Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರದಲ್ಲಿ ಗಮನ ಸೆಳೆದ ಸೈಕಲ್‌ನಲ್ಲಿ ಛದ್ಮವೇಷ
    Recent post

    ಕುಂದಾಪುರದಲ್ಲಿ ಗಮನ ಸೆಳೆದ ಸೈಕಲ್‌ನಲ್ಲಿ ಛದ್ಮವೇಷ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ಇಲ್ಲಿನ ಜೆಸಿಐ ಸಂಸ್ಥೆಯ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ರಂಗ ಸೈಕಲಿನಲ್ಲಿ ಛದ್ಮವೇಷ ಸ್ವರ್ಧೆ ನೋಡುಗರ ವಿಶೇಷ  ಗಮನ ಸೆಳೆಯಿತು. ಯೂರೋಪ್ ಮೂಲದ ದೇಶಗಳಲ್ಲಿ ಸಾಕಷ್ಟು ಪ್ರಖ್ಯಾತ ಪಡೆದಿರುವ ಈ ಸೈಕಲ್ ಛದ್ಮವೇಷ ಜನಾಕರ್ಷಣೆಯ ಕೇಂದ್ರ ಬಿಂದು. ಭಾರತದಲ್ಲಿ  ಇದರ ಕುರಿತು ಮಾಹಿತಿ ಕಡಿಮೆ ಇದ್ದರು ಕೂಡ ಕುಂದಾಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಬಹು ಸಂಖ್ಯೆಯಲ್ಲಿ ಸ್ಪರ್ಧಿಗಳು ಆಗಮಿಸಿದ್ದರು. ಕುಂದಾಪುರದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಸೈಕಲ್ ಛದ್ಮವೇಷಕ್ಕೆ ಹಲವು ವೇಷಧಾರಿಗಳು ರಂಗು ತಂದರು. ಚಿಕ್ಕ ಮಕ್ಕಳಿಂದ ಹಿಡಿದು ಆಸಕ್ತ ಹಿರಿಯರು ಕೂಡ ಸೈಕಲ್ ಛದ್ಮವೇಷದಲ್ಲಿ ಕುಂದಾಪುರದ ಸಾರ್ವಜನಿಕರಿಗೆ ಮನೋರಂಜನೆ ನೀಡಿದರು.

    Click Here

    Call us

    Click Here

    ಕುಂದಾಪುರ ಜೇಸಿಐ ಇದರ ಒಂದು ವಾರದ ರಂಗ ಸಪ್ತಾಹದ ಪ್ರಾರಂಭದ ದಿನದಂದು ಕುಂದಾಪುರ ಲಕ್ಷ್ಮೀ ನರಸಿಂಹ ಕಲಾ ಮಂದಿರದ ಮುಂಭಾಗದಿಂದ ಪ್ರಾರಂಭಗೊಂಡ ಸೈಕಲ್ ಜಾಥಾ ಮತ್ತು ಸೈಕಲ್ ಛದ್ಮವೇಷ ಕಾರ್ಯಕ್ರಮವನ್ನು ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಂದಾಪುರ ಉದ್ಘಾಟಿಸಿದರು. ಇದೇ ಸಂದರ್ಭ ಕುಂದಾಪುರ ಸೈಕ್ಲಿಂಗ್ ಕ್ಲಬ್‌ನ ಲಾಂಛನದ ಬಿಡುಗಡೆ ನಡೆಯಿತು. ಸಹನಾ ಡೆವಲಪರ‍್ಸ್‌ನ ಸುರೇಂದ್ರ ಶೆಟ್ಟಿ ಸೈಕಲ್ ಜಾಥಕ್ಕೆ ಬಾವುಟ ಹಾರಿಸಿ ಚಾಲನೆ ನೀಡಿದರು.

    ಕುಂದಾಪುರ ಜ್ಯೂನಿಯರ್ ಕಾಲೇಜು ಆವರಣದಿಂದ ಹೊರಟ ಸೈಕಲ್ ಛದ್ಮವೇಷ ಮತ್ತು ಸೈಕಲ್ ಜಾಥವು ಕುಂದಾಪುರದ ಸರ್ವೀಸ್ ಬಸ್ ನಿಲ್ದಾಣದ ಮೂಲಕ ಸಾಗಿ ಬಂದು ಪಾರಿಜಾತ ವೃತ್ತದ ಮೂಲಕ ಸಾಗಿ ಶಾಸ್ತ್ರೀ ವೃತ್ತದವರೆಗೆ ತೆರಳಿ ಪುನಃ ಕಲಾಮಂದಿರದ ಬಳಿ ಆಗಮಿಸಿತ್ತು. ಸೈಕಲ್ ಛದ್ಮವೇಷದಲ್ಲಿ ಚಿಕ್ಕ ಮಕ್ಕಳು ಮುಖವಾಡ ಧರಿಸಿ ಭಾಗವಹಿಸಿದ್ದರೆ, ನಾರದ, ಟ್ರೈಸಿಕಲ್, ಆಮೆಯ ರಕ್ಷಿಸಿ ಘೋಷಣೆ ಇರುವ ಸೈಕಲ್ ಛದ್ಮವೇಷಧಾರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

    ಈ ಸಂದರ್ಭ ಕುಂದಾಪುರ ಜೇಸಿಐ ಅಧ್ಯಕ್ಷೆ ಅಕ್ಷತಾ ಗಿರೀಶ್, ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ.ಸುಕುಮಾರ್, ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ಜೇಸಿಐ ರಾಪ್ಟ್ರೀಯ ಮಾಜಿ ಕಾನೂನು ಸಲಹೆಗಾರ ಶ್ರೀಧರ ಪಿ.ಎಸ್., ಕಾರ್ಯದರ್ಶಿ ರಾಘು ವಿಠಲವಾಡಿ, ಜೇಸಿರೆಟ್ ಅಧ್ಯಕ್ಷೆ ನಾಗರತ್ನ, ಖಾಜಾಂಚಿ ಚೇತನ್ ದೇವಾಡಿಗ, ಪೂರ್ವಾಧ್ಯಕ್ಷ ನವೀನ್ ಶೇಟ್, ಕುಂದಾಪುರ ಸೈಕ್ಲಿಂಗ್ ಕ್ಲಬ್‌ನ ಸಚಿನ್ ನಕ್ಕತ್ತಾಯ, ಪ್ರವೀಣ್ ಕುಮಾರ್, ದಾಮೋದರ ಪೈ ಮತ್ತು ಅಕ್ಷತ್ ಶೆಟ್ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರದ ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನ ಬಹುಮಾನ ವಿತರಣೆ ಕಾರ್ಯಕ್ರಮ
    • ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವು
    • ವಂಡ್ಸೆ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ
    • ಆಳ್ವಾಸ್ ಕ್ರಿಸ್ಮಸ್ ಸಂಭ್ರಮಾಚರಣೆ
    • ಸರ್ಕಾರಿ, ಸರ್ಕಾರೇತರ ಸಂಸ್ಥೆಗಳ ದೈನಂದಿನ ಚಟುವಟಿಕೆಯಲ್ಲಿ ಕನ್ನಡ ಭಾಷೆಯ ಬಳಕೆ ಕಡ್ಡಾಯ: ಜಿಲ್ಲಾಧಿಕಾರಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.