Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಾಗೂರಿನಲ್ಲಿ ಶಂಕರ ತತ್ತ್ವ ಪ್ರಸಾರ – ಉದ್ಘಾಟನೆ
    ಊರ್ಮನೆ ಸಮಾಚಾರ

    ನಾಗೂರಿನಲ್ಲಿ ಶಂಕರ ತತ್ತ್ವ ಪ್ರಸಾರ – ಉದ್ಘಾಟನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಬೈಂದೂರು : ‘ವೇಂದಾತ ವಿಚಾರಗಳು ಅತ್ಯಂತ ತರ್ಕಬಧ್ಧವಾಗಿದ್ದು ಆಧುನಿಕ ವೈಜ್ಞಾನಿಕ ಅವ್ವೇಷಣೆಗಳಿಗೂ ಮೀರಿದ ಸತ್ಯವಾಗಿದೆ. ಸನಾತನ ಧರ್ಮದ ”ಏಕಂ ಸತ್ ವಿಪ್ರಾ ಬಹುಧಾವದಂತಿ”ಎನ್ನುವ ಮಾತನ್ನು ಆಚಾರ್ಯ ಶಂಕರ ಭಗವತ್ಪಾದರು ಒತ್ತಿ ತಿಳಿಸಿದರು. ಜ್ಞಾನದ ಅತ್ಯುತ್ತಮ ಸ್ತರದಲ್ಲಿನ ಅನುಭವವನ್ನು ಸರ್ವರಿಗೂ ತಲುಪುವಂತೆ ಅನೇಕ ಭಕ್ತಿ ಸ್ತೋತ್ರಗಳನ್ನು ರಚಿಸಿದರು. ಅವರ ಸ್ತೋತ್ರ ಸಾಹಿತ್ಯವು ಕಾವ್ಯಾತ್ಮಕವಾಗಿಯೂ ಶ್ರೇಷ್ಠವಾಗಿದ್ದು ಭಾವ ಪೂರ್ಣ ಹಾಡುವಿಕೆಯಿಂದ ಕೇಳುಗರು ತನ್ಮಯರಾಗುತ್ತಾರೆ’ ಎಂದು ಬೆಂಗಳೂರಿನ ಓಪ್ಟೀವ್ ಇಂಡಿಯಾದ ಉಪಾಧ್ಯಕ್ಷ ಶ್ರೀ ಜಗದೀಶ ಮಯ್ಯ ಇವರು ಸುವಿಚಾರ ಬಳಗ ಟ್ರಸ್ಟ್ ರಿ. ಮತ್ತು ಶಾಂಕರ ತತ್ತ್ವ ಪ್ರಸಾರ ಸಮಿತಿಯ ಆಶ್ರಯದಲ್ಲಿ ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ಏರ್ಪಡಿಸಿದ ಸರಣಿ ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡುತ್ತಾ ನುಡಿದರು.

    Click Here

    Call us

    Click Here

    ನಾಗೂರು ಸಂದೀಪನ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಬಿ. ವಿಶ್ವೇಶ್ವರ ಅಡಿಗರು ದೀಪ ಬೆಳಗಿಸಿ ಉದ್ಘಾಟಿಸಿ ‘ನಹಿಜ್ಞಾನೇನ ಸದೃಶಂ’ ಶುದ್ಧ ಜ್ಙಾನ ಪ್ರಾಪ್ತಿಯಿಂದ ಭ್ರಮೆಯ ಬಂಧನ ಹರಿದು ಈ ಬದುಕಿನಲ್ಲಿಯೇ ಸಹಜ ಆನಂದಾನುಭೂತಿ ಹೊಂದಲು ಸಾಧ್ಯ ಎಂದು ವಿವರಿಸಿದ ಶಂಕರ ಭಗವತ್ಪಾದಕರ ಕುರಿತ ಅರಿವಿನ ಪ್ರಸರಣವು ವರ್ತಮಾನದ ಅವಶ್ಯಕತೆಯಾಗಿದೆ. ಎಂದರು.

    ಶಂಕರ ತತ್ತ್ವ ಪ್ರಸಾರ ಅಭಿಯಾನಮ್‌ನ ಬೈಂದೂರು ತಾಲೂಕು ಸಂಚಾಲಕ ಉಪ್ಪುಂದ ಚಂದ್ರಶೇಖರ ಹೊಳ್ಳರು ‘ಆದಿ ಶಂಕರ ಭಗವತ್ಪಾದರು ಸ್ಥಾಪಿಸಿದ ಪ್ರಮುಖ ಆಮ್ನಾಯ ಪೀಠಗಳಲ್ಲಿ ಋಗ್ವೇದವನ್ನು ಪ್ರತಿನಿಧಿಸುವ ಪುರಿಪೀಠದ ಸಂಸ್ಥಾಪಕರು ಕುಂದ ನಾಡಿನ ಮೂಲದವರು. (ಶಿವಳ್ಳಿ.) ಭಗವತ್ಪಾದರು ಭಾರತ ವರ್ಷದ ಸಂಚಾರ ಕಾಲದಲ್ಲಿ ಮೂರು ಬಾರಿ ಈ ಪ್ರದೇಶದಲ್ಲಿ ಹಾದು ಹೊದಂತೆ ಕಂಡುಬರುತ್ತದೆ. ಕೊಲ್ಲೂರು, ಕೊಟಚಾದ್ರಿ, ಕ್ಷೇತ್ರದಲ್ಲಿ ಅವರ ಸಾಧನೆಯ ಪ್ರಭೆ ಇಂದಿಗೂ ಜಾಗ್ರತವಾಗಿದೆ’ ಎಂದು ತಿಳಿಸಿದರು.

    ಸುವಿಚಾರ ಬಳಗ ಟ್ರಸ್ಟ್ ರಿ. ನ ಅಧ್ಯಕ್ಷ ಬಿ. ರಾಮಕೃಷ್ಣ ಸೇರೆಗಾರರು ಅಧ್ಯಕ್ಷತೆ ವಹಿಸಿ ‘ಪ್ರಜ್ಞಾವಂತ ಜನರು ಇಂಥ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶಕರಾಗಿ ಭಾಗವಹಿಸಿದರೆ ಸಮಾಜದ ಪರಿವರ್ತನೆಗೆ ಸಹಕಾರಿಯಾಗುತ್ತದೆ’ ಎಂದರು.

    ಹವ್ಯಕ ಮಹಾಸಭಾದ ಅಧ್ಯಕ್ಷ ಯು. ಮಂಜುನಾಥ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಶ್ರೀಮತಿ ಯು. ವರಮಲಕ್ಷ್ಮೀ ಹೊಳ್ಳರ ಮಾರ್ಗದರ್ಶನಲ್ಲಿ ವಿಪ್ರರಂಜಿನಿ ಬಳಗದ ಸದಸ್ಯೆಯರಿಂದ ಆದಿ ಶಂಕರರು ರಚಿಸಿದ ‘ಭಜಗೋವಿಂದಮ್’, ‘ಗೋವಿಂದ ಅಷ್ಟಕ’, ‘ ಗುರು ಪಾದುಕಾಸ್ತೋತ್ರ’, ‘ರಂಗನಾಥ ಅಷ್ಟಕ’ ಇತ್ಯಾದಿಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯ್ತು.

    Click here

    Click here

    Click here

    Call us

    Call us

    ವೇ.ಮೂ. ಚಂದ್ರಶೇಖರ ಭಟ್ಟರು ಶಂಕರ ಭಗವತ್ಪಾದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಂಕರ ಆಚಾರ್ಯ ಅಷ್ಟೋತ್ತರ ಶತನಾವಳಿಯನ್ನು ಪಠಿಸಲಾಯ್ತು.

    ಯು. ಗಣೇಶ ಪ್ರಸನ್ನ ಮೈಯ್ಯರು ಕಾರ್ಯಕ್ರಮ ನಿರೂಪಿಸಿದರು. ಯು. ಸಂದೇಶ್ ಭಟ್ ಸ್ವಾಗತಿಸಿದರು. ವಿ.ಹೆಚ್ ನಾಯಕ ವಂದಿಸಿದರು. ರತ್ನಾಕರ ಉಡುಪ ಆತಿಥ್ಯ ವಹಿಸಿದ್ದರು.

     

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೊರಗ ಕಾಲೋನಿಯ 8 ಹೊಸ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ವಿತರಣೆ

    20/12/2025

    ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಬಲಪಾಡಿ ನಾರಾಯಣಾಚಾರ್ಯ ಅವರಿಗೆ ಶ್ರದ್ಧಾಂಜಲಿ ಸಭೆ

    20/12/2025

    ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ: ಕೆ. ವಿಕಾಸ್‌ ಹೆಗ್ಡೆ

    20/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಕೊರಗ ಕಾಲೋನಿಯ 8 ಹೊಸ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ವಿತರಣೆ
    • ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಬಲಪಾಡಿ ನಾರಾಯಣಾಚಾರ್ಯ ಅವರಿಗೆ ಶ್ರದ್ಧಾಂಜಲಿ ಸಭೆ
    • ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ: ಕೆ. ವಿಕಾಸ್‌ ಹೆಗ್ಡೆ
    • ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ
    • ಕುಂದಾಪುರದ ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನ ಬಹುಮಾನ ವಿತರಣೆ ಕಾರ್ಯಕ್ರಮ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.