ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಇವರ ಸಹಯೋಗದೊಂದಿಗೆ ಮೂರನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಉಜಿರೆಯೆ ಎಸ್.ಡಿ.ಎಮ್ ಯೋಗ ಅಧ್ಯಯನ ಕಾಲೇಜಿನ ವಿದ್ಯಾರ್ಥಿ ಡಾ. ಅಶ್ವಿನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ.ಕೆ.ಸತ್ಯನಾರಾಯಣ, ಶಶಿಕಾಂತ ಹತ್ವಾರ್ ರಾಮಚಂದ್ರ ಆಚಾರ್, ಶರಣ್ ಎಸ್.ಜೆ, ಅರುಣ್ ಎ.ಎಸ್, ಪ್ರಶಾಂತ, ಅಂಜನ್ ಕುಮಾರ್ ಎ.ಎಲ್,ಉಜಿರೆಯೆ ಎಸ್.ಡಿ.ಎಮ್ ಯೋಗ ಅಧ್ಯಯನ ಕಾಲೇಜಿನ ವಿದ್ಯಾರ್ಥಿ ಡಾ.ಸೌಂದರ್ಯ ಗೌಡ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕುಂದೇಶ್ವರ ಇಲ್ಲಿನ ರಘುವೀರ್ ನಗರ್ಕರ್ ವಿವೇಕ್ ಪೈ, ವ್ಯಾಸರಾಯ ಮಠದ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.