ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರ್ವರ ಮೂಲಕ ಸಮಾಜದ ಏಳಿಗೆ ಒಗ್ಗಟ್ಟಾಗಿ ಶ್ರಮಿಸಿದರೆ ಅಭಿವೃದ್ಧಿ ಸಾಧ್ಯವಿದೆ. ಗಳಿಕೆಯ ಹಣ ಟ್ರಸ್ಟ್ ಮೂಲಕ ಸದ್ವಿನಿಯೋಗವಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ವಿಶ್ವ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ಶಶಿಧರ್ ನಾಯಕ್ ಹೇಳಿದರು.

ಅವರು ಬೈಂದೂರು ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್ ಇದರ ಹದಿನಾಲ್ಕನೆಯ ವರ್ಷದ ಟ್ರಸ್ಟ್ ದಿನಾಚರಣೆಯನ್ನು ಭಾನುವಾರ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಟ್ರಸ್ಟ್ ಗಳಾದ ಬಿ. ರಾಮಕೃಷ್ಣ ಶೇರುಗಾರ್ ವಹಿಸಿ ಮಾತನಾಡಿ, ಟ್ರಸ್ಟಿಗೆ ದೇಣಿಗೆ ನೀಡಿದ ಹಣ ಸರಿಯಾದ ರೀತಿಯಲ್ಲಿ ವಿನಿಯೋಗ ಆಗಬೇಕು ಎಂಬುದು ನಮ್ಮ ಕಾಳಜಿ. ಆ ಮೂಲಕ ಸಮಾಜದಲ್ಲಿ ಅಗತ್ಯವುಳ್ಳವರಿಗೆ ನೆರವು ನೀಡಲು ಸಾಧ್ಯವಿದೆ. ಟ್ರಸ್ಟ್ ಮೂಲಕ ಆರಂಭವಾದಗಲಿಂದ ಹಲವಾರು ಮಂದಿಗೆ ನೆರವು ನೀಡಲಾಗಿದೆ ಎಂದರು.



ಈ ಸಂದರ್ಭ ಸುವರ್ಣ ವಾಹಿನಿ 2025ರ ಸ್ಟೇಟ್ ಹೆಲ್ತ್ಕೇರ್ ಎಕ್ಸಲೆನ್ಸ್ ಅವಾರ್ಡ್ ಪುರಸ್ಕೃತ ಡಾ. ಪ್ರಭಾಕರ ಹೆಚ್., ಮಾಹೆ ಮಣಿಪಾಲದ ಸಹ ಉಪಕುಲಪತಿ ಡಾ. ಕರುಣಾಕರ ಎ. ಕೋಟೇಗಾರ್, ಕಾರ್ಕಳದ ಪೊಲೀಸ್ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಪ್ರಸಾರ ಸೇವೆಯ ನಿವೃತ್ತ ಅಧಿಕಾರಿ ಡಾ. ಶಿವಾನಂದ ಬೆಕಲ್, ಕುಂದಾಪುರದ ಆಡಿಟರ್ ಕಿರಣ ಕುಮಾರ್ ಕೆ., ಹುಬ್ಬಳ್ಳಿ ಧಾರವಾಡ ರಾಮಕ್ಷತ್ರಿಯ ಸಂಘದ ಗೌರವಾಧ್ಯಕ್ಷ ರಾಜುರಾವ್ ಧಾರವಾಡ, ಕಾರ್ಕಳ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರು, ಬೈಂದೂರು ರಾಮಕ್ಷತ್ರಿಯ ಸಮಾಜ ಅಧ್ಯಕ್ಷ ರಾಮಕೃಷ್ಣ ಸಿ., ಬೈಂದೂರು ರಾಮಕ್ಷತ್ರಿಯ ಮಾತೃ ಮಂಡಳಿ ಅಧ್ಯಕ್ಷೆ ಸೀತಾ ಭಾಸ್ಕರ್ ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಗೃಹ ನಿರ್ಮಾಣ ಯೋಜನೆಯ ಫಲಾನುಭವಿಗಳಿಗೆ ಮನೆ ಕೀಲಿಕೈ ಹಸ್ತಾಂತರಿಸಲಾಯಿತು. ಬೈಂದೂರು ವ್ಯಾಪ್ತಿಯ ರಾಮಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ಪುಸ್ತಕ ವಿತರಣೆ, ವಿಶೇಷ ಧನಸಹಾಯ ವಿತರಣೆ ಹಾಗೂ ಅಶಕ್ತರಿಗೆ ಸಹಾಯಧನವನ್ನು ಸಮಾರಂಭದ ವೇದಿಕೆಯಲ್ಲಿ ವಿತರಿಸಲಾಯಿತು.
ನೂತನ ಟ್ರಸ್ಟೀಗಳಾಗಿ ಸೇರ್ಪಡೆಗೊಂದ ವಿಜಯ ಹೆಬ್ಬಾಗಿಲು ಹಾಗೂ ರಾಮದಾಸ್ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟೀಗಳಾದ ಕೆ.ಜಿ. ನಾಗಪ್ಪಯ್ಯ, ವೆಂಕಟ್ರಮಣ ಬಿಜೂರು, ಜಯಾನಂದ ಹೋಬಳಿದಾರ್, ಬಿ. ಶ್ರೀನಿವಾಸ ಶೇರುಗಾರ್, ಜಯಂತಿ ನಾರಾಯಣ ರಾವ್, ಅಶೋಕ್ ಕುಮಾರ್ ಬಾಡ, ನಾಗರಾಜ್ ಬಿಜೂರು, ಬಿ. ಶ್ರೀಧರ ಪಡುವರಿ, ಗೋಪಾಲಕೃಷ್ಣ ಕಲ್ಮಕ್ಕಿ, ಶ್ರೀನಿವಾಸ ಜಿ ಶಿವಮೊಗ್ಗ, ಶ್ರೀಧರ ಪಿ ಪಡುವರಿ, ಪದ್ಮನಾಭ ಕೊತ್ವಾಲ್, ಚಂದ್ರಶೇಖರ ಕೆ. ಕೋಟೇಶ್ವರ, ವೆಂಕಟೇಶ್ ಕೆ.ಟಿ ಬಿಜೂರು, ಕೃಷ್ಣಯ್ಯ ವಿ. ಮದ್ದೋಡಿ, ಸೀತಾ ಶ್ರೀನಿವಾಸ ಪಡುವರಿ, ವಸಂತಿ ವಾಸುದೇವ ಬೈಂದೂರು, ಪಾರ್ವತಿ ಸುಬ್ರಾಯ ಹೊಸಾಡುಮನೆ ಉಪಸ್ಥಿತರಿದ್ದರು.

ಶ್ರೀ ವೆಂಕಟರಮಣ ಬಿಜೂರು ಪ್ರಸ್ತಾವನೆಗೈದರು. ಸಂಚಾಲಕರಾದ ಆನಂದ ಮದ್ದೋಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಚಾಲಕ ಕೇಶವ ನಾಯಕ ಅವರು ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಟ್ರಸ್ಟಿಗಳಾದ ಜಯಾನಂದ ಹೋಬಳಿದಾರ್ ಸ್ವಾಗತಿಸಿ, ಶಿಕ್ಷಕ ಮಹಾಬಲೇಶ್ವರ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ಸುಧಾಕರ ಪಿ., ವೆಂಕಟರಮಣ ಮಯ್ಯಾಡಿ, ನಾಗರಾಜ್ ಬೆಳ್ಕಿ, ಭಾಸ್ಕರ್ ಬಾಡ, ರಾಜೇಶ್ ನಾಯ್ಕ್, ರವಿರಾಜ್ ಮಯ್ಯಾಡಿ, ಮೊದಲಾದವರು ಸಹಕರಿಸಿದರು.
















