ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ‘ಟೀಮ್ ಕುಂದಾಪುರಿಯನ್ಸ್’ ವತಿಯಿಂದ ಬೆಂಗಳೂರು ವಿಜಯನಗರದ ಬಿ.ಜಿ.ಎಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುಂದಾಪ್ರ ಕನ್ನಡ ಉತ್ಸವದಲ್ಲಿ ಕಂಬಳ ಕ್ಷೇತ್ರದಲ್ಲಿ ಸೆನ್ಸಾರ್ ವಿಥ್ ಲೇಸರ್ ಫಿನಿಷ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ವೆಂಕಟೇಶ್ ಪೂಜಾರಿ ಬಡಾಮನೆ ಅವರಿಗೆ ಕುಂದಾಪ್ರ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೈಂದೂರು ತಾಲೂಕು ನಂದನವನ ಗ್ರಾಮದಲ್ಲಿ ಅನಂತ ಪೂಜಾರಿ ಹಾಗೂ ಸೀತು ಪೂಜಾರಿ ದಂಪತಿ ಪುತ್ರನಾಗಿ 1982 ಅಕ್ಟೋಬರ್ 1ರಂದು ಜನಿಸಿದ ಅವರು ತನ್ನ ಶಿಕ್ಷಣವನ್ನು ಉಪ್ಪುಂದ ಪದವಿ ಪೂರ್ವ ಕಾಲೇಜ್ನಲ್ಲಿ ಪೂರೈಸಿದರು. ನಂತರ ತನ್ನ ಮುಂದಿನ ಶಿಕ್ಷಣಕ್ಕಾಗಿ ಮಂಗಳೂರಿಗೆ ತೆರೆಳಿದ ಅವರು ಐಟಿಐ ಪೂರೈಸಿದ್ದಾರೆ ಹಾಗೂ ಸುಮಾರು 20 ವರ್ಷದಿಂದ ಇಲೆಕ್ಟ್ರಿಷಿಯನ್ ಆಗಿ ತನ್ನದೇ ಊರಲ್ಲಿ ಕೆಲಸದಲ್ಲಿ ತೊಡಗಿದ್ದಾರೆ. ಇವರಿಗೆ ಹಲವಾರು ವರ್ಷಗಳಿಂದ ಕಂಬಳದ ಬಗ್ಗೆ ತೀವ್ರ ಕುತೂಹಲ ಹಾಗೂ ಹಲವಾರು ಕಂಬಗಳಲ್ಲಿ ಕೋಣಗಳದ ಪೋಷಕರರಾಗಿ ಕಂಬಳ ಮಾಡಿದ್ದರು. ತನ್ನ ಹಿರಿಯ ಸಹೋದರ ರಾಜು ಪೂಜಾರಿ ಬಡಾಮನೆ ಇವರ ಮಾಲಿಕತ್ವದಲ್ಲಿ ತೆಂಕು ಹಾಗು ಬಡಗು ಹಲವಾರು ಕಂಬಳಗಳಲ್ಲಿ ಹಲವು ಬಹುಮಾನ ಗೆದ್ದ ಹೆಗ್ಗಳಿಕೆ ಇವರದ್ದು. ಸುಪ್ರಸಿದ್ಧ ಬಾರ್ಕೂರು ಕಂಬಳದಲ್ಲಿ ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಕೂಡ ಸಲ್ಲಿದೆ.
ಕಂಬಳ ಕೋಣ ಓಡಿ ಬರುವ ಅವಧಿಯನ್ನು ನೋಡಿ ಅದರ ಅನುಸಾರವಾಗಿ ಬಹುಮಾನ ವಿತರಿಸುವುದು ಮುಂಚೆ ಇಂದ ಬಂದ ಸಂಪ್ರದಾಯ. ಆದರೆ ಲೋಪ ದೋಷ ಆಗುವ ಸಂಭವ ಜಾಸ್ತಿ. ಅದಕ್ಕಾಗಿ ಅದಕ್ಕೊಂದ ತಂತ್ರಜ್ಞಾನಾದ ಅವಶ್ಯಕತೆ ಇತ್ತು. ಈ ಕೊರೆತೆಯನ್ನು ಅರಿತ ಇವರು ಸಾಂಪ್ರದಾಯಿಕ ಕಂಬಳಕ್ಕೆ ಸೆನ್ಸಾರ್ ಟೈಮರ್ ಅಳವಡಿಸಿ ಪಾರದರ್ಶಕತೆ ತರಬೇಕು ಎಂದು ಪಣತೊಟ್ಟರು. ಸದ್ಯಕ್ಕೆ ಉಡುಪಿ ಜಿಲ್ಲೆಯ ಬಹುಪಾಲು ಕಂಬಳದಲ್ಲೂ *Sensor with laser finish* ಎನ್ನುವ ತಂತ್ರಜ್ಞಾನ ಅಳವಡಿಸಿದ ಹೆಗ್ಗಳಿಕೆ ವೆಂಕಟೇಶ್ ಬಡಾಮನೆ ಇವರದ್ದು. ಇದಕ್ಕೆ ಬೇಕಾದ ತರಬೇತಿಯನ್ನು ರತ್ನಾಕರ್ ನಾಯಕ್ ಕಾರ್ಕಳ ಅವರಿಂದ ಪಡೆದಿದ್ದು, ಇವರು ತನ್ನದೇ ಆದ ತಂಡ ನಿರ್ಮಿಸಿ ಸೇವೆ ಸಲ್ಲಿಸುತ್ತಾ ಬರುತ್ತಿರುತ್ತಾರೆ. ಈ ತಂತ್ರಜ್ಞಾನದಿಂದ ಪಾರದರ್ಶಕವಾಗಿ ಕೋಣ ಓಡುವ ಸಮಯವನ್ನು ಅರೆಕ್ಷಣದಲ್ಲೇ ಗುರುತಿಸಬಹುದು. ಈಗಾಗಲೇ 5 ವರ್ಷಗಳಿಂದ ಸುಮಾರು 150 ಕ್ಕೂ ಹೆಚ್ಚು ಕಂಬಳದಲ್ಲಿ ಯಶಸ್ವಿಯಾಗಿ ಈ ತಂತ್ರಜ್ಞಾನ ಅಳವಡಿಸಿದ ಹೆಗ್ಗಳಿಕೆ ಇವರದು.
ಇವರ ಹೆಂಡತಿ ಹೆಸರು ಪ್ರೇಮ ಪೂಜಾರಿ ಮಕ್ಕಳು ನಿಹಾಲ್ ಮತ್ತು ನಿಶ್ವಿಕಾ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು ಸಂತಸದ ವಿಚಾರ. ಇದಲ್ಲದೆ ಹಲವಾರು ಸಮಾಜ ಮುಖಿ ಕೆಲಸ, ಹಲವಾರು ನಾಟಕ ಗಳಲ್ಲಿ ಅಭಿನಯಿಸಿ SMS ಕಲಾ ತಂಡ ನಾಯ್ಕನಕಟ್ಟೆ ಇದರ ಸಕ್ರಿಯ ಸದಸ್ಯರಾಗಿದ್ದಾರೆ.
















