Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನೀವು ಪತ್ರಿಕೆಗೆ ಬರೆಯಬೇಕೆ? – ಹಾಗಿದ್ದರೆ ಈ ಪುಸ್ತಕ ಓದಿ!
    ಇತರೆ

    ನೀವು ಪತ್ರಿಕೆಗೆ ಬರೆಯಬೇಕೆ? – ಹಾಗಿದ್ದರೆ ಈ ಪುಸ್ತಕ ಓದಿ!

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ‘ಪತ್ರಿಕೆಗೆ ಬರೆಯೋದು ಹೇಗೆ?’ ಎಂಬ ಪುಸ್ತಕದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಕಾರಣವಿಷ್ಟೆ, ತಮ್ಮ ಫೇಸ್ಬುಕ್, ಟ್ವಿಟರ್ ಗೋಡೆಗಳಲ್ಲಿ ಬರೆದುಕೊಳ್ಳುವವರು, ಅದೇ ಬರಹವನ್ನು ಹೇಗೆ ಪತ್ರಿಕೆಯೊಂದಕ್ಕೆ ಬರೆಯಬಹುದು ಎಂಬುದನ್ನು ಈ ಪುಸ್ತಕ ಹೇಳುತ್ತಿದ್ದೆ.

    Click Here

    Call us

    Click Here

    ಯುವ ಪತ್ರಕರ್ತ ವಿನಾಯಕ ಕೋಡ್ಸರ, ತಮ್ಮದೇ ಮಿಥಿಲಾ ಪ್ರಕಾಶನದ ಮೂಲಕ ಈ ಪುಸ್ತಕವನ್ನು ಹೊರಗೆ ತರುತ್ತಿದ್ದಾರೆ. “ನಮ್ಮಲ್ಲಿ ಬರೆಯಬೇಕೆಂಬುದು ಬಹಳಷ್ಟು ಜನರ ಬಯಕೆ. ಬರೆಯುತ್ತಾರೆ ಕೂಡ. ಆದರೆ ಯಾವ ಪತ್ರಿಕೆಗೆ ಹೇಗೆ ಬರೆಯಬೇಕು? ಏನು ಬರೆಯಬೇಕು ಎಂದು ಗೊತ್ತಿಲ್ಲರುವುದಿಲ್ಲ. ಇನ್ನು ಕೆಲ ಪುರವಣಿಯಲ್ಲಿ ಕುಳಿತವರಿಗೆ ಲೇಖಕನಿಗೆ ಚ್ಯುತಿಯಾಗದಂತೆ ಹೇಗೆ ಎಡಿಟ್ ಮಾಡಬೇಕು ಎಂಬ ಸ್ಪಷ್ಟತೆಯಿಲ್ಲ. ಅದಕ್ಕಿಂತ ಮುಖ್ಯವಾಗಿ ಪುರವಣಿಗಳು ಗಂಭೀರತೆ ಕಳೆದುಕೊಳ್ಳುತ್ತಿವೆ. ಓರ್ವ ಲೇಖಕನ ಲೇಖನಕ್ಕೆ ಪ್ರತಿಕ್ರಿಯಿಸುವ ಸೌಜನ್ಯತೆಯನ್ನು ಕಳೆದುಕೊಂಡಿದೆ ಎಂಬ ದೂರು ಇದೆ. ಮತ್ತೊಂದು ಮಗ್ಗುಲಿನಲ್ಲಿ ನೋಡಿದರೆ ಉದ್ದನೆಯ ಇಡೀ ಲೇಖನವನ್ನು ಪೂರ್ತಿಯಾಗಿ ನೋಡುವ ವ್ಯವದಾನ ಹಲವರಿಗಿಲ್ಲ ಎಂಬುದು ಬಹುವಾಗಿ ಕಾಡುತ್ತಿತ್ತು. ಅದಕ್ಕೆ ಉತ್ತರವಾಗಿ ಈ ಪುಸ್ತಕ’ ಎಂದು ಕೋಡ್ಸರ ಬರೆದುಕೊಂಡಿದ್ದಾರೆ. ಅಲ್ಲಿಗೆ ಪುಸ್ತಕದ ಉದ್ದೇಶ ಮತ್ತು ಅದರಲ್ಲಿರುವ ವಸ್ತು ಸ್ಪಷ್ಟವಾಗಿದೆ.

    ಕಾರ್ಯನಿರತ ಪತ್ರಕರ್ತರು, ಫ್ರೀಲಾನ್ಸ್ ಬರಹಗಾರರು ಇದರಲ್ಲಿ ಬರೆದಿರುವುದು ವಿಶೇಷ. ಶ್ರೀವತ್ಸ ಜೋಶಿ, ಶಿವಾನಂದ ಕಳವೆ, ರೋಹಿತ್ ಚಕ್ರತೀರ್ಥ, ನವೀನ್ ಸಾಗರ್, ಶ್ರೀನಿಧಿ ಡಿ.ಎಸ್, ಶ್ರೀನಿಧಿ ಟಿ.ಜಿ, ಮಾವೆಂಸ ಪ್ರಸಾದ್, ಜಯದೇವ್ಪ್ರಸಾದ್ ಮೊಳೆಯಾರ್, ವಿಕಾಸ್ ನೇಗಿಲೋಣಿ, ರಜನಿ ಹೆಗಡೆ, ವಿದ್ಯಾರಶ್ಮಿ ಪೆಲತ್ತಡ್ಕ ಪತ್ರಿಕಾ ಬರವಣಿಗೆ ಕುರಿತು ಬರೆದಿದ್ದಾರೆ. ನಿರಂಜನ ವಾನಳ್ಳಿ ಮುನ್ನುಡಿ, ರವಿ ಹೆಗಡೆಯವರ ಬೆನ್ನುಡಿ ಪುಸ್ತಕಕ್ಕಿದೆ. ಫೆ.೨೦ರ ಶನಿವಾರ ಸಂಜೆ 4:30ಕ್ಕೆ ಕೆ.ಆರ್.ಸರ್ಕಲ್ಲಿನ ಯುವಿಸಿಇ ಆವರಣದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ. ಆಕರ್ಷಕ ವಿನ್ಯಾಸದೊಂದಿಗೆ ಬಂದಿರುವ ಪುಸ್ತಕ, ಮುನ್ನುಡಿಯಲ್ಲಿ ನಿರಂಜನ ವಾನಳ್ಳಿಯವರು ಹೇಳಿದಂತೆ ಪತ್ರಿಕಾ ಬರವಣಿಗೆಗೆ ಮಾರ್ಗದರ್ಶಿಯಾಗಬಲ್ಲ ಕೃತಿ. ಮಿಸ್ ಮಾಡದೆ ಓದಿ.

    ***

    ಬರಹಗಾರ ಶ್ರೀವತ್ಸ ಜೋಶಿ ಏನಂತಾರೆ??

    Click here

    Click here

    Click here

    Click Here

    Call us

    Call us

    ಪತ್ರಿಕೆಗಳಿಗೆ ಬರೆಯುವುದು ಹೇಗೆ ಎಂಬ ವಿಚಾರದಲ್ಲಿ ಇನ್ನೂ ಮುಸುಕಿದ ಮಬ್ಬಿನಲ್ಲಿ ಇರುವವರನ್ನು ಕೈಹಿಡಿದು ನಡೆಸಬಲ್ಲ ಕರುಣಾಳು ಬೆಳಕು ಇದು! like emoticon ‘How to…’ ಪುಸ್ತಕವಾದ್ದರಿಂದ ಒಂಥರದಲ್ಲಿ self-help ರೀತಿಯದೂ ಹೌದು. ಕಳೆದ ಕೆಲವು ವರ್ಷಗಳಿಂದ ಮಾಧ್ಯಮಕ್ಷೇತ್ರದಲ್ಲಿ (ಪತ್ರಿಕೆಗಳಲ್ಲೂ, ಇಲೆಕ್ಟ್ರಾನಿಕ್ ಮಾಧ್ಯಮದಲ್ಲೂ) ಕೆಲಸ ಮಾಡಿ ಅನುಭವವಿರುವ ಉತ್ಸಾಹಿ ತರುಣ, ಮುಖ್ಯವಾಗಿ ಅಹಂಕಾರ ಮತ್ತು ಪೊಳ್ಳು ಮದವನ್ನು ತಲೆಗೇರಿಸಿಕೊಳ್ಳದೇ ಪ್ರಾಕ್ಟಿಕಲ್ ಆಗಿ ಯೋಚಿಸುವ, ಸ್ನೇಹಿತ Vinayaka Kodsara ತನ್ನ ಸಮಾನಮನಸ್ಕ ಮಿತ್ರರನ್ನು ಸೇರಿಸಿಕೊಂಡು ರೂಪಿಸಿರುವ ಪುಸ್ತಕ “ಪತ್ರಿಕೆಗೆ ಬರೆಯೋದು ಹೇಗೆ?” ಈ ಶನಿವಾರ ಫೆಬ್ರವರಿ 20ರಂದು ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.

    ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಆಗಬಲ್ಲ ಸಕಲ ಅರ್ಹತೆಗಳೂ ಈ ಪುಸ್ತಕಕ್ಕಿವೆ. ಅಲ್ಲದೇ, ಫ್ರೀಲಾನ್ಸ್ ಪತ್ರಕರ್ತರಾಗಬಯಸುವವರಿಗೆ, ಆಗಾಗ ಪತ್ರಿಕೆಗಳಿಗೆ ಲೇಖನ, ಪ್ರಬಂಧ, ಹರಟೆ, ನುಡಿಚಿತ್ರ ಮುಂತಾದುವನ್ನು ಬರೆದುಕಳಿಸುವ ಹವ್ಯಾಸವಿರುವವರಿಗೂ ಇದೊಂದು ಉತ್ತಮ ಮಾರ್ಗದರ್ಶಿ ಕೈಪಿಡಿ. ಪ್ರಮುಖ ಕನ್ನಡ ದಿನಪತ್ರಿಕೆಗಳಲ್ಲಿ ಸಂಪಾದಕೀಯ ವಿಭಾಗದಲ್ಲಿರುವವರ, ಪುರವಣಿಗಳ ಇನ್‌ಚಾರ್ಜ್ ಆಗಿರುವವರ ಲೇಖನಗಳು ಇದರಲ್ಲಿವೆ. ಜತೆಗೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಮುಖವಾಗಿ ಕಾಣುವ ಬರಹಗಾರರು ಮತ್ತು ಅಂಕಣಕಾರರು ಬರೆದ ಲೇಖನಗಳೂ ಇವೆ. ಒಟ್ಟಾರೆಯಾಗಿ ಈ ಪುಸ್ತಕದ ಉದ್ದೇಶ, ಅರ್ಥಪೂರ್ಣತೆ ಮತ್ತು ಅದಕ್ಕೆ ತಕ್ಕಂತಿರುವ ಹೂರಣ ನನಗೆ ಬಹಳ ಇಷ್ಟವಾಗಿವೆ. “ತಿಳಿಸು ಕಲಿಸು ಮನರಂಜಿಸು” ಎಂಬ ಶೀರ್ಷಿಕೆಯ ಲೇಖನವೊಂದನ್ನು ಈ ಪುಸ್ತಕದಲ್ಲಿ ನಾನೂ ಬರೆದಿದ್ದೇನೆ. ಅದಕ್ಕಿಂತ ಹೆಚ್ಚು ಒಳ್ಳೆಯ ಲೇಖನಗಳು, ಇತರರು ಬರೆದಂಥವು ಇವೆ.

    ಈ ಪುಸ್ತಕದ ಬಗ್ಗೆ ,ಮತ್ತು ಇದರ ಬಿಡುಗಡೆ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿದ್ದೇನೆ ಎಂದು ನನಗೆ ತುಂಬ ಹೆಮ್ಮೆ ಇದೆ. ಸಾಧ್ಯವಾದರೆ ನೀವೂ ಈ ಸಮಾರಂಭಕ್ಕೆ ಬನ್ನಿ. ಪುಸ್ತಕವನ್ನು ಕೊಂಡು ಓದಿ, ಇದರ ಪ್ರಯೋಜನ ಪಡೆದುಕೊಳ್ಳಿ. “ಶೋ-ಕೇಸ್ ಐಟಮ್‌ಗಿಂತ ಯುಟಿಲಿಟಿ ಐಟಮ್‌ಅನ್ನೇ ಉಡುಗೊರೆಯಾಗಿ ಕೊಡುವುದು” ನಿಮ್ಮ ಸತ್ಸಂಪ್ರದಾಯವೂ ಆಗಿದ್ದರೆ, ಈ ಪುಸ್ತಕವು ನಿಮ್ಮ ಆಪ್ತರಿಗೆ ಉಡುಗೊರೆ ಕೊಡುವುದಕ್ಕೂ ಹೇಳಿಮಾಡಿಸಿದ ಕೃತಿ ಎಂದು ನನ್ನ ಅಭಿಪ್ರಾಯ. ಆರೋಗ್ಯಕರ ಅಕ್ಷರಕೃಷಿಗೆ ಬೀಜ ಬಿತ್ತಿದ, ನೀರುಣಿಸಿದ ಒಳ್ಳೆಯ ಕೆಲಸವನ್ನು ನಾವೆಲ್ಲರೂ ಮಾಡಿದಂತಾಗುವುದು ಇಂತಹ ಪುಸ್ತಕಗಳನ್ನು ಹೆಚ್ಚುಹೆಚ್ಚು ಜನರಿಗೆ ಪರಿಚಯಿಸುವುದರ ಮೂಲಕವೇ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶರನ್ನವರಾತ್ರಿ: ದೇವಿಯ ಒಂಭತ್ತು ಸ್ವರೂಪಗಳ ಮಹತ್ವ

    22/09/2025

    ಬೆಳಕ ಚಿತ್ರಿಸಿದ ಕ್ಷಣಗಳ ಹಬ್ಬ – ವಿಶ್ವ ಛಾಯಾಗ್ರಹಣ ದಿನ

    19/08/2025

    ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್‌ ಯೋಗ ಎಂಬ ಟ್ರೆಂಡ್

    11/04/2025
    Leave A Reply Cancel Reply

    thirteen − ten =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
    • ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
    • ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ
    • ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ
    • ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.