ಕುಂದಾಪುರ: ವಿದೇಶಿ ವಿದ್ಯಾರ್ಥಿಗಳಿಂದ ನೇಜಿ ಕಾರ್ಯ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಶೆಟ್ರಕಟ್ಟೆಯ ಎಫ್ಎಸ್ಎಲ್ ಇಂಡಿಯಾ ಸಂಸ್ಥೆ ಭಾರತಕ್ಕೆ ಅಧ್ಯಯನಕ್ಕಾಗಿ ಬಂದ ವಿದೇಶಿ ವಿದ್ಯಾರ್ಥಿಗಳನ್ನು ನೇಜಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಸಂಸ್ಥೆಯಲ್ಲಿ ಭಾರತದ ಗ್ರಾಮೀಣ ಬದುಕು ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಬಂದ ಹಾಲೆಂಡ್, ಜರ್ಮನಿ, ಸ್ಪೈನ್ ಮೊದಲಾದ ದೇಶಗಳ ವಿದ್ಯಾರ್ಥಿಗಳು ತಲ್ಲೂರು ಬಳಿಯ ಶೆಟ್ರಕಟ್ಟೆಯ ದಾಸರಬೈಲು ಎಂಬಲ್ಲಿ ರೈತರೊಬ್ಬರಿಗೆ ಸೇರಿದ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ತಾವೇನು ರೈತರಿಗೆ ಕಡಿಮೆಯಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

Call us

Click Here

ಈ ಗದ್ದೆಯಲ್ಲಿ ಈಗಾಗಲೇ ಬೀಜ ಬಿತ್ತುವ ಮೂಲಕ ನೇಜಿ ಕಾರ್ಯ ನಡೆಸಲಾಗಿದ್ದು, ಆದರೆ ಈ ನಾಟಿಯಲ್ಲಿ ಅಲ್ಲಲ್ಲಿ ಭತ್ತದವ ಸಸಿ ಹುಟ್ಟದೇ ಇರುವ ಖಾಲಿ ಜಾಗದಲ್ಲಿ ನೇಜಿ ಕಾರ್ಯವನ್ನು ಈ ವಿದ್ಯಾರ್ಥಿಗಳು ನಡೆಸಿದರು. ಎಫ್.ಎಸ್ಎಲ್ನ ಸುಮಾರು ಇಪ್ಪತ್ತೆರಡು ವಿದೇಶಿ ವಿದ್ಯಾರ್ಥಿಗಳು ಗದ್ದೆಗಳಲ್ಲಿ ಬೆಳಗ್ಗಿನಿಂದ ನೇಜಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

Leave a Reply