ್ಪಿಲೆ.. “ ಸುಂದ್ರಿನ ಒಂದೇ ಕಣ್ಣೆಗ್ ನುಂಗ್ತಾ ಕೇಂಡಾ ಸುಮೇಶ.. “ ಅಲ್ಲೇ ಪಕ್ಕದೆಗೆ ನಿಂತ್ಕನ್ಡ್ ಸುಂದ್ರಿ ಒಂದ್ smiಟe ಬಿಸಾಕ್ದಳ್. ಇಬ್ರೀಗೂ ಚಣ್ಣಕ್ ಟove. ಐove ಚಿಣ ಗುಡ್ಡಿ ಅಂಗಡಿ. ಸುಮೇಶ ಛಿoiಟಿ ಫೋನ್ ವೈರ್…

Read More

ನಂಗ್ ಮಳ್ಗಾಲ 10ರಿಂದ 20 ಆಪೂದ್ರೊಳ್ಗೆ, ಮಾಲಿಂಗ cycle ಗುಜ್ರಿಗ್ ಹಾಕಿ M-80 ಒಡ್ಸ್ಕಂಡ್ ಈಗ ಗೂಡ್ ರಿಕ್ಷಾದೆಗ್ driver ಜೊತಿಗ್ ಮೀನ್ ಪ್ಯಾಟಿನೇ ತಕನ್ಡ್ ಬಪ್ಪುಕ್ ಸುರುಮಾಡಿದ. ಮಾಲಿಂಗ ನಮ್ ಊರೆಗ್ ಮೀನ್ ತಕಬಪ್ಪನ್, ಮೊದ್ಲಿಂದ ಈಗಿನ್ ವರಿಗೂ ಜಗತ್ತ್ ಬೆಳ್ದಂಗೆ, ಅಕ್ಕಿ rate ಬೆಳ್ದಂಗೆ, BMTC rate ಬೆಳ್ದಂಗೆ ಮಾಲಿಂಗನ ಮೀನ್ ರೇಟು ಬೆಳಿತ ಇತ್ತ್. ಆಗಳಿಕ್ ನಮ್ಮ್ ಜನ ಮಾಲಿಂಗ ಯಂತ ಮೀನ್ ತಕನ್ಡ್ಬಂದ್ರೂ ಅವನ್ ಹತ್ರ ತಕಂತಿದಿರ್. ಆಗಳಿಕ್ ಜನ್ರಿಗ್ ಪ್ಯಾಟಿಗ್ ಹೊಯಿ ಮೀನ್ ತಕನ್ಡ್ ಬಪ್ಪು time ಆಗ್ಲಿ, ಪ್ಯಾಟಿಗ್ ಹೊಯಿ ಬಪ್ಪುಕ್ ಗಾಡಿ ಅಯ್ಲಿ ಇರ್ಲಿಲ್ಲ. ಅದಕ್ಕೆ ಮನಿ ಬದೆಗ್ ಯಂತ ಬದತ್ತೋ ಅದನ್ನೇ ತಕಂತಿದಿರ್. ಅದೂ ಅಲ್ದೆ ಮಾಲಿಂಗ ಎಗಳಿಕು fresh ಮೀನೆ ತಕನ್ಡ್ ಬತ್ತಿದ್ದ. ಹಾಂಗಾಯಿ ಎಲ್ಲರೂ ಇವನ ಹತ್ರಾನೆ ಮೀನ್ ತಕಂತಿದಿರ್. ಹಾಂಗಾಯಿ ಇವನಿಗೆ competition ಕೊಡ್ವರು ಇರ್ಲಿಲ್ಲ. ಆದ್ರೆ ಈಗ ಕಾಲ ಬದ್ಲಯ್ತ್, ಜನ ರುಚಿ ಹುಡ್ಕುಕ್…

Read More

“ಓಂ ವೆಂಕಟೇಶಾಯ ನಮಃ , ಓಂ ಕೇಶವಾಯ ನಮಃ, ನಾರಾಯಣಯ ನಮಃ .. ಮಗಾ ಜಯಲಕ್ಷ್ಮಿ , ಆ ಸಣ್ಣ ಪಿನ್ ಚಾರ್ಜರ್ ಎಲ್ಲ ಇತ್ತ್ ಕಾಣ್, ಮೊಬೈಲ್ ಚಾರ್ಜಿಗ್ ಹಾಕ್ ಸ್ವಲ್ಪ.. ಓಂ ವೆಂಕಟೇಶಾಯ ನಮಃ , ಓಂ ಕೇಶವಾಯ ನಮಃ, ನಾರಾಯಣಯ ನಮಃ…. ಏ ವಾದಿರಾಜ, ಆ ದ್ಯನ (ದನ) ಗ್ಯಲಿತ್ತಲ ಮರೆ ಸ್ವಲ್ಪ ಹುಲ್ಲ್ ಹಾಕುಲೇ.. ಎಲ್ಲ ಹೇಳಕ್ ಇವಕ್ಕೆ… ಓಂ ವೆಂಕಟೇಶಾಯ ನಮಃ , ಓಂ ಕೇಶವಾಯ ನಮಃ, ನಾರಾಯಣಯ ನಮಃ…” ಸುಬ್ರಾಯ್ ಬಟ್ರ್ ಬೆಳಿಗ್ಗೆ ಸುರು ಆಪುದೆ ಹೀಂಗೆ. ಹೇಳಿ ಕೇಳಿ ನಟ್ಟಿ ಟೈಮ್, ಬೆಳಿಗ್ಗೆ ಬೇಗೆ ಎದ್ದ್ ಹಾರಿ ಹಿಡ್ಕಂಡ್ ಗದ್ದೆ ಬದಿಗ ಹೋಯಿ ಆಗಿಗೆದ್ದಿ ನೀರ್ ಕಟ್ಟಿ ಹಾಂಗೆ ಅಗಿನ ಒಂದ್ ಸಲ ಕಂಡ್, “ಆ ಪಾಟಿ ಗ್ವಬ್ರ ಹಾಕ್ರು ಅಗಿಯೆ ಎಳುದಿಲ್ಲ, ಇದಕ್ಕ್ ಯಂತಮಾಡುದ್ ..? ದೇವ್ರೇ ಬಲ್ಲ. ಈ ಸಲಿಯೂ ಬ್ಯಾಸಯಿ ಅಷ್ಟಕ್ಕ್ ಅಷ್ಟೇ ಅಂಬಗ್ ಇತ್ತ್” ಮನಸಿನೆಗೆ…

Read More