Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗಣಪತಿ ಮೂರ್ತಿ ರಚಿಸುವ ಬೈಂದೂರಿನ ‘ಕಲಾ ಕುಟುಂಬ’ಕ್ಕೆ ಶತಮಾನದ ಇತಿಹಾಸ
    ವಿಶೇಷ ವರದಿ

    ಗಣಪತಿ ಮೂರ್ತಿ ರಚಿಸುವ ಬೈಂದೂರಿನ ‘ಕಲಾ ಕುಟುಂಬ’ಕ್ಕೆ ಶತಮಾನದ ಇತಿಹಾಸ

    Updated:13/09/2018No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
    ಬೈಂದೂರು: ಅಜ್ಜನಿಂದ ಬಳುವಳಿಯಾಗಿ ಬಂದ ಕಲೆ ಮೊಮ್ಮಕ್ಕಳ ಕೈಯಲ್ಲಿ ಇಂದಿಗೂ ಮೂರ್ತರೂಪ ಪಡೆಯುತ್ತಿದೆ. ನೂರಾರು ವರ್ಷಗಳಿಂದಲೂ ನಡೆದು ಬಂದ ಗಣಪತಿಯ ವಿಗ್ರಹ ತಯಾರಿಸುವ ಕಾಯಕ ಅಷ್ಟೆ ನಿಷ್ಠೆಯಿಂದ ಮುಂದುವರಿದಿದೆ. ದೇವರ ಕೈಂಕರ್ಯವೆಂದು ಪ್ರತಿವರ್ಷವೂ ಬೇಡಿಕೆಗನುಸಾರವಾಗಿ ಗಣಪತಿ ವಿಗ್ರಹವನ್ನು ರಚಿಸುತ್ತಾ ಸಂತೃಪ್ತಿಯನ್ನು ಕಾಣಿತ್ತಿದೆ ಬೈಂದೂರು ಬಂಕೇಶ್ವರ ಶಿಲ್ಪಿ ದಿ. ವೆಂಕಟರಮಣ ಆಚಾರರ ಕುಟುಂಬ.

    Click Here

    Call us

    Click Here

    ಶತಮಾನದ ಹಿನ್ನೆಲೆ: ಬೈಂದೂರಿನ ಬಂಕೇಶ್ವರದಲ್ಲಿರುವ ಶಿಲ್ಪಿ ದಿ. ವೆಂಕಟರಮಣ ಆಚಾರ್ ಅವರ ಕುಟುಂಬಕ್ಕೆ ಶತಮಾನದಿಂದ ಗಣಪತಿ ವಿಗ್ರಹವನ್ನು ತಯಾರಿಸಿದ ಹಿನ್ನೆಲೆಯಿದೆ. ವೆಂಕಟರಮಣ ಅವರ ತಂದೆ ಬಂಕೇಶ್ವರದ ದಿ. ನಾಗಪ್ಪ ಆಚಾರ್ ಅವರಿಂದ ಆರಂಭಗೊಂಡ ಸೇವಾ ಕೈಂಕರ್ಯವನ್ನು ವೆಂಕಟರಮಣ ಆಚಾರ್ ಅವರು ಮುಂದುವರಿಸಿಕೊಂಡು ಬಂದಿದ್ದು, ಇಂದು ಅವರ ಮಕ್ಕಳಾದ ನಾಗರಾಜ, ಗಂಗಾಧರ ಮತ್ತು ಗಣೇಶ ಅವರಿಂದ ಮೂಲಕ ಜೀವಸೆಲೆ ಪಡೆದಿದೆ. ಇವರ ಕುಟುಂಬ ನೂರು ವರ್ಷಕ್ಕೂ ಹೆಚ್ಚುಕಾಲ ಮೂರ್ತಿ ರಚನೆಯಲ್ಲಿ ತೊಡಗಿಸಿಕೊಂಡದ್ದರೇ, ವೆಂಕಟರಮಣ ಆಚಾರ್ಯರು 65 ವರ್ಷಗಳಿಂದ ಮೂರ್ತಿ ರಚನೆಯಲ್ಲಿ ತೊಡಗಿಕೊಂಡಿದ್ದು, ಅವರ ನಿಧನದ ಬಳಿಕ ಮಕ್ಕಳು ಈ ಕಾಯಕದಲ್ಲಿ ತೊಡಗಿದ್ದಾರೆ.  ಕುಂದಾಪ್ರ ಡಾಟ್ ಕಾಂ ವರದಿ.

    ಕಲಾ ಕುಟುಂಬ: ದಿ. ವೆಂಕಟರಮಣ ಆಚಾರ್ ತಂದೆ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿದ್ದರು. ಅವರಿಂದ ಶಿಲ್ಪಕಲೆಯ ದೀಕ್ಷೆ ಪಡೆದ ದಿ. ವೆಂಕಟರಮಣ ಆಚಾರರು ತನ್ನ 16ನೇ ವಯಸ್ಸಿನಲ್ಲಿ ಮಣ್ಣು ಮತ್ತು ಕೃಷ್ಣ ಶಿಲ್ಪದಿಂದ ಮೂರ್ತಿ ರಚನೆಯಲ್ಲಿ ತೊಡಗಿಕೊಂಡರು. ಪ್ರತಿವರ್ಷ ಗಣೇಶೋತ್ಸವಕ್ಕೆ ಗಣೇಶ ವಿಗ್ರಹ, ಶಾರದೋತ್ಸವಕ್ಕೆ ಶಾರದಾ ವಿಗ್ರಹ ಹಾಗೂ ದೇವಾಲಗಳಿಗೆ ಮೂರ್ತಿಯನ್ನು ಕಶ್ಯಪ ಶಿಲ್ಪಶಾಸ್ತ್ರ ಪ್ರಕಾರದಲ್ಲಿ ರಚಿಸಿ ಪರಂಪರಾಗತವಾಗಿ ಬಂದಿರುವ ಕಲೆಯನ್ನು ಉಳಿಸಿ ಬೆಳೆಸಿದವರು. ಈಗ ಗಣಪತಿ ಹಾಗೂ ಶಾರದೆಯ ಮೂರ್ತಿಯನ್ನು ಅವರ ಮಕ್ಕಳೇ ತಯಾರಿಸುತ್ತಿದ್ದಾರೆ. ಕೊನೆಯ ಹಂತದಲ್ಲಿ ಅವರ ಮೊಮ್ಮಕ್ಕಳೂ ಆಸಕ್ತಿಯಿಂದ ಬಣ್ಣ ಬಳಿಯುವಲ್ಲಿ ತೊಡಗಿಕೊಳ್ಳುತ್ತಾರೆ. ಒಟ್ಟಿನಲ್ಲಿ ಇಡಿ ಕುಟುಂಬವೇ ಕಲಾಪ್ರೀತಿಯನ್ನು ತೋರುತ್ತದೆ.  ಕುಂದಾಪ್ರ ಡಾಟ್ ಕಾಂ ವರದಿ.

    ಸಾಂಪ್ರದಾಯಿಕ ಗಣಪತಿ, ಶಾರದೆ ಮೂರ್ತಿ: ಆರಂಭದ ದಿನಗಳಲ್ಲಿ ಹತ್ತು ಗಣೇಶನ ವಿಗ್ರಹಗಳಿಗಷ್ಟೇ ಬೇಡಿಕೆ ಇದ್ದರೇ, ಈಗ 70 ರಿಂದ 75 ಮೂರ್ತಿಗಳಿಗೆ ಬೇಡಿಕೆ ಇದೆ. ಬೈಂದೂರಿನಲ್ಲಿ ಸಾಂಪ್ರದಾಯಿಕವಾಗಿ ಗಣಪತಿ ಮತ್ತು ಶಾರದೆಯ ವಿಗ್ರಹಗಳನ್ನು ರಚಿಸುವವರು ಇವರು ಮಾತ್ರವೇ ಇದ್ದು ಬೈಂದೂರು, ಉಪ್ಪುಂದ, ಶಿರೂರು, ನಾಗೂರು ಆಸುಪಾಸಿನ ಪರಿಸರದಿಂದ ಹಿಡಿದು ಕೊಲ್ಲೂರು ನಿಟ್ಟೂರಿನ ತನಕ ಬೆಡಿಕೆ ಇದೆ. ಗಣಪತಿ ವಿಗ್ರಹ ತಯಾರಿಕೆಗೆ ಈ ಭಾರಿ ಸುಮಾರು ಒಂದೂವರೆ ತಿಂಗಳುಗಳ ಕಾಲ ತೊಡಗಿಸಿಕೊಂಡಿದ್ದ ಸಹೋದರರು, ವಿವಿಧ ವಿನ್ಯಾಸದಲ್ಲಿ ಮೂರ್ತಿ ರಚಿಸಿದ್ದಾರೆ.  ಕುಂದಾಪ್ರ ಡಾಟ್ ಕಾಂ ವರದಿ.

    ಕಲಾವಿದ ಶ್ರಮಕ್ಕೆ ಸಾಲದ ಸಂಭಾವನೆ: ಲಕ್ಷಾಂತರ ರೂಪಾಯಿ ಖರ್ಚುಮಾಡಿ ಉತ್ಸವ ನಡೆಸುವವರು ಮೂರ್ತಿ ರಚಿಸಿದವರಿಗೆ ಸರಿಯಾದ ಸಂಭಾವನೆ ಕೊಡಲು ಹಿಂದುಮುಂದು ನೋಡುತ್ತಾರೆಂಬುದು ಕಲಾವಿದರ ಅಳಲು. ಈಗ ಮಣ್ಣಿನ ಮೂರ್ತಿಗಳಿಗೆ ದುಬಾರಿ ಜಲವರ್ಣಗಳನ್ನು ಬಳಸಬೇಕಾದ್ದರಿಂದ ಖರ್ಚು ಹೆಚ್ಚು. ಅಜ್ಜನಿಂದ ಸೇವೆಯೆಂದು ಬಳುವಳಿಯಾಗಿ ಬಂದ ಕೈಂಕರ್ಯಕ್ಕೆ ಈಗ ಅಪಾರ ಖರ್ಚು ತಗಲುತ್ತಿರುವುದರಿಂದ ಅನಿವಾರ್ಯವಾಗಿ ಬೆಲೆ ನಿಗದಿಗೊಳಸಬೇಕಿದೆ. ಹಾಗಾಗಿ ಈ ಭಾರಿ ಒಂದು ಅಡಿಯ ಮೂರ್ತಿಗೆ 1500-2000ದಷ್ಟು ಹಣ ನಿಗದಿಗೊಳಿಸಿದ್ದೇವೆ ಎನ್ನುತ್ತಾರೆ ಕಲಾವಿದ ಸಹೋದರರಲ್ಲಿ ಓರ್ವರಾದ ಗಣೇಶ್ ಆಚಾರ್/ ಕುಂದಾಪ್ರ ಡಾಟ್ ಕಾಂ ವರದಿ/

    Click here

    Click here

    Click here

    Call us

    Call us

    ಅನುಮತಿಯಿಲ್ಲದೇ ಈ ಲೇಖನವನ್ನು ಕಾಪಿ ಮಾಡುವುದನ್ನು ನಿಷೇಧಿಸಲಾಗಿದೆ. 

    Byndoor Ganapathi statue manufacturer - Venkataramana Acharya family (8)Byndoor Ganapathi statue manufacturer - Venkataramana Acharya family (1)Byndoor Ganapathi statue manufacturer - Venkataramana Acharya family (7) Byndoor Ganapathi statue manufacturer - Venkataramana Acharya family (9) Byndoor Ganapathi statue manufacturer - Venkataramana Acharya family (10) Byndoor Ganapathi statue manufacturer - Venkataramana Acharya family (2) Byndoor Ganapathi statue manufacturer - Venkataramana Acharya family (3) Byndoor Ganapathi statue manufacturer - Venkataramana Acharya family (4) Byndoor Ganapathi statue manufacturer - Venkataramana Acharya family (5) Byndoor Ganapathi statue manufacturer - Venkataramana Acharya family (6)Byndoor-ganapathi-statue

    Like this:

    Like Loading...

    Related

    Byndoor Ganesh idols makers History of century
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಡಿ.14 ರಿಂದ 21ರ ತನಕ ಸುರಭಿ ರಿ. ಬೈಂದೂರು ಆಯೋಜನೆಯಲ್ಲಿ ʼರಾಜ್ಯ ಮಟ್ಟದ ನಾಟಕ ಸ್ಪರ್ಧೆʼ

    04/12/2025

    ಎಲ್ಲೂರು ಕಂಬಳ ಸಂಪನ್ನ. 48 ಜೊತೆ ಕೋಣಗಳು ಭಾಗಿ

    28/11/2025

    ಕನ್ನಡ ನುಡಿಹಬ್ಬ, ರಾಜ್ಯ ಮಟ್ಟದ ಕಥಾ ಸ್ಪರ್ಧೆಯ ಬಹುಮಾನ ವಿತರಣೆ

    26/11/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ
    • ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್‌
    • ಪ್ರೋತ್ಸಾಹಧನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಸುಜ್ಞಾನ ಪಿಯು ಕಾಲೇಜಿನಲ್ಲಿ ʼಕಂಪ್ಯೂಟರ್ ಲ್ಯಾಬ್ʼ ಅನಾವರಣ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d