Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೊಲ್ಲೂರು ದೇವಳದ ಆಭರಣ ಕಳವು ಪ್ರಕರಣ: ಭದ್ರತೆಯ ಬಗ್ಗೆ ಅನುಮಾನ. ಭಕ್ತರ ಆಕ್ರೋಶ
    ವಿಶೇಷ ವರದಿ

    ಕೊಲ್ಲೂರು ದೇವಳದ ಆಭರಣ ಕಳವು ಪ್ರಕರಣ: ಭದ್ರತೆಯ ಬಗ್ಗೆ ಅನುಮಾನ. ಭಕ್ತರ ಆಕ್ರೋಶ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ವರದಿ
    ಕೊಲ್ಲೂರು: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಮೂಕಾಂಬಿಕಾ ದೇವಸ್ಥಾನದ ಗುಮಾಸ್ತನೊಬ್ಬ ಖಜಾನೆಯ ಬೀಗದ ಕೈಯೊಂದಿಗೆ ನಾಪತ್ತೆಯಾಗಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿರುವ ಬೆನ್ನಲ್ಲೇ, ಸಾರ್ವಜನಿಕರು ದೇವರಿಗೆ ಸಲ್ಲಿರುವ ಹರಕೆಯ ವಸ್ತುಗಳ ಭದ್ರತೆಯ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ. ಇದರೊಂದಿಗೆ ಕಾರ್ಯನಿವಹಣಾಧಿಕಾರಿಗಳು ಮತ್ತು ಇತರೇ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ದೇವಳದ ವಿಚಾರ ಅನಗತ್ಯವಾಗಿ ಚರ್ಚಾಸ್ಪದವಾಗುತ್ತಿರುವ ಬಗ್ಗೆ ಭಕ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    Click Here

    Call us

    Click Here

    ಕೊಲ್ಲೂರು ದೇವಳದ ಒಳಗೆ ಒಂದನೇ ನಂಬರಿನ ಸೇವಾ ಕೌಂಟರ್‌ನಲ್ಲಿ ಕಳೆದ ಹದಿನೈದು ವರ್ಷಗಳಿಂದ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಶಿವರಾಮ ಮಡಿವಾಳ ಎಂಬುವವರು ಕಳೆದ ಆರು ದಿನಗಳಿಂದ ಸೇವೆಗೆ ನಾಪತ್ತೆಯಾಗಿರುವುದು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ಯಾರ ಅನುಮತಿಯೂ ಪಡೆಯದೇ ಏಕಾಏಕಿ ಕರ್ತವ್ಯಕ್ಕೆ ಗೈರು ಹಾಜರಾಗಿ ತಲೆಮರೆಸಿಕೊಂಡಿರುವ ಸೇವಾ ಕೌಂಟರ್ ಖಜಾನೆಯ ಕೀಲಿಕೈಯನ್ನು ಕೊಂಡೊಯ್ದಿರುವುದು ಅನುಮಾನಗಳಿಗೆ ಆಸ್ಪದ ನೀಡಿದೆ. ಕುಂದಾಪ್ರ ಡಾಟ್ ಕಾಂ ವರದಿ

    ಆದದ್ದೇನು?
    ಏಕಾಏಕಿ ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿರುವ ಶಿವರಾಮ, ತನಗೆ ಮಧುಮೇಹ ಹಾಗೂ ರಕ್ತದೊತ್ತಡ ಹೆಚ್ಚಾಗಿರುವುದರಿಂದ ಹತ್ತು ದಿನಗಳ ಕಾಲ ರಜೆಯಲ್ಲಿ ತೆರಳುತ್ತಿದ್ದೇನೆ ಎಂದು ತನ್ನ ಒಂದನೇ ನಂಬರಿನ ಕೌಂಟರಿನಲ್ಲಿ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಗೈರು ಹಾಜರಾಗಿರುವ ಅವರು ಭಕ್ತಾದಿಗಳು ಹರಕೆ/ಸೇವಾ ರೂಪದಲ್ಲಿ ಸಲ್ಲಿಸಿದ್ದ ಚಿನ್ನ, ಬೆಳ್ಳಿಯ ಒಡವೆಗಳನ್ನಿಡುವ ಖಜಾನೆಯ ಬೀಗದ ಕೈಯನ್ನು ತಮ್ಮೊಂದಿಗೆ ಕೊಂಡೊಯ್ದಿರುವುದು ಅನುಮಾನಕ್ಕೆ ಎಡೆಮಾಡಿಕೊಂಡಿದೆ. ಕುಂದಾಪ್ರ ಡಾಟ್ ಕಾಂ ವರದಿ

    ಹಣವನ್ನೂ ಕೊಂಡ್ಯೊಯ್ದಿದ್ದರೇ?
    ಶಿವರಾಮ ರಜೆಯಲ್ಲಿ ತೆರಳುವಾಗ ಕೌಂಟರಿನಲ್ಲಿದ್ದ 4 ಲಕ್ಷ ರೂಪಾಯಿಯನ್ನು ಬ್ಯಾಂಕಿಗೆ ಜಮಾ ಮಾಡದೇ ತೆಗೆದುಕೊಂಡು ಹೋಗಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಆದರೆ 4 ಲಕ್ಷ ಮೊತ್ತದ ಹಣವನ್ನು ಶಿವರಾಮ ಅವರ ಸ್ನೇಹಿತ ಸಿಬ್ಬಂದಿಗಳು ಅವರ ಮಡದಿಯ ಮೂಲಕ ಬ್ಯಾಂಕಿಗೆ ಜಮಾ ಮಾಡಿಸಿದ್ದಾರೆ ಎನ್ನಲಾಗಿದೆ. ಕಳೆದ ಹದಿನೈದು ವರ್ಷಗಳಿಂದ ದೇವಳದಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಗಂಡನ ಬಗ್ಗೆ ಯಾವುದೇ ದೂರುಗಳಿಲ್ಲ. ಆದರೆ ಏಕಾಏಕಿ ಈ ಆರೋಪ ಹೊರಿಸುವುದು ಸರಿಯಲ್ಲ. ಸ್ನೇಹಿತರಿಂದ ಪಡೆದ ನಾಲ್ಕು ಲಕ್ಷ ಹಣವನ್ನು ಹೊಂದಿಸುವ ಸಲುವಾಗಿ ಅವರು ಬೆಂಗಳೂರಿಗೆ ತೆರಳಿದ್ದಾರೆ. ಬಂದ ಕೂಡಲೇ ಕೀಲಿಕೈ ಹಿಂದಿರುಗಿಸುವುದಾಗಿ ದೂರವಾಣಿಯಲ್ಲಿ ತಿಳಿಸಿದ್ದಾರೆಂದು ಪೊಲೀಸರಿಗೆ ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ

    ಗುಮಾಸ್ತನ ಕೈಯಲ್ಲಿ ಖಜಾನೆ ಕೀಲಿಕೈ?
    ಕಳೆದ ನಾಲ್ಕು ವರ್ಷಗಳಿಂದ ಶಿವರಾಮ ಸೇವಾ ಕೌಂಟರಿನ ಖಜಾನೆಯ ಕೀಲಿಕೈ ಶಿವರಾಮ ಅವರ ಬಳಿಯೇ ಇದ್ದುದರ ಬಗ್ಗೆ ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೆ ಭದ್ರತೆಯ ಬಗ್ಗೆ ಅನುಮಾನಗಳ ಮೂಡತೊಡಗಿದೆ. ಮುಜರಾಯಿ ಇಲಾಖೆಗೆ ಒಳಪಡುವ ಪ್ರಸಿದ್ಧ ದೇವಸ್ಥಾನದ ಖಜಾನೆಯ ಕೀಲಿಕೈ ಗುಮಾಸ್ತನ ಬಳಿ ಇರುವುದು ಸರಿಯೇ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ದೇವಳದ ಸೊತ್ತಿನ ನಿರ್ವಹಣೆಯ ಬಗ್ಗೆ ಜಾಗೃತೆ ವಹಿಸಬೇಕಾಗಿದ್ದ ಅಧಿಕಾರಿಗಳು ಬೇಜವಾಬ್ದಾರಿ ಹೊಂದಿರುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ. ಮೂರನೇ ಭಾರಿಗೆ ದೇವಳದಲ್ಲಿ ಅಧಿಕಾರಿಗಳ ಆಡಳಿತವಿರುವಾಗ ಇಂತಹ ಪ್ರಕರಣ ನಡೆಯುತ್ತಿದೆ. ಜಿಲ್ಲಾಡಳಿತ ಇದರ ಬಗ್ಗೆ ಎಚ್ಚರ ವಹಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

    Click here

    Click here

    Click here

    Click Here

    Call us

    Call us

    ಮಾಧ್ಯಮಗಳ ಮೇಲೆ ಕಾರ್ಯನಿರ್ವಹಣಾಧಿಕಾರಿ ಗರಂ:
    ಮಾಧ್ಯಮಗಳಲ್ಲಿ ಬರುವ ಕೆಲವು ವಿಷಯಗಳಲ್ಲಿ ಸತ್ಯಾಂಶವಿರುವುದಿಲ್ಲ. ಸುಮ್ಮನೆ ನೀವಿಲ್ಲಿ ಬಂದು ರಂಪ ಮಾಡಬೇಡಿ. ಅಂತದ್ದು ಏನೂ ನಡೆದಿಲ್ಲ. ಆ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಬಂದು ಮೂರುವರೆ ತಿಂಗಳಾದ್ರು ಚಾರ್ಜ್ ಕೊಡಲಿಲ್ಲ. ಸುಮ್ಮನೆ ಏನೆನೋ ಕಲ್ಪಸಿಕೊಂಡು ಬಣ್ಣಕಟ್ಟಿ ಬರೆಯಬೇಡಿ. ಲ್ಲಾದಕ್ಕೂ ರಸೀದಿ ಇದೆ. ಖಜಾನೆ ನನ್ನ ಕಸ್ಟಡಿಯಲ್ಲಿದೆ. ಸಂಜೆ ವೇಳೆಗೆ ಆತ ಬರುತ್ತಾನೆ ಎನ್ನುವ ಮಾಹಿತಿ ಇದೆ. ಒಂದುವೇಳೆ ಬರದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಅಲ್ಲಿಯ ತನಕ ನೀವುಗಳು ಏನೂ ಬರೆಯಲು ಹೋಗಬೇಡಿ. ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್. ಉಮಾ ಮಾಧ್ಯಮದವರ ಮೇಲೆ ಗರಂ ಆದ ಪ್ರಸಂಗ ನಡೆದಿದೆ. ಕುಂದಾಪ್ರ ಡಾಟ್ ಕಾಂ ವರದಿ

    ಶಿವರಾಮ ಮಡಿವಾಳ ಕಾಣೆಯಾದ ಬಗ್ಗೆ ಈವರೆಗೆ ದೇವಳದಿಂದ ದೂರು ದಾಖಲಾಗಿಲ್ಲ. ಪಿಟಿಷನ್ ಆಧಾರದಲ್ಲಿ ಆತನನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೇವೆ. ಆತ ಊರಿಗೆ ಹಿಂದಿರುಗುವ ಬಗ್ಗೆ ಮಡದಿ ತಿಳಿಸಿದ್ದು, ಒಂದು ವೇಳೆ ಬಾರದೇ ಇದ್ದಲ್ಲಿ ನಾವು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    Kollur Kolluru Gold theft incident Shri Mookambika temple Kolluru
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024
    Leave A Reply Cancel Reply

    nine − two =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.