Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕಸ ಹಾಕಿದರೆ ದಂಡ! ಫಲಕವೇ ದಂಡ!!
    ವಿಶೇಷ ವರದಿ

    ಕಸ ಹಾಕಿದರೆ ದಂಡ! ಫಲಕವೇ ದಂಡ!!

    Updated:21/04/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರ: ಮಾಡಬೇಡ ಎಂದರೆ ಅದನ್ನೇ ಮಾಡುವುದು. ಹೇಳಿದ ಮಾತು ಕೇಳದೆ ಇರುವುದು ಇದೆಲ್ಲಾ ಹಠ ಹಿಡಿವ ಚಿಕ್ಕ ಮಕ್ಕಳ ಸ್ವಭಾವ. ಆ ನೆಲೆಯಲ್ಲಿ ಅವರನ್ನು ಕ್ಷಮಿಸಬಹುದು. ಆದರೆ ದೊಡ್ಡವರೇ ಹಾಗೇ ಮಾಡಿದರೆ? ವಿಷಯ ಏನು ಅಂದ್ರಾ? ಸಾರ್ವಜನಿಕರಿಗೆ ಸೂಚನೆ: ಈ ಸ್ಥಳದಲ್ಲಿ ಕಸ ಎಸೆಯುವುದನ್ನು ನಿಷೇಧಿಸಲಾಗಿದೆ. ಕಸ ಹಾಕಿದವರಿಗೆ ದ0ಡ ವಿಧಿಸಲಾಗುವುದು ಹಾಗ0ತ ಕು0ದಾಪುರ ಪುರಸಭೆ ಎಲ್ಲರಿಗೂ ಕಾಣುವಂತೆ ದೊಡ್ಡದಾಗಿ ಬ್ಯಾನರೊಂದನ್ನು ಅಲ್ಲಿನ ಮರದಲ್ಲಿ ಕಟ್ಟಿದೆ. ಅದರ ಕೆಳಗಡೆಯೇ ಕಸಕಡ್ಡಿಗಳು ಮಾತ್ರವಲ್ಲ ತ್ಯಾಜ್ಯಗಳ ರಾಶಿಯನ್ನೇ ದಿನೇ ದಿನೇ ತಂದು ಸುರಿದು ಆ ಪ್ರದೇಶವನ್ನು ಗಬ್ಬೆಬ್ಬಿಸುವಲ್ಲಿ ಒಂದಿಷ್ಟು ಜನರು ತಮ್ಮ ಕಾಣಿಕೆ ನೀಡುತ್ತಿದ್ದಾರೆ. ಈ ದೃಶ್ಯ ಕಂಡು ಬಂದಿದ್ದು ಕುಂದಾಪುರದ ಮುಖ್ಯರಸ್ತೆಯಿಂದ ವ್ಯಾಸರಾಯಮಠಕ್ಕೆ ಹೋಗುವ ರಸ್ತೆಯಲ್ಲಿನ ಮೊದಲ ಬಲಭಾಗದ ರಸ್ತೆಯಲ್ಲಿ. ಇದೀಗ ಒಂದೆರಡು ಮಳೆ ಬಿದ್ದ ಬಳಿಕವಂತೂ ರಸ್ತೆಯ ಬದಿಯಲ್ಲಿನ ಈ ತ್ಯಾಜ್ಯಗಳ ರಾಶಿ ಕೆಟ್ಟ ವಾಸನೆ ಬೀರಲಾರಂಭಿಸಿದೆ. ಕೆಲವೊಂದಷ್ಟು ಜನರಿಗೆ ಮೂತ್ರಿಸಲು ಅದೇ ಖಾಯಂ ಜಾಗವಂತೆ. ಹಾಗಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಇದೇನು ಊರ ಹೊರಗಿನ ಜಾಗವಲ್ಲ. ಎಲ್.ಐ.ಸಿಯ ಕೇಂದ್ರ ಕಛೇರಿ, ಕುಂದಾಪುರದ ಮಹಿಳಾ ಪೋಲಿಸ್ ಠಾಣೆ ಎಲ್ಲವೂ ಈ ರಸ್ತೆಗೆ ಉಸಿರಿನ ಸಮೀಪದಲ್ಲಿಯೇ ಇವೆ. ಇದಾವುದನ್ನು ಗಣನೆಗೆ ತೆಗೆದುಕೊಳ್ಳದೇ ಒಂದಷ್ಟು ಜನ ಈ ಪ್ರದೇಶವನ್ನು ಗೊಬ್ಬರದ ಗುಂಡಿಯ0ತೆ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇವರಿಗೆ ಬೋರ್ಡು ಕಾಣಿಸಲ್ಲ. ದಂಡದ ಹೆದರಿಕೆಯೂ ಇಲ್ಲ. ಇನ್‍ಫ್ಯಾಕ್ಟ್ ಇಲ್ಲಿ ಬೋರ್ಡು ಹಾಕಿದ್ದೇ ದಂಡ ಅನ್ನುವಂತಾಗಿಬಿಟ್ಟಿದೆ. ಕಸ ಹಾಕಿದವರಿಗೆ ದಂಡ ವಿಧಿಸಲಿಕ್ಕೆ ಆ ಭಂಡತನಗೈದವರನ್ನು ಇಪ್ಪತ್ನಾಲ್ಕು ಗ0ಟೆ ಕಾಯುತ್ತಾ ಕುಳಿತುಕೊಳ್ಳಲು ಖಂಡಿತಾ ಸಾಧ್ಯವಿಲ್ಲ. ಅದು ಅವರಿಗೂ ಗೊತ್ತು. ಆದರೆ ಒ0ದು ನಾಗರಿಕ ಪ್ರಜ್ಞೆ?

    Click Here

    Call us

    Click Here

    ನಿಜ. ಈ ವಿಷಯದಲ್ಲಿ ಆಡಳಿತವನ್ನು ದೂರಿ ಪ್ರಯೋಜನವಿಲ್ಲ. ಮರದಲ್ಲಿ ತೂಗುತ್ತಿರುವ ಬ್ಯಾನರು ಒಂದು ಮಟ್ಟದ ಕಾಳಜಿಯನ್ನು ಅವರಿಂದ ತೋರುತ್ತಿದೆ. ಆದರೆ ಅದೇ ಕಾರಣವನ್ನು ಮು0ದಿಟ್ಟುಕೊ0ಡು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುದು ಅನ್ನುವುದು ಸತ್ಯವಿರಬಹುದು. ಒಂದಂತೂ ಸತ್ಯ. ಆಡಳಿತದ ಮನವಿಗೆ ಪೂರಕವಾಗಿ ಸೂಕ್ತವಾಗಿ ಸ್ಪಂದಿಸಬೇಕಾದ್ದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಆದರೆ ಇಲ್ಲಿನ ಕೆಲವೊಂದಷ್ಟು ಜನರು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದು ವಿಷಾದಕರ. ಪ್ರಾಯಶ: ಇದು ಕೇವಲ ಈ ಭಾಗದ ಅಥವಾ ಈ ಊರಿನ ಸಮಸ್ಯೆ ಅಲ್ಲ. ಪ್ರತೀ ಊರಿನಲ್ಲೂ ಹೀಗೊಂದು ಸಮಸ್ಯೆ ಕಾಣಿಸುತ್ತದೆ. ಆಡಳಿತದ ಜೊತೆಗೆ ನಮ್ಮ ಸಹಕಾರವೂ ಸೇರಿದಾಗ ಮಾತ್ರ ಊರಿಗೊಂದು ಚೆಂದ ಬಂದೀತು. ಇನ್ನಾದರೂ ಕಸ ಎಸೆಯುವ ಮೊದಲು ನೂರು ಬಾರಿ ಎಲ್ಲರೂ ಯೋಚಿಸೋಣ.

    ವರದಿ: ನರೇಂದ್ರ ಎಸ್. ಗಂಗೊಳ್ಳಿ

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d