Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪುಣೆ ಹೊಟೇಲ್‌ ಉದ್ಯಮ ಸಂಕಷ್ಟದಲ್ಲಿ ನಡೆಯುತ್ತಿದೆ
    ಮುಂಬೈ

    ಪುಣೆ ಹೊಟೇಲ್‌ ಉದ್ಯಮ ಸಂಕಷ್ಟದಲ್ಲಿ ನಡೆಯುತ್ತಿದೆ

    Updated:16/04/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಪುಣೆ: ಫುಡ್‌ ಸ್ಟೇ ಸ್ಟ್ಯಾಂಡರ್ಡ್‌ ಅಥಾರಿಟಿ ಆಫ್‌ ಇಂಡಿಯಾ ಹೊಟೇಲ್‌ಗ‌ಳಿಗೆ ಕೆಲವೊಂದು ಕಾನೂನುಗಳನ್ನು ಹೇರುತ್ತಿದ್ದು,ಇವುಗಳನ್ನು ಅನುಸರಿಸುವುದರಿಂದ ಕಾರ್ಮಿ ಕರಿಗೆ ಅನಾರೋಗ್ಯದಂತಹ ಸಮಸ್ಯೆಗಳು ಎದುರಾಗಲಿವೆ. ಕುಕ್‌ಗಳು ಕೈ ಕವಚ ತೊಟ್ಟು ಕೆಲಸ ಮಾಡುವುದು, ಲಿಕ್ಕರ್‌ ಲೈಸನ್ಸ್‌ ಶೇ. 10ರಷ್ಟು ಏರಿಕೆ ಇದರೊಂದಿಗೆ ಅಬಕಾರಿ ತೆರಿಗೆ, ವ್ಯಾಟ್‌ ಹಾಗೂ ಸೇವಾ ತೆರಿಗೆಯೂ ಹೆಚ್ಚಾಗಿದೆ. ಪಕ್ಕದ ಗೋವಾ ಹಾಗೂ ದಮನ್‌ಗಳಲ್ಲಿ ಮಹಾರಾಷ್ಟ್ರದಿಂದ ಅರ್ಧದಷ್ಟು ದರಗಳಲ್ಲಿ ಮದ್ಯ ದೊರಕುತಿದ್ದು, ಮಹಾರಾಷ್ಟ್ರದಲ್ಲಿ ಮಾತ್ರ ಇಷ್ಟೊಂದು ತೆರಿಗೆ ಹೆಚ್ಚಳ ಯಾಕೆ ಎಂದು ಗೊತ್ತಾಗುತ್ತಿಲ್ಲ. ಇದರಿಂದ ನಕಲಿ ಮದ್ಯ ಸರಬರಾಜಾಗಿ ಜನರ ಆರೋಗ್ಯದ ಮೇಲೆ ಪ್ರಭಾವ ಬೀಳಲಿದೆ. ಅನೇಕ ಕಾನೂನು ಬಾಹಿರ ಹೊಟೇಲ್‌ಗ‌ಳು ಇದರಿಂದಾಗಿ ತಲೆಯೆತ್ತಿದ್ದು, ನಕಲಿ ಮದ್ಯಗಳನ್ನು ಮಾರಾಟ ಮಾಡುತ್ತಿವೆ. ಅನೇಕ ಪರ್ಮಿಟ್‌ ರೂಮ್‌ಗಳು ಇಷ್ಟೊಂದು ತೆರಿಗೆ ತಾಳಲಾಗದೆ ಮುಚ್ಚುವ ಹಂತದಲ್ಲಿವೆ ಎಂದು ಪುಣೆ ರೆಸ್ಟೋರೆಂಟ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಗಣೇಶ್‌ ಶೆಟ್ಟಿ ಅಭಿಪ್ರಾಯಪಟ್ಟರು.

    Click Here

    Call us

    Click Here

    News mumbai pune

    ಪುಣೆ ರೆಸ್ಟೋರೆಂಟ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌ನ (ಪ್ರಾಹಾ ) ವತಿಯಿಂದ ನಗರದ ಕೊರೊನೆಟ್‌ ಹೊಟೇಲ್‌ ಸಭಾಂಗಣದಲ್ಲಿ ಎ 10ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

    ಹೊಸ ಹೊಟೇಲ್‌ಗ‌ಳಿಗೆ ಪೊಲೀಸ್‌ ಲೈಸನ್ಸ್‌ ಎಂಬುದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಇದಕ್ಕಾಗಿ ಸರಕಾರದ ಸ್ಪಷ್ಟ ಧೋರಣೆಗಳಿಲ್ಲದೆ ಲೈಸನ್ಸ್‌ ಪಡೆಯುವುದೇ ಕಷ್ಟವಾಗಿದೆ. ಇದರಿಂದಾಗಿ ಭ್ರಷ್ಟಾಚಾರ ತಲೆಯೆತ್ತಿದ್ದು ಅನಧಿಕೃತ ಹೊಟೇಲುಗಳೂ ಹೆಚ್ಚಾಗುತ್ತಿದೆ.ಉಳಿದಂತೆ ಇತರ ವ್ಯಾಪಾರಕ್ಕೆ ಅನ್ವಯಿಸದ ಪಾರ್ಕಿಂಗ್‌ ವ್ಯವಸ್ಥೆ, ಕಾನೂನು ಕಾಯಿದೆಗಳು ಕೇವಲ ಹೊಟೇಲಿಗರಿಗೆ ಮಾತ್ರ ಯಾಕೆ. ಈ ಬಗ್ಗೆ ಸೀನಿಯರ್‌ ಪೊಲೀಸ್‌ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹವಾನಿಯಂತ್ರಿತ ಹೊಟೇಲ್‌ಗ‌ಳಿಗೆ ವಿಧಿಸುವ ಸರ್ವಿಸ್‌ ತೆರಿಗೆ ಬಗ್ಗೆಯೂ ಮುಂಬಯಿ ಹಾಗೂ ಕೇರಳಗಳಲ್ಲಿ ಕಾನೂನು ಹೋರಾಟ ನಡೆಸಲಾಗಿದೆ. ಇಂತಹ ಅನಗತ್ಯ ತೆರಿಗೆಗಳಿಗೆ ಸರಕಾರ ಕಡಿವಾಣ ಹಾಕಬೇಕಾಗಿದೆ. ಒಟ್ಟಾರೆಯಾಗಿ ಹೊಟೇಲ್‌ ವ್ಯವಸಾಯವು ಇಂದು ಅನೇಕ ಸಂಕಷ್ಟದ ಸರಮಾಲೆಗಳನ್ನು ಎದುರಿಸುತ್ತಿದೆ. ಆದುದರಿಂದ ಸರಕಾರ ಎಚ್ಚೆತ್ತುಕೊಂಡು ಪರಿಹಾರ ಕಂಡುಕೊಳ್ಳುವಲ್ಲಿ ಚಿಂತಿಸಬೇಕಾಗಿದೆ. ಹೊಟೇಲ್‌ ಅಸೋಸಿಯೇಷನ್‌ ಈ ಬಗ್ಗೆ ನಿರಂತರ ಹೋರಾಟ ನಡೆಸಲಿದೆ ಎಂದರು.

    ಪುಣೆಯಲ್ಲಿ ಪ್ರಸ್ತುತ ಹೊಟೇಲ್‌ ಗಳಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ವಿವರಿಸಲಾಯಿತು. ಸೇವಾ ತೆರಿಗೆ ರದ್ಧತಿ, ಪರ್ಮಿಟ್‌ ರೂಮ್‌ ನವೀಕರಣ ಹೆಚ್ಚಳ ಶುಲ್ಕವನ್ನು ರದ್ದುಗೊಳಿಸಲು, ಹೊಟೇಲ್‌ಗಳಿಗೆ ಪೊಲೀಸ್‌ ಪರವಾನಿಗೆ ಪಡೆಯಲು ನಿರ್ದಿಷ್ಟ ಧೋರಣೆ ರೂಪಿಸುವಂತೆ ಸರಕಾರವನ್ನು ಒತ್ತಾಯಿಸುವ ಸಲುವಾಗಿ ಅಸೋಸಿಯೇಶನ್‌ನ ನಿಲುವನ್ನು ಸಭೆಯಲ್ಲಿ ತಿಳಿಸಲಾಯಿತು. ಅಂತೆಯೇ ಹೊಟೇಲ್‌ ತೆರೆದಿಡಲು ರಾತ್ರಿ ಒಂದೂವರೆ ಗಂಟೆಯವರೆಗೆ ಅನುಮತಿ ನೀಡುವಲ್ಲಿಯೂ ಮನವಿ ಮಾಡಲಾಯಿತು.

    Click here

    Click here

    Click here

    Call us

    Call us

    ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್‌ ಕಾರ್ಯದರ್ಶಿ ಕಿಶೋರ್‌ ಸರ್ಪೋತಾªರ್‌, ಉಪಾಧ್ಯಕ್ಷ ಸದಾಶಿವ ಸಾಲ್ಯಾನ್‌, ಜಯ ನೇಮು ಶೆಟ್ಟಿ, ಸಂಜೀತ್‌ ಲಾಂಬಾ, ಜವಾಹರ್‌ ಚೋರ್ಗೆ ಉಪಸ್ಥಿತರಿದ್ದರು. ಈ ಸಂದರ್ಭ ಹೊಟೇಲ ಉದ್ಯಮಿ, ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಹೋಟೆಲ… ಉದ್ಯಮಿಗಳಾದ ವಿಶ್ವನಾಥ ಪೂಜಾರಿ ಹಾಗೂ ಮೋಹನ್‌ ಶೆಟ್ಟಿ ಹಾಜರಿದ್ದರು.

    ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ: ಕೋಟಿ-ಚೆನ್ನಯ ಕ್ರೀಡೋತ್ಸವ ಉದ್ಘಾಟನೆ

    11/01/2023

    ಬಿಲ್ಲವ ಸೇವಾ ಸಂಘ ಮುಂಬಯಿ ನೂತನ ಕಾರ್ಯದರ್ಶಿಯಾಗಿ ಅಶೋಕ ಎನ್. ಪೂಜಾರಿ ಆಯ್ಕೆ

    26/09/2020

    ಮುಂಬಯಿ: ರಾಜು ಶ್ರೀಯಾನ್ ನಾವುಂದ ವಿಧಿವಶ

    23/07/2020
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಸರಕಾರದ ಯೋಜನೆಗಳ ಆರ್ಥಿಕ ನೆರವು ಅರ್ಹರಿಗೆ ತಲುಪಿಸಿ: ಸಿ.ಇ.ಒ ಪ್ರತೀಕ್ ಬಾಯಲ್
    • ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಮಕ್ಕಳು ಪಲ್ಸ್ ಪೊಲಿಯೋ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ
    • ಉಡುಪಿ: ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ
    • ಕೋಡಿ: ಉಂಜಲೋತ್ಸವ ಸಹಿತ ಪುಷ್ಪಯಾಗ ಮಹೋತ್ಸವದ ಪ್ರಚಾರ, ಪುಷ್ಭರಥಕ್ಕೆ ಚಾಲನೆ
    • ಕಟಪಾಡಿ ಓವರ್ ಪಾಸ್ ಕಾಮಗಾರಿ ಹಿನ್ನೆಲೆ, ವಾಹನಗಳ ಸುಗಮ ಸಂಚಾರಕ್ಕೆ ಮಾರ್ಗ ಕಲ್ಪಿಸಿ: ಜಿಲ್ಲಾಧಿಕಾರಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.