Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ವಲಸೆ ಕಾರ್ಮಿಕರಿಗೆ ನೆಹರೂ ಮೈದಾನವೇ ಆಶ್ರಯ ತಾಣ. ಹಾಸ್ಟೆಲ್‌ಗಿಲ್ಲ ಮೂಲಭೂತ ಸೌಕರ್ಯ
    Recent post

    ವಲಸೆ ಕಾರ್ಮಿಕರಿಗೆ ನೆಹರೂ ಮೈದಾನವೇ ಆಶ್ರಯ ತಾಣ. ಹಾಸ್ಟೆಲ್‌ಗಿಲ್ಲ ಮೂಲಭೂತ ಸೌಕರ್ಯ

    Updated:16/11/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ
    ಕುಂದಾಪುರ: ಯಕ್ಷಗಾನ ತಿರುಗಾಟ ಆರಂಭಗೊಂಡು ದಿನಕಳೆಯುತ್ತಿದ್ದರೂ ಕುಂದಾಪುರದ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ನೋಡುವ ಭಾಗ್ಯವಿಲ್ಲ. ಯಾರದ್ದೋ ಸ್ವಪ್ರತಿಷ್ಠೆಗೆ ವಿಶ್ವಮಾನ್ಯ ಕಲೆಯ ನೆಲೆಯಲ್ಲಿಯೇ ಕಂಟಕ ತಂದಿಟ್ಟಿರುವುದು ಯಕ್ಷಪ್ರಿಯರನ್ನು ನಿರಾಶೆಗೊಳಿಸಿದೆ.

    Click Here

    Call us

    Click Here

    ವಾಸ್ತವವಾಗಿ ಯಕ್ಷಗಾನ ಪ್ರದರ್ಶನದಿಂದ ಯಾರಿಗೆ ತೊಂದರೆಯಾಗುವುದೆಂಬ ಕಾರಣ ನೀಡಿದ್ದರೋ ಅಲ್ಲಿನ ಪರಿಸ್ಥಿತಿ ಮಾತ್ರ ಚಿಂತಾಜನಕ. ಮೈದಾನದ ಅಕ್ಕಪಕ್ಕವಿರುವ ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಕೆಲವು ಮಹನೀಯರಿಗೆ ಚಿಂತೆ ಹತ್ತಿಕೊಂಡಿದ್ದು ಒಟ್ಟಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವವರ ಹಿಂದೆ ಸ್ವಹಿತಾಸ್ತಿಯೂ ಅಡಗಿರಬಹುದೆಂಭ ಆರೋಪ ಕೇಳಿಬರುತ್ತಿದೆ.

    ಯಕ್ಷಗಾನಕ್ಕೆ ವಿರೋಧಿಸುವವರು ಹಾಸ್ಟೆಲ್ ಪರಿಸ್ಥಿತಿ ಅವಲೋಕಿಸಿದ್ದಾರೆ?
    ಶಾಲೆ, ಹಾಸ್ಟೆಲ್, ಸ್ವಚ್ಛತೆ, ಭದ್ರತೆಯನ್ನು ಮುಂದಿಟ್ಟುಕೊಂಡು ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುತ್ತಿರುವವರು ಒಮ್ಮೆ ಹಾಸ್ಟಲ್‌ಗೆ ಭೇಟಿ ನೀಡಿ ಪರೀಕ್ಷಿಸಲಿ. ಎಂತಾ ಪರಿಸರದಲ್ಲಿ ಮಕ್ಕಳು ದಿನಕಳೆಯುತ್ತಿದ್ದಾರೆ ಎನ್ನುವ ಕನಿಷ್ಟ ಅರಿವಾದರೂ ಮೂಡುತ್ತದೆ.

    ಹಾಸ್ಟೆಲ್ ಮೂಲಭೂತ ಸೌಲಭ್ಯ, ಸ್ವಚ್ಛತೆ ಬಗ್ಗೆ ಕಾಳಜಿಯಿದ್ದರೆ ಮೊದಲು ಹಾಸ್ಟೆಲ್ ವ್ಯವಸ್ಥೆ ಸರಿಪಡಿಸಲಿ. ಹಾಸ್ಟೆಲ್ ಮುಂದಿರುವ ಪಾಯಿಖಾನೆ ಹೊಂಡ ಅಸಹ್ಯ ವಾಸನೆಯಿಂದ ಹಾಸ್ಟೆಲ್ ವಿದ್ಯಾರ್ಥಿಗಳು ನೆಮ್ಮದಿ ತುತ್ತು ಬಾಯಿಗಿಡಲಾಗುತ್ತಿಲ್ಲ ಎನ್ನೋದು ಯಕ್ಷಗಾನ ಪ್ರದರ್ಶನ ವಿರೋಧಿಸುವರ ಗಮನದಲ್ಲಿಲ್ಲ. ರಸ್ತೆ ಪಕ್ಕದ ಚರಂಡಿಯಲ್ಲಿ ಹರಿಯುವ ಹಾಸ್ಟೆಲ್ ತ್ಯಾಜ್ಯ ಪರಿಸರ ವಾಸಿಗಳ ಗಂಟಲುಗಾಣ. ನೆಹರೂ ಮೈದಾನ ವಲಸೆ ಕಾರ್ಮಿಕರ ಅಡ್ಡೆಯಾಗಿ, ಪರಿಸರ ಹಾಳಾಗುವುದರ ಬಗ್ಗೆ ಮಾತನಾಡಲಿ. ರಾತ್ರಿ ಮೈದಾನದ ಸುತ್ತಾ ಹಾಗೂ ಶಾಲೆ ಕಟ್ಟೆಯಲ್ಲಿ ಮಲಗುವ ಕಾರ್ಮಿಕರ ಬಗ್ಗೆ ಏಕೆ ತುಟಿ ಬಿಚ್ಚುತ್ತಿಲ್ಲ. ವಾರದಲ್ಲಿ ಒಂದು ದಿನ ನೆಹರೂ ಮೈದಾನದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಪಡಿಸೋದು ಸರಿಯಾ ಎನ್ನುವ ಯಕ್ಷ ಪ್ರೇಮಿಗಳ ಪ್ರಶ್ನೆಗೆ ತಾಲೂಕು ಆಡಳಿತ ಉತ್ತರಿಸ ಬೇಕಿದೆ. ಕುಂದಾಪ್ರ ಡಾಟ್ ಕಾಂ ವರದಿ.

    ವಲಸೆ ಕಾರ್ಮಿಕರು ವಾಸವೂ ಇಲ್ಲಿಯೇ:
    ಕುಂದಾಪುರ ನೆಹರೂ ಮೈದಾನ ಪಕ್ಕ ರಾಷ್ಟ್ರೀಯ ಹೆದ್ದಾರಿ ಒಳಚರಂಡಿ ಮೇಲೆ ಐನೂರಕ್ಕೂ ಹೆಚ್ಚು ಜನ ರಾತ್ರಿ ಮಲಗುತ್ತಾರೆ. ನೆಹರೂ ಮೈದಾನದಲ್ಲಿರುವ ಶಾಲೆ ಜಗುಲಿ, ಸಾರ್ವಜನಿಕ ಗ್ರಂಥಾಲಯ ವಲಸೆ ಕಾರ್ಮಿಕರ ವಿಶ್ರಾಂತಿ ತಾಣ. ಬಾಲಕರ ಹಾಸ್ಟೆಲ್ ಎದುರೇ ಅಡುಗೆ, ಊಟ, ಸ್ನಾನ ಎಲ್ಲಾ ನಡೆಯುತ್ತದೆ. ಇನ್ನೂ ನೆಹರೂ ಮೈದಾನದಲ್ಲಿ ಮೂಗು ಮುಚ್ಚಿ ತಿರುಗಾಡಬೇಕು. ಇಷ್ಟೆಲ್ಲಾ ಅಪಸೌವ್ಯಗಳ ಪರಿಗಣನೆಗೆ ತೆಗೆದುಕೊಳ್ಳದೇ ತಮ್ಮ ಮಣ್ಣಿನ ಕಲೆ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಪಡಿಸೋದು ಸರಿಯಾ?

    Click here

    Click here

    Click here

    Call us

    Call us

    ಯಕ್ಷಗಾನ ಪ್ರದರ್ಶನ ಸಂದರ್ಭ ಹಿಂದುಳಿದ ವಿದ್ಯಾರ್ಥಿನಿಯರು ಹಾಸ್ಟಲ್ ಇದೆ. ಯಕ್ಷಗಾನ ಪ್ರದರ್ಶನದಿಂದ ಸಮಸ್ಯೆ ಆಗುತ್ತೆ ಎನ್ನೋ ಕಾರಣ ನೀಡುವವರು ಇದೂವರಗೆ ಎಲ್ಲಿಯಾದರೂ ಅಹಿತಕರ ಘಟನೆ ನಡೆದ ಬಗ್ಗೆ ರುಜುವಾತು ಮಾಡಲಿ. ಆಗ ಬೇಕಾದರೆ ಒಪ್ಪಿಕೊಳ್ಳಬಹುದು. ಇನ್ನೂ ಹಾಸ್ಟೆಲ್ ಮುಂದೆ ತ್ಯಾಜ್ಯ, ಮಣ್ಣು, ಮಸಿ ಇನ್ನಿತರ ಕಸಕಡ್ಡಿಗಳ ರಾಶಿ ಬಿದ್ದಿದೆಯಲ್ಲಾ ಅದರ ಸ್ವಚ್ಛತೆ ಬಗ್ಗೆ ತಾಲೂಕು ಆಡಳಿತ ಮುಂದಾಗೋದು ಬಿಟ್ಟು ಯಾರನ್ನೋ ತೃಪ್ತಿ ಪಡಿಸುವ ನಿಟ್ಟಿನಲ್ಲಿ ಯಕ್ಷಗಾನ ಪ್ರದರ್ಶನ ನಿರಾಕರಿಸೋದು ಸರಿಯಾ ಎನ್ನೋದು ಯಕ್ಷಪ್ರಿಯರ ಪ್ರಶ್ನೆ. ಕುಂದಾಪ್ರ ಡಾಟ್ ಕಾಂ ವರದಿ.

    ಯಕ್ಷಗಾನ ವಾರದಲ್ಲಿ ಒಂದು ದಿನ ನಡೆದರೆ, ಇದೇ ಗಾಂಧಿ ಮೈದಾನದಲ್ಲಿ ತಿಂಗಳುಗಟ್ಟಲೆ ಜಂಡಾ ಹೂಡಲು ಅವಕಾಶ ಕೊಟ್ಟು, ಇಡೀ ನೆಹರೂ ಮೈದಾನ ಮೈಯಲ್ಲಾ ಹೊಂಡಾ ತೆಗೆದು ಕೊನೆಗೆ ಮೈದಾನ ಸ್ವಚ್ಛಮಾಡದೆ, ಹೊಂಡಾಗುಂಡಿ ಹಾಗೆ ಉಳಿಸಿಹೋಗುತ್ತಿದ್ದರೂ, ಡೊಂಬರಾಟಕ್ಕೆ ನೆಹರೂ ಮೈದಾನದಲ್ಲಿ ಅವಕಾಶ ನೀಡಲಾಗುತ್ತದೆ. ಟೆಂಟಿಗಾಗಿ ತೆಗೆದ ಹೊಂಡ ಮರುದಿನ ಮುಚ್ಚಿ ಪರಿಸರ ಸ್ಚಚ್ಛತೆಗೆ ೧ ಸಾವಿರ ಶುಲ್ಕ ಕೊಡುವ ಯಕ್ಷಗಾನ ಮೇಳಕ್ಕೆ ಅವಕಾಶ ನಿರಾಕರಣೆ ಮೂಲಕ ನಮ್ಮ ಕಲೆ ಅವಮಾನಿಸಲಾಗುತ್ತದೆ. ಹಿಂದೆ ಹೇಗೆ ನೆಹರೂ ಮೈದಾನದಲ್ಲಿ ಯಕ್ಷಗಾನ ನಡೆಯುತ್ತಿತ್ತೋ ಅದನ್ನು ಮುಂದುವರಿಸಬೇಕು. ಒಮ್ಮೆ ಯಕ್ಷಗಾನಕ್ಕೆ ಅವಕಾಶ ನೀಡದಿದ್ದರೆ ಯಾವ ಕಾರ‍್ಯಕ್ರಮಕ್ಕೂ ನೆಹರೂ ಮೈದಾನ ನೀಡಬಾರದು ಎಂಬ ಮಾತುಗಳೂ ಕೇಳಿಬರುತ್ತಿದೆ. © ಕುಂದಾಪ್ರ ಡಾಟ್ ಕಾಂ.

    ಇದನ್ನೂ ಓದಿ
    ► ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ದೊರೆಯುತ್ತಿಲ್ಲ ಅನುಮತಿ – http://kundapraa.com/?p=18845 

    ► ಯಕ್ಷಗಾನ ಪ್ರದಶನಕ್ಕೆ ಆಗ್ರಹಿಸಿ ಪತ್ರ ಚಳವಳಿ- http://kundapraa.com/?p=18870

    ► ಯಕ್ಷಗಾನ ಪ್ರದರ್ಶನಕ್ಕೆ ಪರವಾನಿಗೆ ನೀಡದಿದ್ದರೆ ಕಾನೂನು ಸಮರಕ್ಕೂ ಸಿದ್ಧ: ಜಯಪ್ರಕಾಶ್ ಹೆಗ್ಡೆ – http://kundapraa.com/?p=18876

     ►  ಯಕ್ಷಗಾನ ಪ್ರದರ್ಶನ ತಡೆಹಿಡಿದಿರುವ ಬಗ್ಗೆ ಕುಂದಾಪುರದ ಜನಪ್ರತಿನಿಧಿಗಳು, ಗಣ್ಯರು ಏನಂತಾರೆ?- http://kundapraa.com/?p=18870

    news-hostels-near-neharu-maidhana news-hostels-near-neharu-maidhana2_mg_2261

    Kundapura nehru maidan became living place for Migrant labor–hostels around suffering for basic infrastructure. 

    Like this:

    Like Loading...

    Related

    Kundapur Taluk administration denied to give permission for yakshagana in Neharu Maidana Yakshagana
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d