ಸೇವೆ ಮಾಡಲು ಹಿಂಜರಿಕೆ ಬೇಡ : ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಸದಸ್ಯನಾದ ಮೇಲೆ ಸಮಾಜ ಮುಖಿ ಸೇವೆ ಮಾಡುವಲ್ಲಿ ಯಾವುದೇ ಹಿಂಜರಿಕೆ ಬೇಡ, ರೋಟರಿಯಲ್ಲಿ ತನ್ನ ಬದ್ದತೆಯನ್ನು ತೋರ್ಪಡಿಸುವಲ್ಲಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ್ದು ಅಗತ್ಯ ಮತ್ತು ಅನಿವಾರ್ಯ. ಈ ನಿಟ್ಟಿನಲ್ಲಿ ಮಾಡುವ ಸೇವೆಯಲ್ಲಿ ಆರ್ಥಿಕ ಮಟ್ಟದ ಬೇಧ ನೋಡದೆ, ದುಬಾರಿ ಸೇವೆಯೊಂದಿಗೆ ಮಿತ ಖರ್ಚಿನ ಸೇವೆ ಮಾಡಲು ಯಾವುದೇ ಹಿಂಜರಿಕೆ ಬೇಡ ಎಂದು ರೋಟರಿ ಸದಸ್ಯರಿಗೆ ಕರೆ ನೀಡಿದರು.

Call us

Click Here

ಅವರು ಇತ್ತೀಚೆಗೆ ನಡೆದ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳರು ಈ ರೋಟರಿ ವರ್ಷದಲ್ಲಿ ಸಾಂಸ್ಕೃತಿಕ ಸ್ಪರ್ಧೆಯ ವಲಯ ಚಾಂಪಿಯನ್‌ಶಿಪ್ ಪಡೆದ ಮತ್ತು ವಲಯ ಕ್ರೀಡಾಕೂಟದಲ್ಲಿ ೧೭ಕ್ಕೂ ಮಿಕ್ಕಿ ಬಹುಮಾನ ಗಳಿಸಿದ ಕ್ಲಬ್‌ನ ಸದಸ್ಯರನ್ನು, ಅವರ ಕುಟುಂಬಿಕರಿಗೂ ಗೌರವ ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಆನ್ಸ್ ಕ್ಲಬ್ ಅಧ್ಯಕ್ಷರಾದ ಶೀಲಾ ಚಂದ್ರಶೇಖರ್, ಆನ್ಸ್ ಕ್ಲಬ್ ಕಾರ್ಯದರ್ಶಿ ಸಹನಾ ನಾವುಡ ಉಪಸ್ಥಿತರಿದ್ದರು. ಕೆ.ಎಸ್. ಮಂಜುನಾಥ ಮುಖ್ಯ ಅತಿಥಿ ಪರಿಚಯಿಸಿದರು. ಗಣೇಶ ಸಿ.ಎಚ್. ಸಹಕರಿಸಿದರು. ಕಾರ್ಯದರ್ಶಿ ನಾಗೇಶ ನಾವುಡ ವಂದಿಸಿದರು.

Leave a Reply