Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆಳ್ವಾಸ್ ನುಡಿಸಿರಿಯಲ್ಲಿ ಆಳ್ವಾಸ್ ಚಿತ್ರ ಸಿರಿ, ಚಿತ್ರ ಸಂತೆ
    alvas nudisiri

    ಆಳ್ವಾಸ್ ನುಡಿಸಿರಿಯಲ್ಲಿ ಆಳ್ವಾಸ್ ಚಿತ್ರ ಸಿರಿ, ಚಿತ್ರ ಸಂತೆ

    Updated:15/11/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಮೂಡುಬಿದಿರೆ: ಆಳ್ವಾಸ್ ನುಡಿಸಿರಿ ಅಂಗವಾಗಿ ಮೂಡುಬಿದಿರೆ ಪುತ್ತಿಗೆ ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ನ.10ರಿಂದ 13ರ ತನಕ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ‘ಆಳ್ವಾಸ್ ಚಿತ್ರಸಿರಿ 2016’ ಹಮ್ಮಿಕೊಳ್ಳಲಾಗಿದೆ.

    Click Here

    Call us

    Click Here

    ರಾಜ್ಯದ ವಿವಿಧ ಜಿಲ್ಲೆಗಳ 32 ಶ್ರೇಷ್ಠ ಸಮಕಾಲೀನ ಕಲಾವಿದರು ತಲಾ ಎರಡು (ಒಟ್ಟು 64) ಕಲಾಕೃತಿಗಳನ್ನು ಶಿಬಿರದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ಉದ್ಯಮಿ ಮನೋಹರ ಶೆಟ್ಟಿ ಮುಖ್ಯ ಅತಿಥಿಯಾಗಿರುವರು ಎಂದು ಹಿರಿಯ ಕಲಾವಿದ, ಕಾರ್ಯಕ್ರಮ ಸಲಹಾ ಸಮಿತಿಯ ಗಣೇಶ ಸೋಮಯಾಜಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಮಾರೋಪದಲ್ಲಿ ಮೈಸೂರಿನ ಹಿರಿಯ ಕಲಾವಿದ ಜಿ.ಎಲ್. ಎನ್.ಸಿಂಹ ಅವರಿಗೆ 2016ನೇ ಸಾಲಿನ ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿ ಪ್ರದಾನ ನಡೆಯಲಿದೆ. 25 ಸಾವಿರ ರೂ.ನಗದು ಬಹುಮಾನ ಒಳಗೊಂಡಿದೆ ಎಂದು ಹೇಳಿದರು.

    ಶಿಬಿರದ ಅವಧಿಯಲ್ಲಿ ಪ್ರತಿದಿನ ಸಾಯಂಕಾಲ ಕಲಾವಿದರು ತಮ್ಮ ಪೂರ್ವ ಕಲಾಕೃತಿಗಳ ಸ್ಲೈಡ್ ಶೋ ಹಾಗೂ ಕಲಾ ಸಂವಾದದಲ್ಲಿ ಭಾಗವಹಿಸುವರು. ಚಿತ್ರ ರಚನೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಒದಗಿಸಲಾಗುವುದು. ಇಲ್ಲಿ ರೂಪುಗೊಳ್ಳುವ ಕಲಾಕೃತಿಗಳನ್ನು ನ.18ರಿಂದ 20ರ ತನಕ ನಡೆಯುವ ಆಳ್ವಾಸ್ ನುಡಿಸಿರಿ ಸಂದರ್ಭ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

    ಆಳ್ವಾಸ್ ನುಡಿಸಿರಿ ಸಂದರ್ಭ ಚಿತ್ರಕಲೆ ಕುರಿತು ಜನಜಾಗೃತಿಗಾಗಿ ಬೃಹತ್ ಚಿತ್ರಸಂತೆ ಆಯೋಜಿಸಲಾಗಿದೆ. ನಾಡಿನ ಕಲಾವಿದರಿಗೆ ಇದೊಂದು ಸುವರ್ಣ ಅವಕಾಶ. ಈ ಕಲಾ ಸಂತೆಯಲ್ಲಿ ಚಿತ್ರ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ಶಿಬಿರದ ಸಂಯೋಜಕ ಭಾಸ್ಕರ ನೆಲ್ಯಾಡಿ ಹೇಳಿದರು. ಸಲಹಾ ಸಮಿತಿ ಸದಸ್ಯರಾದ ಕೋಟಿ ಪ್ರಸಾದ್ ಆಳ್ವ. ಪುರುಷೋತ್ತಮ ಅಡ್ವೆ ಸುದ್ದ್ದಿಗೋಷ್ಠಿಯಲ್ಲಿದ್ದರು.

    Click here

    Click here

    Click here

    Call us

    Call us

    ಕಲಾವಿದರಾದ ಕೆ.ವಿ.ಕಾಳೆ (ಬಳ್ಳಾರಿ), ಡಾ. ಸುನೀತಾ ಪಾಟೀಲ್ (ಹುಬ್ಬಳ್ಳಿ), ದಯಾನಂದ ಕಾಮ್‍ಕರ್, ಕುಮಾರ್ ಎಸ್. ಕಾಟೇನಹಳ್ಳಿ (ಧಾರವಾಡ), ದಿಲೀಪ್ ಕುಮಾರ್ ಕಾಳೆ (ಬೆಳಗಾವಿ), ಯಮನೂರ ಸಾಟ್ (ಕಲಬುರಗಿ) ಲಿಂಗರಾಜು ಎಂ.ಎಸ್. (ಚಿಕ್ಕಮಗಳೂರು), ಪ್ರದೀಪ್ ಕುಮಾರ್ ಡಿ.ಎಂ., ರಾಘವೇಂದ್ರ ನಾಯಕ್ (ದಾವಣಗೆರೆ), ಮಂಜುನಾಥ್ ಕೆ.ಆರ್. (ಕೊಡಗು), ವೀರಣ್ಣ ಕರಡಿ, ಜಯದೇವಣ್ಣ (ಮೈಸೂರು), ಜಗನ್ನಾಥ ಬೆಲ್ಲದ, ಅಪ್ಪಾ ಸಾಹೇಬ ಗೇಣಿಗೇರ್, ಬಾಗೂರು ಮಾರ್ಕಂಡೇಯ, ಚಲ್ಮೇಶ್ ಜಿ.ಎಚ್, ಜಯರಾಮ್ ಭಟ್ ಗಿಳಿಯಾಲ್, ಹೇಮಾವತಿ ಎಂ., ಐಶ್ವರ್ಯನ್ (ಬೆಂಗಳೂರು), ಕೋಟಿಗದ್ದೆ ರವಿ (ಶಿವಮೊಗ್ಗ), ಕಮಲ್ ಅಹಮ್ಮದ್, ಈರಣ್ಣ ತಿಪ್ಪನ್ನನವರ್ (ಗದಗ), ಪರಮೇಶ್ವರ ವಿ.ಹುಲಮನಿ, ಸಿದ್ದಲಿಂಗಪ್ಪ ಎಂ. ಕುರುಬರ (ಹಾವೇರಿ) ಹೇಮರೆಡ್ಡಿ ಎನ್. (ರಾಯಚೂರು), ಮೋಹನ್ ಕಡಬ, ಮುಸ್ತಾಫ, ದಿವಾಕರ್ ಸಾನೆಕಲ್ (ಉಡುಪಿ), ರೇಷ್ಮಾ ಶೆಟ್ಟಿ, ಧನಂಜಯ, ವಸಂತಕುಮಾರ್ (ದಕ್ಷಿಣ ಕನ್ನಡ), ಮಮತಾ ಡಿ.ವಿ. (ಹಾಸನ).

    Share. Facebook Twitter Pinterest LinkedIn Tumblr Telegram Email
    Kundapra.com

    Related Posts

    ಖೋ-ಖೋ ಟೂರ್ನಮೆಂಟ್: ಆಳ್ವಾಸ್ ಅವಳಿ ವಿಭಾಗಗಳಲ್ಲಿ ಸಮಗ್ರ ಚಾಂಪಿಯನ್ಸ್

    13/12/2025

    ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

    08/12/2025

    ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್‌

    06/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.