ಯೋಗ ಆರೋಗ್ಯಕ್ಕೆ ಉತ್ತಮ: ಕೆ.ಆರ್.ನಾಯ್ಕ್

Call us

Call us

Call us

ಕುಂದಾಪುರ: ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಾಯ, ನೆಹರೂ ಯುವಕೇಂದ್ರ ಉಡುಪಿ, ಜೆಸಿಐ ಕುಂದಾಪುರ ಸಿಟಿ, ಮಹಾವಿಷ್ಣು ಯುವಕ ಮಂಡಲ ಹಾಗೂ ಮೆಟ್ರಿಕ್ ಪೂರ್ವಾ ಬಾಲಕರ ವಿದ್ಯಾರ್ಥಿನಿಲಯದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರದ ಮಾಹಿತಿ ನೆಡೆಯಿತು.

Call us

Click Here

ಯೋಗ ಆರೋಗ್ಯಕ್ಕೆ ಉತ್ತಮವೆಂದು ಕುಂದಾಪುರದ ಉದ್ಯಮಿ ಕೆ.ಆರ್.ನಾಯ್ಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷರಾದ ಚಂದ್ರಕಾಂತ್ ಅವರು ವಹಿಸಿ ಶುಭಹಾರೈಸಿದರು. ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ರಾಘವೇಂದ್ರ ನಾವುಡ ಇವರು ಶಿಬಿರದಲ್ಲಿ ಭಾಗವಹಿಸದ ಶಿಬಿರಾರ್ಥಿಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನರಸಿಂಹ ಗಾಣಿಗ ಹರೆಗೋಡು, ವಸತಿ ನಿಲಯದ ಮಲ್ವೀಚಾರಕರಾದ ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಪೇಕ್ಷ ವಂದಿಸಿರು. ಸಚಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply