ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವರಿ ಮಠ, ಯಡಮೊಗೆ ಇದರ ಆಶ್ರಯದಲ್ಲಿ ನಮ್ಮ ಮಠ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯಡಿ ಶ್ರೀ ಗುರುವಂದನೆ ಮತ್ತು ಶ್ರೀ ಗುರುಪಾದ ಪೂಜಾ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಶ್ರೀ ಕ್ಷೇತ್ರ ಹಲವರಿ ಮಠದ ಪೂಜ್ಯ ಪೀಠಾಧಿಪತಿಗಳಾದ, ನಾಥಪಂಥದ ಪೀರ್ ಯೋಗಿ ಜಗದೀಶ್ನಾಥ್ ಜೀಯವರು ಈ ಕಾರ್ಯಕ್ರಮದ ಅಂಗವಾಗಿ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ಆಗಮಿಸ ಧಾರ್ಮಿಕ ಪ್ರವಚನ ನೀಡಿದರು.

ದೇಗುಲಕ್ಕೆ ವಿಶೇಷ ಶ್ರೀಗಳ ಮೂಲಕ ನೆರವೆರಿಸಲಾಯಿತು.ಪಾದಪೂಜೆಯನ್ನು ಅರ್ಚಕ ವೃಂದದ ಪ್ರಮುಖರಾದ ಪ್ರಕಾಶ್ ಜೋಗಿ ನೆರವೆರಿಸಿದರು.
ಈ ಸಂದರ್ಭದಲ್ಲಿ ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಆನಂದ್ ಸಿ. ಕುಂದರ್, ಮಠದ ಪ್ರದಾನಕಾರ್ಯದರ್ಶಿ ಕೇಶವ ಜೋಗಿ, ಪ್ರದಾನ ಅರ್ಚಕ ಸುಬ್ರಾಯ ಜೋಗಿ, ದೇಗುಲದ ಪಾತ್ರಿಗಳಾ ಸುರೇಶ್ ಜೋಗಿ ಕೋರ್ಗಿ, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಅರ್ಚಕ ಸಮುದಾಯ ಪ್ರಮುಖರಾದ ರವೀಂದ್ರ ಜೋಗಿ, ಪ್ರಶಾಂತ್ ಜೋಗಿ, ಅಮೃತ್ ಜೋಗಿ, ಮಹಾಬಲ ಜೋಗಿ, ರೂಪೇಶ್ ಜೋಗಿ, ಅರವಿಂದ ಜೋಗಿ, ಗಣೇಶ್ ಜೋಗಿ, ದಯಾನಂದ ಜೋಗಿ, ಲಕ್ಷ್ಮಣ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ ಅರ್ಚಕ ವೃಂದ ಹಾಗೂ ಕೋಟದ ಸಮಸ್ತ ಜೋಗಿ ಕುಟುಂಬದವರ ಸಹಯೋಗದೊಂದಿಗೆ ಈ ಕಾರ್ಯಕ್ರಮವು ಸಂಯೋಜನೆಗೊಂಡಿತು.
















