ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೃದ್ಧ ಬೈಂದೂರು ಯೋಜನೆಯಲ್ಲಿ ಭೂಮಿ ಟ್ರಸ್ಟ್ ಸಹಕಾರದೊಂದಿಗೆ ಹಿಂದೂ ರುದ್ರಭೂಮಿ ಬೈಂದೂರು ಇಲ್ಲಿಗೆ ಸಿಲಿಕಾನ್ ಚೇಂಬರ್ ಒದಗಿಸಲು 1 ಲಕ್ಷ ರೂಪಾಯಿ ಸಹಾಯಧನವನ್ನು ಶಾಸಕರದ ಗುರುರಾಜ ಗಂಟಿಹೊಳೆ ಅವರು ಮುಕ್ತಿಧಾಮ ಟ್ರಸ್ಟ್ ಬೈಂದೂರು ಇದರ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಹಿಂದೂ ರುದ್ರ ಭೂಮಿ ಬೈಂದೂರು ಇಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಊರಿನ ರುದ್ರಭೂಮಿಗೆ ಸಹಾಯಧನ ನೀಡಿದ ಭೂಮಿ ಟ್ರಸ್ಟ್ ಸದಸ್ಯರು ಹಾಗೂ ರುದ್ರಭೂಮಿಯನ್ನು ವ್ಯವಸ್ಥಿವಾಗಿ ನಡೆಸುತ್ತಿರುವ ಮುಕ್ತಿಧಾಮ ಟ್ರಸ್ಟ್ ಸದಸ್ಯರಿಗೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಧನ ಕೊಡಿಸುವಲ್ಲಿ ಸಹಕರಿಸಿದ ಚರಣ್ ಬೈಂದೂರು, ಭೂಮಿ ಟ್ರಸ್ಟ್ ಪದಾಧಿಕಾರಿಗಳು, ಮುಕ್ತಿಧಾಮ ಟ್ರಸ್ಟ್ನ ಸರ್ವಸದಸ್ಯರು, NECF ಹಾಗೂ ಕ್ಲೀನ್ ಕಿನಾರಾ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ, ಪ್ರಮುಖರಾದ ಗೋಪಾಲ್ ಪೂಜಾರಿ ವಸ್ರೆ, ರಾಘು ಶೇರಿಗಾರ್, ದಿನೇಶ್ ಗಾಣಿಗ ಮತ್ತು ರಾಜೇಶ್ ಆಚಾರ್ , ಶ್ರೀಧರ್ ಜಿ. ಪಡುವರಿ, ಗುರು ಪಡುವರಿ, ಮಂಜುನಾಥ ಶೆಟ್ಟಿ, ರಾಮ ಮೊಗವೀರ, ಉಪಾಧ್ಯಕ್ಷರು, ಮುಕ್ತಿಧಾಮ ಟ್ರಸ್ಟ್, ರಾಮ ದೇವಾಡಿಗ ಕೆರೆಕಟ್ಟೆ, ದಯಾನಂದ, ಸುಬ್ರಹ್ಮಣ್ಯ ಸೇಟ್, ಪ್ರಸ್ಸನ್ನ ಭಾಗವಹಿಸಿದರು.
ರುದ್ರಭೂಮಿಗೆ ಸಹಾಯಧನ ನೀಡಿದ ಶಾಸಕರಿಗೆ ಹಾಗೂ ಭೂಮಿ ಟ್ರಸ್ಟ್ ಸದಸ್ಯರಿಗೆ ಮುಕ್ತಿಧಾಮ ಟ್ರಸ್ಟ್ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.
















