ಯುವಕವಿ ಜಗದೀಶ ದೇವಾಡಿಗರ ನಿರ್ಭಯಾ ಕವನ ಸಂಕಲನ ಬಿಡುಗಡೆ

Call us

Call us

Call us

ಕುಂದಾಪುರ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಇವರ ಆಶ್ರಯದಲ್ಲಿ ಉಡುಪಿ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆದ ರಾಜ್ಯಮಟ್ಟದ ಚುಟುಕು ಸಾಹಿತ್ಯ ವಿಚಾರ ಸಂಕಿರಣದಲ್ಲಿ ಯುವಕವಿ ಜಗದೀಶ ದೇವಾಡಿಗ ಕುಪ್ಪುಮನೆ, ಮುಳ್ಳಿಕಟ್ಟೆ ಅವರ ೩ನೇ ಕೃತಿ ನಿರ್ಭಯಾ ಕವನ ಸಂಕಲನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೋ| ಮೇಟಿ ಮುದಿಯಪ್ಪ ಬಿಡುಗಡೆಗೊಳಿಸಿದರು.

Call us

Click Here

ಈ ಸಂದರ್ಭದಲ್ಲಿ ಯುವಕವಿ ಜಗದೀಶ ದೇವಾಡಿಗ ಕುಪ್ಪುಮನೆ, ಮುಳ್ಳಿಕಟ್ಟೆ, ತುಳು ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಧಾರವಾಡದ ಪ್ರಸರಾಂಗದ ನಿರ್ದೇಶಕ ಚನ್ನಬಸವ ಶೆಟ್ರು, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹುಬ್ಬಳ್ಳಿ ಘಟಕದ ಅಧ್ಯಕ್ಷ ಎಂ. ಡಿ. ಮುತಾಲಿಕ್ ದೇಸಾಯಿ, ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಪ್ರೋ ಜಿ. ಯು. ನಾಯಕ್ ಅಂಕೋಲ ಇನ್ನಿತರರು ಉಪಸ್ಥಿತರಿದ್ದರು.

Leave a Reply