ಉಪ್ಪುಂದ: ಸೇನಾ ಮುಖ್ಯಸ್ಥರ ಟೀಕೆ ಖಂಡಿಸಿ ಸಂದೀಪ್ ದೀಕ್ಷಿತ್ ಭಾವಚಿತ್ರ ದಹನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ‘ಬೀದಿಯ ಗೂಂಡಾ’ ಎಂದು ಹೋಲಿಕೆ ಮಾಡಿದ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರ ಹೇಳಿಕೆಯನ್ನು ಖಂಡಿಸಿ ಉಪ್ಪುಂದ ಪೇಟೆಯಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಂದೀಪ್ ದೀಕ್ಷಿತ್ ಭಾವಚಿತ್ರವನ್ನು ದಹಿಸಲಾಯಿತು.

Call us

Click Here

ಬೈಂದೂರು ಬಿಜೆಪಿ ಯುವಮೋರ್ಚಾ ಪ್ರಭಾರಿ ಬಿ.ಎಸ್ ಸುರೇಶ್ ಶೆಟ್ಟಿ ಮಾತನಾಡಿ ಭಾರತೀಯ ಸೇನೆಯ ಬಗೆಗೆ ದೇಶವಾಸಿಗಳಲ್ಲಿ ಅಪಾರ ಗೌರವವಿದೆ. ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಅವರನ್ನು ಪಾಕಿಸ್ಥಾನ ಸೇನೆಗೆ ಹೋಲಿಸಿದ್ದಲ್ಲದೇ ಗೂಂಡಾ ಎಂದು ಜರಿದಿರುವುದು ಖಂಡನೀಯ. ಕಾಂಗ್ರೆಸ್ ನಾಯಕರುಗಳ ಇಂತಹ ಹೇಳಿಕೆ ನಮ್ಮ ಸೇನೆಗೆ ಅಗೌರವ ತೋರುವಂತದ್ದು ಎಂದರು.

ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ಹಿಂದುಳಿದ ಮೂರ್ಚಾ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಉಪ್ಪುಂದ ಗ್ರಾಪಂ ಮಾಜಿ ಸದಸ್ಯ ಜಗನ್ನಾಥ ಖಾರ್ವಿ, ಬೈಂದೂರು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ರಾಘವೇಂದ್ರ ಪೂಜಾರಿ, ಪ್ರವೀಣಚಂದ್ರ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.

Leave a Reply