Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪಡುಕೋಣೆ: ನಾರಾಯಣ ಶ್ರಮಶಕ್ತಿ ಪ್ರಶಸ್ತಿ ಪ್ರದಾನ
    Uncategorized

    ಪಡುಕೋಣೆ: ನಾರಾಯಣ ಶ್ರಮಶಕ್ತಿ ಪ್ರಶಸ್ತಿ ಪ್ರದಾನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು : ದಿ. ನಾರಾಯಣ ಪಡುಕೋಣೆ ಅವರ ಎರಡನೆಯ ಪುಣ್ಯತಿಥಿಯಂದು ಅವರ ’ಹಕ್ಕಿಗೂಡು’ ಮನೆಯಲ್ಲಿ ಮಂಗಳವಾರ ನಡೆದ ’ನಾರಾಯಣ ಶ್ರಮಶಕ್ತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಜರುಗಿತು.

    Click Here

    Call us

    Click Here

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಉಪನ್ಯಾಸಕ, ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಮಾತನಾಡಿ ಶ್ರಮಜೀವಿಯಾಗಿ ಸಾರ್ಥಕ ಬದುಕು ರೂಪಿಸಿಕೊಂಡು ಕುಟುಂಬವನ್ನು ಉನ್ನತಿಗೆ ಒಯ್ದಿದ್ದ ಪಡುಕೋಣೆ ನಾರಾಯಣ ಗಾಣಿಗ ಅವರ ಪುಣ್ಯತಿಥಿಯಂದು ಅವರಂತೆ ಬದುಕಿದ್ದ ಒಬ್ಬರನ್ನು ಗುರುತಿಸಿ ಅವರಿಗೆ ಶ್ರಮಶಕ್ತಿ ಪ್ರಶಸ್ತಿ ನೀಡುತ್ತಿರುವುದು ಒಂದು ಅಪೂರ್ವದ ಮತ್ತು ಶ್ಲಾಘನೀಯ ಉಪಕ್ರಮ ಎಂದು ನಿ ಹೇಳಿದರು.

    ನಾರಾಯಣ ಗಾಣಿಗರು ವರ್ಷದ ಎಲ್ಲ ಕಾಲಗಳಲ್ಲೂ ಕಾಯಕವನ್ನು ಧಾರ್ಮಿಕ ಶ್ರದ್ಧೆಯಂತೆ ನಡೆಸಿದವರು. ತಮ್ಮ ಕೊನೆಗಾಲದ ವರೆಗೂ ಆರೋಗ್ಯಯುತ ಜೀವನ ನಡೆಸಿ ಕುಟುಂಬದ ಕಿರಿಯರಿಗೆ ಮೌಲ್ಯಾಧರಿತ ಜೀವನಪಥವನ್ನು ತೋರಿದವರು. ಅವರ ವಾರ್ಷಿಕ ಸ್ಮರಣೆಯನ್ನು ಕಳೆದ ವರ್ಷದಂತೆ ಈ ವರ್ಷವೂ ’ಶ್ರಮಶಕ್ತಿ ಪ್ರಶಸ್ತಿ’ ಪ್ರದಾನದ ಮೂಲಕ ನಡೆಸುತ್ತಿರುವುದರ ಹಿಂದೆ ಅವರು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದ ಆದರ್ಶದ ಬದುಕು, ಪರಿಶುದ್ಧ ಪರಂಪರೆ ಕೆಲಸ ಮಾಡಿದೆ. ಸುಮಾರು ೪ ದಶಕಗಳುದ್ದಕ್ಕೆ ಕಟ್ಟಿಗೆ ಒಡೆಯುವ ಅತ್ಯಂತ ಕಠಿಣ ಕಾಯಕ ನಡೆಸಿ, ಅದರದೇ ದುಡಿಮೆಯಿಂದ ಸುಶಿಕ್ಷಿತ ಕುಟುಂಬವನ್ನು ರೂಪಿಸಿದ ಪಡುಕೋಣೆ ಭಂಡಾರಮನೆ ನಾಣು ಯಾನೆ ನಾರಾಯಣ ನಾಯ್ಕರಿಗೆ ಈ ಪ್ರಶಸ್ತಿ ನೀಡುತ್ತಿರುವುದು ನಾರಾಯಣ ಗಾಣಿಗರಿಗೆ ಅವರ ಕುಟುಂಬ ಸಲ್ಲಿಸಿದ ಅರ್ಥಪೂರ್ಣ ಗೌರವ ಮತ್ತು ಸಂಸ್ಮರಣೆ ಎಂದು ಅವರು ಹೇಳಿದರು.

    ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೆ. ರಮೇಶ ಗಾಣಿಗ, ಸಂಘದ ನಿರ್ದೇಶಕಿ ಶಶಿಕಲಾ ನಾರಾಯಣ, ಕಾರ್ಮಿಕ ಮುಖಂಡ ಸುರೇಶ ಕಲ್ಲಾಗರ ಹಿರಿಯರ ಪುಣ್ಯತಿಥಿಯನ್ನು ವಿಭಿನ್ನವಾಗಿ ನಡೆಸಿದ ನಾರಾಯಣ ಗಾಣಿಗ ಕುಟುಂಬದ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಉಪಸ್ಥಿತರಿದ್ದ ಅತಿಥಿಗಳು ಶ್ರಮಜೀವಿ ನಾಣು ಯಾನೆ ನಾರಾಯಣ ನಾಯ್ಕ್ ಅವರಿಗೆ ಈ ಸಾಲಿನ ನಾರಾಯಣ ಶ್ರಮಶಕ್ತಿ ಪ್ರಶಸ್ತಿ ಪ್ರದಾನ ಮಾಡಿದರು.

    ಆಯ್ಕೆ ಸಮಿತಿಯ ರಾಜೀವ ಪಡುಕೋಣೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಾರಾಯಣ ಗಾಣಿಗ ಅವರ ಪುತ್ರ, ’ಜನಪ್ರತಿನಿಧಿ’ ವಾರಪತ್ರಿಕೆಯ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮದ ಆಶಯವನ್ನು ವಿವರಿಸಿದರು. ರಾಜಗುರು ವಂದಿಸಿದರು. ಪಿ. ಎನ್. ಶ್ರೀಧರ ಪಡುಕೋಣೆ, ಶ್ರೀನಿವಾಸ, ನಾರಾಯಣ ಗಾಣಿಗರ ಬಂಧುಗಳು, ಅಭಿಮಾನಿಗಳು ಇದ್ದರು. ಎಲ್ಲರೂ ಭೋಜನಕೂಟದಲ್ಲಿ ಪಾಲ್ಗೊಂಡರು.

    Click here

    Click here

    Click here

    Call us

    Call us

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

    05/12/2025

    ಕಥೆ ಹೇಳುವ ಸ್ಪರ್ಧೆಯಲ್ಲಿ ಮದರ್ ತೆರೇಸಾ ಪ್ರಾಥಮಿಕ ಶಾಲೆಯ ಪ್ರಣತಿ ಶೆಟ್ಟಿಗೆ ದ್ವಿತೀಯ ಸ್ಥಾನ

    01/12/2025

    ಹಿಂದಿ ಭಾಷಣ ಸ್ಪರ್ಧೆ: ಮದರ್ ತೆರೇಸಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿಗೆ ದ್ವಿತೀಯ ಸ್ಥಾನ

    01/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d