9 ಮಂದಿಗೆ ಕ್ರೈಸ್ತ ಧರ್ಮ ಗುರು ದೀಕ್ಷೆ

Call us

Call us

Call us

ಮಂಗಳೂರು: ಮಂಗಳೂರು ಧರ್ಮ ಪ್ರಾಂತ ವ್ಯಾಪ್ತಿಯಲ್ಲಿ ಧರ್ಮ ಗುರುಗಳಾಗಿ ಸೇವೆ‌ ಸಲ್ಲಿಸುವ ಬಗ್ಗೆ ಜೆಪ್ಪು ಸೈಂಟ್‌ ಜೋಸೆಫ್‌ ಸೆಮಿನರಿಯಲ್ಲಿ ತರಬೇತಿ ಪಡೆದ 9 ಮಂದಿ ಯುವಕರಿಗೆ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಜರಗಿದ ಸಮಾರಂಭದಲ್ಲಿ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್‌ ಡಿ’ಸೋಜಾ ಅವರು ಗುರು ದೀಕ್ಷೆಯನ್ನು ಪ್ರದಾನ ಮಾಡಿದರು.

Call us

Click Here

ಆನೆಗುಡ್ಡೆಯ ಪ್ರವೀಣ್‌ ಜೆ. ಸಲ್ದಾನ್ಹಾ, ಬಿಜೈನ ಕೆನೆತ್‌ ಆರ್‌. ಕ್ರಾಸ್ತಾ, ಪಾಲಡ್ಕದ ನೆಲ್ಸನ್‌ ಡಿ. ಪಾಯ್ಸ, ಕಿನ್ನಿಗೋಳಿಯ ಜಾನ್ಸನ್‌ ಎಲ್‌. ಸಿಕ್ವೇರಾ, ಶಂಬೂರಿನ ಡೆನ್ನಿಲ್‌ ಲೋಬೊ, ನಾಯ್ನಾಡ್‌ನ‌ ಪಾವ್‌ ಎಸ್‌. ಡಿ’ಸೋಜಾ, ಗಂಟಾಲ್‌ಕಟ್ಟೆಯ ಅಶ್ವಿ‌ನ್‌ ಎಲ್‌. ಕಾರ್ಡೊಜಾ, ಬೋಂದೆಲ್‌ನ ರಾಹುಲ್‌ ಡಿ’ಸೋಜಾ, ಕುಂಬಳೆಯ ಸಂತೋಷ್‌ ಡಿ’ಸೋಜಾ ಗುರು ದೀಕ್ಷೆ ಸ್ವೀಕರಿಸಿದರು.

ಧರ್ಮ ಪ್ರಾಂತದ ಪ್ರಧಾನ ಗುರು ಮೊ | ಡೆನ್ನಿಸ್‌ ಮೊರಾಸ್‌ ಪ್ರಭು, ಸೆಮಿನರಿಯ ರೆಕ್ಟರ್‌ ಫಾ | ಜೋಸೆಫ್‌ ಮಾರ್ಟಿಸ್‌, ಫಾ | ಹೆನ್ರಿ ಸಿಕ್ವೇರಾ, ರೊಜಾರಿಯೋ ಕೆಥೆಡ್ರಲ್‌ನ ಪ್ರಧಾನ ಗುರು ಫಾ | ಜೆ.ಬಿ. ಕ್ರಾಸ್ತಾ ಉಪಸ್ಥಿತರಿದ್ದರು.

Leave a Reply