Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಂದರ್ಶನ: ಹಾಡನ್ನು ಕೇಳುವ ದಿನ ಬದಲಾಗಿ ನೋಡುವ ದಿನ ಬಂದಿದೆ! – ವಾಣಿ ಜಯರಾಂ
    ವಿಶೇಷ

    ಸಂದರ್ಶನ: ಹಾಡನ್ನು ಕೇಳುವ ದಿನ ಬದಲಾಗಿ ನೋಡುವ ದಿನ ಬಂದಿದೆ! – ವಾಣಿ ಜಯರಾಂ

    Updated:21/02/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ
    ಕುಂದಾಪುರ: ಇಂದು ರೇಡಿಯೋದಲ್ಲಿ ಮಾತ್ರ ಹಾಡುವುದನ್ನು ಕೇಳುವ ದಿನಗಳು ಬದಲಾಗಿ, ಹಾಡನ್ನು ನೋಡುವ ದಿನಗಳು ಬಂದಿವೆ. ರೀಯಾಲಿಟಿ ಶೋಗಳ ಮೂಲಕ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿವೆ. ಸಂಗೀತದಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುದಿಲ್ಲ. ಎಲ್ಲಾ ಪ್ರಕಾರದ ಸಂಗೀತಕ್ಕೂ ಅದರದ್ದೇ ಆದ ಘನತೆ ಇದೆ. ಎಲ್ಲಾ ಕ್ಷೇತ್ರದಲ್ಲಿ ಕಷ್ಟಪಡುವುದು ಇದ್ದೇ ಇರುತ್ತೆ. ಕಷ್ಟ ಪಡದೇ ಇಷ್ಟಾರ್ಥ ಸಿದ್ದಿಸೋದಿಲ್ಲ. ಕಷ್ಟಪಟ್ಟು ಇಷ್ಟ ಸಿದ್ದಿಸಿಕೊಂಡಿದ್ದೇನೆ. ಹಿನ್ನೆಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದ ಪಣಯ ಖುಷಿ ನೀಡಿದೆ.

    Click Here

    Call us

    Click Here

    ಹೀಗೆಂದವರು ಸಂಗೀತ ಗಾಯನ ಲೋಕದಲ್ಲಿ ಅಗ್ರಮಾನ್ಯ ಸ್ಥಾನವನ್ನು ಅಲಂಕರಿಸಿರುವ ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿ ಜಯರಾಂ

    ಕೋಟೇಶ್ವರ ಸಹನಾ ಕನ್‌ವೆಷನ್ ಸೆಂಟರ್‌ಸಲ್ಲಿ ಭಾನುವಾರ ನಡೆಯಲಿರುವ ವಾಣಿ ಜಯರಾಂ ರಸ ಸಂಜೆ ಕಾರ್ಯಕ್ರಮಕ್ಕೆ ಕುಂದಾಪುರಕ್ಕೆ ಆಗಮಿಸಿರುವ ಅವರು ತಮ್ಮ ಹಿನ್ನಲೆ ಗಾಯನ ಮೂಲಕ ಸಾಗಿ ಬಂದ ದಾರಿಯನ್ನು ಕುಂದಾಪ್ರ ಡಾಟ್ ಕಾಂ ನೊಂದಿಗೆ ತೆರೆದಿಷ್ಟ ಪರಿ ಇದು.

    ಸಂಗೀತ ಕ್ಷೇತ್ರದ ಸಾಧನೆಗೆ ತಾಯಿಯೇ ಪ್ರೇರಣೆ. ಅದು ೧೯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಲೊಂದು ಸ್ಪೂರ್ತಿ ನೀಡಿತು. ಮನೆಯವರ ಪ್ರೋತ್ಸಾಹದಿಂದ ಇಷ್ಟು ವರ್ಷಗಳ ಕಾಲ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು ಎನ್ನೋದು ವಾಣಿ ಜಯರಾಮ್ ಸಾಗಿ ಬಂದ ದಾರಿ ತೆರೆದಿಟ್ಟಿದ್ದು ಹೀಗೆ

    ಹಿನ್ನೆಲೆ ಗಾಯಕಿಯಾಗಿ ಮೊದಲು ಯಾವ ಸಿನೆಮಾಕ್ಕೆ ಹಾಡಿದ್ದು?
    ಬಾಲಿವುಡ್‌ನ ಗುಡ್ಡಿ ಸಿನೆಮಾದ ಮೂಲಕ ಹಿನ್ನೆಲೆ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು.

    Click here

    Click here

    Click here

    Call us

    Call us

    ಕನ್ನಡದ ಯಾವ ಹಾಡು ಹೆಚ್ಚು ಖುಷಿ ಕೊಟ್ಟಿದೆ?
    ಎಲ್ಲಾ ಹಾಡುಗಳು ಖುಷಿ ನೀಡಿವೆ. ನಾ ನಿನ್ನ ಮರೆಯಲಾರೆ, ಬೆಸುಗೆ ಬೆಸುಗೆ, ಕನಸಲು ನೀನೆ. ಮನಸಲೂ ನೀನೆ, ಪ್ರಿಯತಮಾ ಕರುಣೆಯ ತೋರೆಯ.., ತೆರೆದಿದೆ ಮನೆ ಓ ಬಾ ಅತಿಥಿ.. ಎನೇನೋ ಆಸೆ ನೀ ತಂದ ಭಾಷೆ..  ಮುಂತಾದ ಹಾಡುಗಳು ಮತ್ತೆ ಮತ್ತೆ ಗುನುಗುವಂತೆ ಮಾಡಿವೆ. ಡಾ.ರಾಜ್‌ಕುಮಾರ್, ಎಸ್.ಪಿ. ಬಾಲಸುಬ್ರಮಣ್ಯಂ ಹಾಗೂ ವಾಣಿ ಜಯರಾಂ ಜೋಡಿ ಪ್ರಸಿದ್ಧವಾಗಿತ್ತು. ಕನ್ನಡಕ್ಕೆ ತಂದು ಅವಕಾಶ ನೀಡಿದ ಪುಟ್ಟಣ್ಣ ಕಣಗಾಲ್, ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಸಹಿತ ಹಲವು ನಿರ್ದೇಶಕರು, ಸಂಗೀತ ನಿರ್ದೇಕರು ಕನ್ನಡದಲ್ಲಿ ದೊಡ್ಡ ಅವಕಾಶವನ್ನೇ ತೆರೆದಿಟ್ಟಿದ್ದಿರು. ಅಂದಿನ ನೆನಪುಗಳನ್ನು ಮರೆಯಲಾಗದು.

    ಹೊಸ ಬಗೆಯ ಸಂಗೀತದ ಬಗ್ಗೆ ತಮಗೇನನ್ನಿಸುತ್ತೆ?
    ಬದಲಾವಣೆ ಎನ್ನುವುದು ನಿರಂತರ ಪ್ರಕ್ರಿಯೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಇಂದು ಎಲ್ಲಾ ಸಂಗೀತ ಸಾಧನಗಳಿಗೂ ಆಧುನಿಕತೆಯ ಟಚ್ ನೀಡಲಾಗಿದೆ. ಹಿಂದಿನ ಕಾಲದಷ್ಟು ಇಂಪು ಇಲ್ಲದಿದ್ದರೂ ಒಮ್ಮೊಮ್ಮೆ ಒಳ್ಳೆಯ ಸಂಗೀತ ಈಗಲೂ ಬರುತ್ತಿದೆ.

    ರೀಯಾಲಿಟಿ ಶೋ ಬಗ್ಗೆ ನಿಮ್ಮ ಅಭಿಪ್ರಾಯವೇನು?
    ರಿಯಾಲಿಟಿ ಶೋ ಮೂಲಕವೂ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಪ್ರತಿಭಾವಂತರಿಗೆ ಸಾಕಷ್ಟು ಅವಕಾಶಗಳಗೂ ದೊರೆಯುತ್ತಿದೆ. ರೇಡಿಯೋದಲ್ಲಿ ಮಾತ್ರ ಹಾಡುವುದನ್ನು ಕೇಳುವ ದಿನಗಳು ಬದಲಾಗಿ, ಹಾಡನ್ನು ನೋಡುವ ದಿನಗಳು ಬಂದಿವೆ.

    ಭಾರತದ ಸಂಗೀತ ಪ್ರಕಾರಗಳಲ್ಲಿ ಯಾವುದು ಒಳ್ಳೆಯದು?
    ಸಂಗೀತದಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುದಿಲ್ಲ. ಎಲ್ಲಾ ಪ್ರಕಾರದ ಸಂಗೀತಕ್ಕೂ ಅದರದ್ದೇ ಆದ ವಿಶೇಷತೆ ಇದೆ.

    ಹೊಸ ಪೀಳಿಗೆಯ ಹಾಡುಗಾರರಿಗೆ ನಿಮ್ಮ ಸಲಹೆ ಏನು?
    ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟವರಿಗೆ ಮೊದಲು ಇರಬೇಕಾದದ್ದು ವಿನಯ. ಕೆಲಸದಲ್ಲಿ ಶ್ರದ್ಧೆ-ಭಕ್ತಿಯಂತೂ ಇರಲೇಬೇಕು. ಗುರು-ಹಿರಿಯರನ್ನು ಗೌರವಿಸುವ, ಎಲ್ಲರಿಗೂ ಒಳ್ಳೆಯದನ್ನು ಬಯಸುವ ಗುಣ ಅವರ ಘನೆತೆಯನ್ನು ತೋರಿಸುತ್ತದೆ. ಹಾರ್ಟ್ ಎಂಬ ಇಂಗ್ಲಿಷ್ ಅಕ್ಷರದಲ್ಲಿ ಆರ್ಟ್ ಎಂಬ ಪದವಿದ್ದಂತೆ, ಕಲಾವಿದ ಪ್ರೇಕ್ಷಕರ ಮನಗೆಲ್ಲಬೇಕಾದರೇ ಸಹೃಯಿಯೂ ಆಗಿರಬೇಕಾಗುತ್ತದೆ.

    Vani-Jayaram-at-kundapur

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರಾಮೀ ಗ್ರೂಪ್ಸ್ ಸಂಸ್ಥಾಪಕ, ಹೆಸರಾಂತ ಉದ್ಯಮಿ ವರದರಾಜ್ ಎಂ. ಶೆಟ್ಟಿ ಅವರ ವಿಶೇಷ ಸಂದರ್ಶನ

    14/12/2023

    Video ಅಪಘಾತಕ್ಕೀಡಾಗುವ ಅನಾಥ ಗೋವುಗಳ ಆಪತ್ಭಾಂದವ ಬೈಕ್ ಮೆಕ್ಯಾನಿಕ್ ಸಂಜೀವ

    14/10/2023

    INTERVIEW ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳೇ ನಮಗೆ ಮತವಾಗಲಿದೆ – ಗುರುರಾಜ ಶೆಟ್ಟಿ ಗಂಟಿಹೊಳೆ

    05/05/2023

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d