Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬಯಲಾಟ ಯು.ಕೆ. ತಂಡದಿಂದ ಯಕ್ಷಗಾನ ಬ್ಯಾಲೆ ‘ಜಟಾಯು ಮೋಕ್ಷ’ ಯಶಸ್ವಿ ಪ್ರದರ್ಶನ
    ಕಲೆ-ಸಂಸ್ಕೃತಿ

    ಬಯಲಾಟ ಯು.ಕೆ. ತಂಡದಿಂದ ಯಕ್ಷಗಾನ ಬ್ಯಾಲೆ ‘ಜಟಾಯು ಮೋಕ್ಷ’ ಯಶಸ್ವಿ ಪ್ರದರ್ಶನ

    Updated:07/12/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ.
    ಇಂಗ್ಲೆಂಡಿನ ಪ್ರದರ್ಶನ ಕಲೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ, ಬಯಲಾಟ ಯು.ಕೆ ತಂಡದಿಂದ ಹವ್ಯಾಸಿ ಕಲಾವಿದರಿಂದ, ಇಂಗ್ಲೆಂಡಿನ ಮಿಲ್ಟನ್ ಕೀನ್ಸ್ ನಗರದಲ್ಲಿ ಯಕ್ಷಗಾನ ಬ್ಯಾಲೆ ‘ಜಟಾಯು ಮೋಕ್ಷ’ ಪ್ರದರ್ಶನ ಗೊಂಡಿತು.

    Click Here

    Call us

    Click Here

    ಈ ಭಾರಿ ಪ್ರದರ್ಶನಗೊಂಡ ಯಕ್ಷಗಾನ ಬ್ಯಾಲೆ ಜಟಾಯು ಮೋಕ್ಷದ ಪರಿಕಲ್ಪನೆ, ಭಾವರೂಪ, ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ಉಡುಪಿ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ನಿರ್ದೇಶಕರಾದ, ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣ ಅವರ ಮಾಡಿದ್ದರು. ಅವರ ಮಗ ಶಿಶಿರ ಸುವರ್ಣ ಅದನ್ನ ಇಲ್ಲಿ ಇಂಗ್ಲಡಿನಲ್ಲಿ, ಬಯಲಾಟ ಯು.ಕೆಯ ಕೆಲಾವಿದರಿಗೆ ಬಹಳ ಶ್ರದ್ದೆ ಹಾಗೂ ತಾಳ್ಮೆಯಿಂದ ನಿರ್ದೇಶಿಸಿದರು. ಡಾ. ಗುರುಪ್ರಸಾದ್ ಪಟ್ವಾಲ್ ಹಾಗೂ ಗಿರೀಶ್ ಪ್ರಸಾದ್ ಈ ಪ್ರಯತ್ನದಲ್ಲಿ ಸಹಕಾರಿ ಆದರು. ಯಕ್ಷಗಾನ ಕಲೆಯ ಪೂರ್ವರಂಗದ ಕೋಡಂಗಿ ಹಾಗೂ ಬಾಲಗೋಪಾಲ ನೃತ್ಯದ ಸವಿಯನ್ನ ಜನರಿಗೆ ಉಣಿಸಿದರು ಬಯಲಾಟ ಯು.ಕೆಯ ಕಲಾವಿದರು.

    ಸ್ಕೊಟ್ಲಾಂಡಿನ ಆಬಾರ್ದೀನಲ್ಲಿ ನೆಲೆಸಿರುವ ಮಂಗಳೂರು ಮೂಲದ ನವೀನ ಹಾಗೂ ನವ್ಯ ಕಿರೋಡಿಯನ್ ಅವರ ಸುಪುತ್ರರಾದ ತನಿಷ್ ಮತ್ತು ರಿಯಾಂಶ ಬಾಲ ಗೋಪಾಲ ನೃತ್ಯ ಮಾಡಿದರು. ಇವರು ಮುಂದೆ ಬ್ಯಾಲೆಯಲ್ಲಿ ರಾಮ, ಲಕ್ಶ್ಮಣರಾಗಿಯೂ ಮೆರೆದರು. ಡಾ ಗುರುಪ್ರಸಾದ್ ಪಟ್ವಾಲ್ ರಾವಣನಾಗಿ ರಂಗಸ್ಥಳದಲ್ಲಿ ರಂಜಿಸಿದರು. ಯಕ್ಷಗಾನ ರಂಗದಿಂದ ಮರೆಯಾಗುತ್ತಿರುವ ಬಡಗುತಿಟ್ಟಿನ ಬಣ್ಣದ ವೇಷದ ಒಡ್ಡೋಲಗವನ್ನ ರಾವಣ ವೇಷಧಾರಿ ಈ ಭಾರಿ ಮಾಡಿ ಜನರಿಗೆ ತೋರಿಸಿದರು. ಗಿರೀಶ್ ಪ್ರಸಾದರ ಜಟಾಯು ಬಹಳ ಜನ ಮನ್ನಣೆ ಪಡೆಯಿತು. ಇಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ. ದೀಪಾ ಪಟ್ವಾಲ್ ಮಾಯಾ ಜಿಂಕೆಯಾಗಿ ರಂಜಿಸಿದರು. ಉದ್ಯಮಿ ನಿರುಪಮಾ ಶ್ರೀನಾಥ್ ಸೀತೆಯಾಗಿ ಬಹಳ ಸುಂದರ ಅಭಿನಯ ನೀಡಿದರು. ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣರ ಸುಪುತ್ರ, ಶಿಶಿರ ಸುವರ್ಣರ ಕಪಟ ಸನ್ಯಾಸಿ ಅಭಿನಯ, ಈ ಸುಂದರ ಗುರು ಪರಂಪರೆಯ ಶಕ್ತಿ ಹಾಗೂ ಸಾಧ್ಯತೆಗಳ ಪರಿಚಯ ನೀಡಿತು. ಈ ಭಾರಿ ನಿರ್ದೇಶಿಸಿದ ಶಿಶಿರ ಸುವರ್ಣರನ್ನು ಸನ್ಮಾನಿಸಿ ಗೌರವಿಸಿದರು.

    ಇಂಗ್ಲೆಂಡಿನ ಬಯಲಾಟ ಯು.ಕೆ. ಯಕ್ಷಗಾನ ತಂಡ ಬೈಂದೂರು ಮೂಲದ, ಪ್ರಸ್ತುತ ಇಂಗ್ಲೆಂಡಿನ ಡೋಂಕಾಸ್ಟರ್ ನಗರದಲ್ಲಿ ವೈದ್ಯರಾಗಿರುವ ಡಾ. ಗುರುಪ್ರಸಾದ್ ಪಟ್ವಾಲ್ ಅವರು ಪ್ರಾರಂಭಿಸಿ, ನಡೆಸಿಕೊಂಡು ಬರುತ್ತಿರುವ ಹವ್ಯಾಸಿ ಯಕ್ಷಗಾನ ತಂಡ. ಮಾರಣಕಟ್ಟೆ ಮೇಳದ ಪ್ರಧಾನ ಸ್ತ್ರೀ ವೇಷಧಾರಿ ಶ್ರೀಧರ ಗಾಣಿಗ ಅವರು ಬಯಲಾಟ ಯು.ಕೆಯ ವಿದ್ಯಾರ್ಥಿಗಳಿಗೆ ಪ್ರಥಮ ಗುರುಗಳಾದರು. ಆನ್ಲೈನ್ ಕ್ಲಾಸು ನಡೆಸಲು, ಹಾಗೂ ವೇಷ ಭೂಷಣ ಒದಗಿಸಲು ಸಹಾಯ ಮಾಡಿದರು. ಶ್ರೀಧರ ಗಾಣಿಗರ ತಾಳ್ಮೆಯ ಯಕ್ಷಗಾನ ಶಿಕ್ಷಣದಿಂದ, ಇಲ್ಲಿನ ವಿದ್ಯಾರ್ಥಿಗಳು ಬಹಳ ಶ್ರದ್ದೆಯಿಂದ ಕಲಿತು, ಯಕ್ಷಗಾನ ಪ್ರದರ್ಶನ ಮಾಡಲು ಸಮರ್ಥರಾದರು. ಬಯಲಾಟ ಯು.ಕೆಯ ವಿದ್ಯಾರ್ಥಿ, ಇಂಗ್ಲೆಂಡಿನಲ್ಲಿ ನೆಲೆಸಿರುವ ಗಿರೀಶ್ ಪ್ರಸಾದ್ ಅವರು ಶ್ರೀಧರ ಗಾಣಿಗರಿಗೂ, ಡಾ. ಗುರುಪ್ರಸಾದ್ ಪಟ್ವಾಲರಿಗೂ ಈ ಕ್ಲಾಸುಗಳನ್ನ ನಡೆಸುವಲ್ಲಿ ಬಹಳ ಸಹಕರಿಸಿದರು. ಅವರ ಜೊತೆ, ವಿಮಾನ ತಂತ್ರಜ್ಞ ಯೋಗಿಂದ್ರ ಮರವಂತೆ ಅವರು ಹಲವು ಕಾರ್ಯಕ್ರಮದಲ್ಲಿ ಭಾಗಿಯಾದರು.

    ಕೊರೋನಾ ವೈರಸ್ ಮೊದಲ ಭಾರಿಗೆ ಭಾರತದಲ್ಲಿ ಹಬ್ಬಿದಾಗ, ಹಲವು ಯಕ್ಷಗಾನ ಕಲಾವಿದರು ಆರ್ಥಿಕವಾಗಿ ಬಹಳ ಕಷ್ಟ ಅನುಭವಿಸಿದರು. ಅವರಿಗೆ ಸಹಾಯವಾಗಲೆಂದು, ಇಲ್ಲಿ ಯಕ್ಷಗಾನ ತರಭೇತಿಯನ್ನು ಆನ್ಲೈನ್ ಮೂಲಕ ಈ ಬಯಲಾಟ ಯು.ಕೆ ಹೆಸರಿನಲ್ಲಿ ಡಾ. ಗುರುಪ್ರಸಾದ್ ಪಟ್ವಾಲ್ ಪ್ರಾರಂಭಿಸಿದರು. ಈ ಕ್ಲಾಸುಗಳು ಸಂಗ್ರಹಿಸಿದ ಹಣವನ್ನ ಊರಿನಲ್ಲಿ ಕಷ್ಟದಲ್ಲಿದ್ದ ಯಕ್ಷಗಾನ ಕಲಾವಿದರ ಕುಟುಂಬಕ್ಕೆ ಒದಗಿಸಿದರು. ಬಯಲಾಟ ಯು.ಕೆ. ಇಂಗ್ಲೆಂಡಿನಲ್ಲಿ ಹಲವಡೆ ಯಕ್ಷಗಾನವನ್ನ ಪ್ರದರ್ಶಿಸಿರುವ ಹಾಗೂ ಅಂತಾರಾಷ್ಟ್ರೀಯ ಕಲಾ ಸಮ್ಮೇಳನಗಲ್ಲಿ ರ್ನಾಟಕದ ಕಲೆಯನ್ನ ಮೊದಲ ಭಾರಿಗೆ ಪ್ರದರ್ಶಿಸಿದೆ.

    Click here

    Click here

    Click here

    Call us

    Call us

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ

    06/12/2025

    ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ

    06/12/2025

    ಸುಜ್ಞಾನ ಪಿಯು ಕಾಲೇಜಿನಲ್ಲಿ ʼಕಂಪ್ಯೂಟರ್ ಲ್ಯಾಬ್ʼ ಅನಾವರಣ

    06/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ
    • ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್‌

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d