Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ ಪುರಸಭೆ: ಹಿಂದಿನ ಸಾಮಾನ್ಯ ಸಭೆ ರದ್ಧಾದ ಬಗ್ಗೆ ಮುಂದವರಿದ ವಾಕ್ಸಮರ
    ಕುಂದಾಪ್ರದ್ ಸುದ್ಧಿ

    ಕುಂದಾಪುರ ಪುರಸಭೆ: ಹಿಂದಿನ ಸಾಮಾನ್ಯ ಸಭೆ ರದ್ಧಾದ ಬಗ್ಗೆ ಮುಂದವರಿದ ವಾಕ್ಸಮರ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಕುಂದಾಪುರ: ಹಿಂದಿನ ಸಾಮಾನ್ಯ ಸಭೆಯನ್ನು ರದ್ದು ಮಾಡಲಾಗಿತ್ತೇ? ವಿಶೇಷ ಸಾಮಾನ್ಯ ಕರೆಯುವ ಬಗ್ಗೆ ಪತ್ರ ಬರೆದಿದ್ದರೂ ಸ್ಪಂದಿಸಿಲ್ಲ ಏಕೆ? ಹೀಗೆ ವಿರೋಧ ಪಕ್ಷದ ಪ್ರಶ್ನೆಯಿಂದ ಆರಂಭಗೊಂಡ ಗದ್ದಲ ಸಭೆಯ ಅರ್ಧ ಅವಧಿಯನ್ನು ನುಂಗಿಹಾಕಿತ್ತು. ಕೆಲವು ಸದಸ್ಯರು ತಮ್ಮ ಘನತೆಯನ್ನೂ ಮರೆತು ತೀರಾ ವೈಯಕ್ತಿಕವಾಗಿ ನಿಂದಿಸಿಕೊಳ್ಳುವ ಪ್ರಸಂಗವೂ ನಡೆದು ಅಭಿವೃದ್ಧಿಯ ಚರ್ಚೆಯ ಹೊರತಾಗಿ ವೈಯಕ್ತಿಕ ಸಮರ ಏರ್ಪಟ್ಟಿತ್ತು.

    Click Here

    Call us

    Click Here

    ಇದು ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಪ್ರಮುಖ ಚಿತ್ರಣ.

    ಹಿಂದಿನ ಸಭೆ ನಂತರ ವಿಶೇಷ ಸಭೆ ಕರೆಯುವಂತೆ ಪತ್ರಕೊಟ್ಟಿದ್ದರೂ ಅದಕ್ಕೆ ಉತ್ತರ ನೀಡಿಲ್ಲ. ವಿರೋಧ ಪಕ್ಷದ ಮಾತಿಗೆ ಕಿಮ್ಮತ್ತಿಲ್ಲವಾ. ನಮ್ಮ ಪ್ರಶ್ನೆಗೆ ಉತ್ತರ ಬೇಕು ಎಂದು ಚಂದ್ರಶೇಖರ ಖಾರ್ವಿ, ಶ್ರೀಧರ ಶೇರಿಗಾರ್ ರವಿಕಲಾ ಗಣೇಶ್ ಶೇರಿಗಾರ್, ಪ್ರಭಾಕರ ಕೋಡಿ ಒತ್ತಾಯಿಸಿದರು. ಮೂರು ದಿನದೊಳಗೆ ಸದಸ್ಯರ ಪ್ರಶ್ನೆಗ ಉತ್ತರ ಕೊಡುತ್ತೇನೆ ಎಂದು ಅಧ್ಯಕ್ಷರು ಭರವಸೆ ನೀಡಿದರಾದರೂ ಈಗಲೇ ಹಿಂಬರಹ ನೀಡಬೇಕೆಂದು ಪಟ್ಟು ಹಿಡಿದರು.

    ಫೆರ್ರಿ ವಾರ್ಡ್ ಸದಸ್ಯೆ ಕೆ. ಪುಷ್ಪಾ ಶೇಟ್ ವಿಷಯ ಪ್ರಸ್ತಾಪಿಸಿ, ಫೆರ್ರಿ ವಾರ್ಡ್ ಉದ್ಯಾನವನ ಪಕ್ಕದಲ್ಲಿ ತ್ಯಾಜ್ಯ ಕಂನ್ಟೈನರ್ ಇರಿಸಿದ್ದರಿಂದ ಉದ್ಯಾನವನಕ್ಕೆ ಬರುವವರಿಗೆ ಸಮಸ್ಯೆ ಜೊತೆ ಪರಿಸರ ಮಾಲಿನ್ಯ ಆಗುತ್ತಿದೆ. ತ್ಯಾಜ್ಯ ಕಂನ್ಟೈನರ್ ತೆರವು ಮಾಡುವ ಮೂಲಕ ಸಮಸ್ಯೆ ಪರಿಹಾರ ಮಾಡಬೇಕು ಎಂದು ಒತ್ತಾಯಿಸಿದರು.

    ಫೆರ್ರಿ ವಾರ್ಡ್‌ನಲ್ಲಿ ತ್ಯಾಜ್ಯ ಡಂಪ್ ಮಾಡದೆ ಕಸ ಡಂಪ್ ಮಾಡಿ ನಂತರ, ಸಾಗಿಸಲಾಗುತ್ತದೆ. ಇದರಿಂದ ಸಮಯ, ಇಂಧನ ಶ್ರಮ ಉಳಿತಾಯ ಆಗುತ್ತಿದೆ. ಹಿಂದೆ ಡಂಪ್ ಮಾಡುತ್ತಿದ್ದ ಸಂಗಮ ಪರಿಸರದಲ್ಲಿ ತ್ಯಾಜ್ಯ ಡಂಪಿಂಗ್ ವಿಷಯ ನ್ಯಾಯಾಲದಲ್ಲಿದ್ದು, ಅಲ್ಲಿ ಡಂಪ್ ಮಾಡಲು ಸಾಧ್ಯವಿಲ್ಲ. ಪುರಸಭೆ ಎಲ್ಲಾ ಸದಸ್ಯರು ಸ್ಥಳ ಸೂಚಿಸಿದರೆ ಅಲ್ಲಿ ಡಂಪಿಂಗ್ ಮಾಡಲು ಅಡ್ಡಿಯಿಲ್ಲ ಎಂಬ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉತ್ತರ ಸಮಾಧಾನ ತರಲಿಲ್ಲ.

    Click here

    Click here

    Click here

    Click Here

    Call us

    Call us

    ಸಂಗಮ್ ಪರಿಸರದಿಂದ ತ್ಯಾಜ್ಯ ಡಂಪ್ ಮಾಡುವ ಕಾನ್ಟೈರ್ ಫೆರ್ರಿ ವಾರ್ಡ್ ಉದ್ಯಾನವನ ಪಕ್ಕ ಇಡಬೇಕಿದ್ದರೆ ಪುರಸಭೆ ಎಲ್ಲಾ ವಾರ್ಡ್ ಸದಸ್ಯರ ಸಲಹೆ ಕೇಳಲಾಗಿತ್ತಾ? ಫೆರ್ರಿ ವಾರ್ಡ್ ಉದ್ಯಾಮನವ ವನ ಅಭಿವೃದ್ಧಿಗೆ ಕಾದಿರಿಸಿದ ಜಾಗದಲ್ಲಿ ತ್ಯಾಜ್ಯ ಡಂಪ್ ಮಾಡುವುದು ತರವಲ್ಲ. ತ್ಯಾಜ್ಯ ಡಂಪ್ ಮಾಡುವುದರಿಂದ ಪರಿಸರದ ನಿವಾಸಿಗಳಿಗೂ ಸಮಸ್ಯೆ ಆಗುತ್ತದೆ. ಕಳೆದ ಆರು ತಿಂಗಳಿಂದ ತ್ಯಾಜ್ಯ ಡಂಪ್ ಬಗ್ಗೆ ಮಾತನಾಡುತ್ತಿದ್ದರೂ ಸಮಸ್ಯೆ ಪರಿಹಾರ ಆಗಿಲ್ಲ ತ್ಯಾಜ್ಯ ಡಂಪ್ ತೊಟ್ಟ ಸ್ಥಳಾಂತರಕ್ಕೆ ನಿರ್ಣಯ ಮಾಡುವಂತೆ ಒತ್ತಾಯಿಸಿದರು.

    ಇವರ ಮಾತಿಗೆ ಪೂರಕವಾಗಿ ಪ್ರತಿಕ್ರಿಸಿದ ಸದಸ್ಯ ಶ್ರೀಧರ್ ಮೀನು ಮಾರುಕಟ್ಟೆಯಲ್ಲೂ ತ್ಯಾಜ್ಯ ಡಂಪ್ ತೊಟ್ಟಿಯಿದ್ದು, ತ್ಯಾಜ್ಯ ನೀರು ಕೂಡಾ ಬಿಡಲಾಗುತ್ತದೆ. ಮೀನು ಮಾರುಕಟ್ಟೆ ತೊಟ್ಟಿ ಕೂಡಾ ತೆರವು ಮಾಡುವಂತೆ ಒತ್ತಾಯಿಸಿದರು. ಪುರಸಭೆ ಸದಸ್ಯರಾದ ಮೋಹನದಾಸ್ ಶೆಣೈ ಹಾಗೂ ಸತೀಶ್ ಕೂಡಾ ಪುಪ್ಪಾ ಶೇಟ್ ವಾದ ಸಮರ್ಥಿಸಿಕೊಂ ಡದರು.
    ಸಂಗಮ ಪರಿಸರದಲ್ಲಿ ಮತ್ತೆ ಕಸ ಡಂಪಿಂಗ್ ಮಾಡಲು ಸಾಧ್ಯವಿಲ್ಲ. ಸದಸ್ಯರು ಬೇರೆ ಸ್ಥಳ ಸೂಚಿಸದರೆ ಸ್ಥಳಾಂತರ ಅಡ್ಡಿಯಿಲ್ಲ. ತ್ಯಾಜ್ಯ ಡಂಪ್ ಬಗ್ಗೆ ಸ್ಥಳೀಯರ ವಿರೋಧ ಇಲ್ಲ ಎಂಬ ಮುಖ್ಯಾಧಿಕಾರಿ ಉತ್ತರ ಸದಸ್ಯರಿಗೆ ಸರಿ ಬರಲಿಲ್ಲ.

    ಸ್ಥಳೀಯರು ತ್ಯಾಜ್ಯ ಡಂಪ್ ಬಗ್ಗೆ ವಿರೋಧವಿದೆ. ಯಾರಿಗೂ ಸಮಸ್ಯೆ ಇಲ್ಲಾ ಎನ್ನೋದು ಸರಿಯಲ್ಲ. ತ್ಯಾಜ್ಯ ಕಂನ್ಟೈನರ್ ಸ್ಥಳಾಂತರಕ್ಕೆ ನಿರ್ಣಯ ಮಾಡುವಂತೆ ಒತ್ತಾಯಿಸಿದ್ದು, ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ್ ತ್ಯಾಜ್ಯ ತೊಟ್ಟಿ ಹಿಂದೆ ಎಲ್ಲಿತ್ತೋ ಅಲ್ಲಿಗೆ ಸ್ಥಳಾಂತರಿಸುವಂತೆ ಸೂಚಿಸಿದರು.
    ನಿವೇಶನ ರಹಿತರು ಮನೆಗಾಗಿ ಅರ್ಜಿ ಹಾಕಿದ್ದಾರೆ. ಹಾಗೆ ನಿವೇಶನ ಇದ್ದವರೂ ಮನೆ ಕಟ್ಟಿಕೊಂಡಿಲ್ಲ. ಮನೆ ಕಟ್ಟಿಕೊಳ್ಳಲು ಸರಕಾರ ನೀಡುವ ಅನುದಾನ ಅಲ್ಲದೆ ಬ್ಯಾಂಕ್ ಸಾಲ ಸೌಲಭ್ಯ ಸಿಗುತ್ತದಾ ಎಂದು ಸದಸ್ಯೆ ಗುಣರತ್ನ ಪ್ರಶ್ನೆಯಿಂದ ಹಿಂದಿನ ಸಭೆಯ ಬಗ್ಗೆ ಸಭೆಯಲ್ಲಿ ಸುಧೀಘ ಚರ್ಚೆ ನಡೆದು, ಮಾತಿನ ಸಮರವೇ ನಡೆದು ಸಭೆ ನಡೆಯುತ್ತದಾ ಇಲ್ಲವಾ ಎನ್ನುವ ಮಟ್ಟಕ್ಕೆ ಹೋಯಿತು.

    ಮನೆ, ಅಂಗಡಿ ಮುಂಗಟ್ಟು ತೆರಿಗೆ ಬಗ್ಗೆ ವಿಷಯ ಪ್ರಸ್ತಾಪಿಸದ ಹಿರಿಯ ಸದಸ್ಯ ಮೋಹನದಾಸ್ ಶೆಣೈ ತೆರಿಗೆ ವಸೂಲಿ ಸಮಸ್ಯೆ ಆಗುತ್ತಿದೆ. ಸಿಆರ್‌ಝಡ್ ಸಮಸ್ಯೆ ಪರಿಹಾರಕ್ಕೆ ಹಾಗೂ ಜನರಿಗೆ ಅನುಕೂಲ ಕಲ್ಪಿಸುವ ಇಕ್ಕಟ್ಟಿನಲ್ಲಿ ಪುರಸಭೆ ನಿರ್ಣಯ ತೆಗೆದುಕೊಂಡು ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

    ವಸಂತಿ ಮೋಹನ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಮೊದಲ ಆದ್ಯತೆ: ಕುಂದಾಪ್ರ ಕನ್ನಡ ಹಬ್ಬ ಸಮಾರೋಪದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

    28/07/2025

    ಫೋರ್ತ್‌ಫೋಕಸ್‌ಗೆ ʼ2025ರ ಗಮನಾರ್ಹ ಸಂಸ್ಥೆʼ ಪ್ರಶಸ್ತಿ – ಬಿಸಿನೆಸ್ ಔಟ್‌ಲೈನ್‌ನ ಬಿಸಿನೆಸ್ ಎಲೈಟ್ ಅವಾರ್ಡ್‌ನಲ್ಲಿ ಗೌರವ

    18/06/2025

    ಸರ್ಕಾರಿ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಮುಂದುವರಿಕೆ: ಶಾಸಕ ಕೊಡ್ಗಿ ಮನವಿಗೆ ಸ್ಪಂದನೆ

    06/05/2025
    Leave A Reply Cancel Reply

    10 − 5 =

    Call us

    Click Here

    Call us

    Call us

    Call us
    Highest Viewed Recently
    • ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ
    • ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.