Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕರ್ಣಾಟಕ ಬ್ಯಾಂಕ್‌ ಗೆ ಐಎಸ್‌ಒ 27001: 2013 ಪ್ರಮಾಣ ಪತ್ರ
    ಕರಾವಳಿ

    ಕರ್ಣಾಟಕ ಬ್ಯಾಂಕ್‌ ಗೆ ಐಎಸ್‌ಒ 27001: 2013 ಪ್ರಮಾಣ ಪತ್ರ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಮಂಗಳೂರು: ಕರ್ಣಾಟಕ ಬ್ಯಾಂಕ್‌ ಬ್ರಿಟನ್‌ ಮೂಲದ ಮೆ| ಎನ್‌ಕ್ಯುಎ ಯುಕೆಎಎಸ್‌ ಸಂಸ್ಥೆಯಿಂದ ಐಎಸ್‌ಒ 27001:2013 ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.

    Click Here

    Call us

    Click Here

    ಸಂಸ್ಥೆಯ ನಿರ್ದೇಶಕ ಗಣೇಶ್‌ ಶಾಸ್ತ್ರಿ ಅವರು ಈ ಪ್ರಮಾಣ ಪತ್ರವನ್ನು ಬ್ಯಾಂಕಿನ ಆಡಳಿತ ನಿರ್ದೇಶಕ ಪಿ. ಜಯರಾಂ ಭಟ್‌ ಅವರಿಗೆ ಪ್ರದಾನ ಮಾಡಿದರು. ಚೀಫ್‌ ಜನರಲ್‌ ಮ್ಯಾನೇಜರ್‌ ಮಹಾಬಲೇಶ್ವರ ಎಂ.ಎಸ್‌., ಸೀನಿಯರ್‌ ಜನರಲ್‌ ಮ್ಯಾನೇಜರ್‌ ಪಿ. ಜೈರಾಂ ಹಂದೆ, ಜನರಲ್‌ ಮ್ಯಾನೇಜರ್‌ಗಳಾದ ಎನ್‌. ಉಪೇಂದ್ರ ಪ್ರಭು, ಡಾ| ಮೀರಾ ಎಲ್‌.ಬಿ. ಅರಾನ್ಹಾ, ರಘುರಾಮ, ಡಿಜಿಎಂಗಳಾದ ಅನಂತ ಪದ್ಮನಾಭ (ಐಟಿ ವಿಭಾಗ) ಮತ್ತು ಸುರೇಶ್‌ ಕೆ. (ಆರ್‌ಎಂಡಿ), ಚೀಫ್‌ ಮ್ಯಾನೇಜರ್‌ (ಸಿಐಎಸ್‌ಒ) ವಾದಿರಾಜ ಕೆ. ಉಪಸ್ಥಿತರಿದ್ದರು.

    ಆತ್ಯಾಧುನಿಕ ಸೌಲಭ್ಯ ಕರ್ಣಾಟಕ ಬ್ಯಾಂಕ್‌ ಶೇ. 100 ಕೋರ್‌ ಬ್ಯಾಂಕಿಂಗ್‌ ಸೊಲ್ಯೂಶನ್‌ ವ್ಯವಸ್ಥೆ ಹೊಂದಿದೆ. 681ಕ್ಕೂ ಅಧಿಕ ಶಾಖೆಗಳು ಮತ್ತು 1,020ಕ್ಕೂ ಮಿಕ್ಕಿ “ಮನಿ ಪ್ಲಾಂಟ್‌’ ಎಟಿಎಂಗಳಿದ್ದು, ಇಂಟರ್‌ ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌, ಎಸ್‌ಎಂಎಸ್‌ ಬ್ಯಾಂಕಿಂಗ್‌ ಮುಂತಾದ ಸೇವಾ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಿದೆ. ಪ್ರಸ್ತುತ ಡಿಜಿ ಟಲ್‌ ಬ್ಯಾಂಕಿಂಗ್‌ನ ಈ ಯುಗದಲ್ಲಿ ಮಾಹಿತಿ ತಂತ್ರಜ್ಞಾನವು ವ್ಯವಹಾರದ ಪ್ರಮುಖ ಮೂಲಸೌಕರ್ಯವಾಗಿದೆ. ಹೊಸ ತಂತ್ರಜ್ಞಾನಗಳು ಗ್ರಾಹಕರಿಗೆ ಅತ್ಯಾಧುನಿಕ ಸೇವಾ ಸೌಲಭ್ಯಗಳನ್ನು ಒದಗಿಸುತ್ತವೆಯಾದರೂ ಈ ಅನುಕೂಲಗಳು ದುಬಾರಿ ಹಾಗೂ ಅಪಾಯಕಾರಿಯೂ ಆಗಿವೆ. ಜಗತ್ತಿನ ಯಾವುದೇ ಭಾಗದಿಂದ ದುಷ್ಕರ್ಮಿಗಳ ದಾಳಿಯನ್ನು ನಾವು ಅಲ್ಲಗಳೆಯುವಂತಿಲ್ಲ. ಇಂತಹ ಸನ್ನಿವೇಶದಲ್ಲಿ ಗ್ರಾಹಕರ ಹಿತಾಸಕ್ತಿಯನ್ನು ಕಾಪಾ
    ಡಲು ಬ್ಯಾಂಕ್‌ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎಂದು ಆಡಳಿತ ನಿರ್ದೇಶಕ ಪಿ. ಜಯರಾಂ ಭಟ್‌ ಹೇಳಿದರು.

    ಬ್ಯಾಂಕಿಂಗ್‌ ಉದ್ಯಮದಲ್ಲಿರುವ ಅತ್ಯುತ್ತಮ ಎನ್ನಲಾದ ಐಎಸ್‌ಎಂಎಸ್‌ ಚೌಕಟ್ಟನ್ನು ಅಂದರೆ ಐಎಸ್‌ಒ 27001 ಇದರ ಮಾರ್ಗಸೂಚಿಗಳನ್ನನುಸರಿಸಿ ಬ್ಯಾಂಕ್‌ ತನ್ನ ಸುರಕ್ಷತಾ ನೀತಿಗಳನ್ನು ಆಗಿಂದಾಗ್ಗೆ ಪುನರ್‌ ಪರಿಶೀಲಿಸುತ್ತಿದೆ. ಬ್ಯಾಂಕಿಗೆ ಈ ಹಿಂದೆ ತನ್ನ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿ ಐಎಸ್‌ಒ 27001:2015 ಪ್ರಮಾಣ ಪತ್ರವನ್ನು ನೀಡಲಾಗಿದ್ದು, ಇತ್ತೀಚೆಗೆ ಹೊಸ ಮಾನದಂಡಗಳನ್ವಯ ಐಎಸ್‌ಒ 27001:2013 ಪ್ರಮಾಣ ಪತ್ರವನ್ನು ಕೊಡಲಾಗಿದೆ ಎಂದು ವಿವರಿಸಿದರು.

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಮಗುವಿನ ಹಕ್ಕು: ಜಿಲ್ಲಾಧಿಕಾರಿ

    19/12/2025

    ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ಸಾಗಾಣಿಕ ವಾಹನಗಳ ಓವರ್ ಲೋಡ್ ನಿರ್ಧಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

    19/12/2025

    ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    18/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿ.ವೈ. ರಾಘವೇಂದ್ರ
    • ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಮಗುವಿನ ಹಕ್ಕು: ಜಿಲ್ಲಾಧಿಕಾರಿ
    • ರಾಜ್ಯ ಮಟ್ಟದ ಜ್ಞಾನಜ್ಯೋತಿ ಪ್ರಶಸ್ತಿಗೆ ಮೊಳಹಳ್ಳಿ ಶಾಲೆಯ ಶಿಕ್ಷಕಿ ಶೋಭಾ ಸಿ. ಶೆಟ್ಟಿ ಆಯ್ಕೆ
    • ವೃದ್ಧೆ ನಾಪತ್ತೆ
    • ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ಸಾಗಾಣಿಕ ವಾಹನಗಳ ಓವರ್ ಲೋಡ್ ನಿರ್ಧಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.