ಬೈಂದೂರಿನ ಕ್ವಾರಂಟೈನ್ ಕೇಂದ್ರಗಳಿಗೆ ಪ್ರತಿನಿತ್ಯ ಉಚಿತ ತಿಂಡಿ-ಪಾನೀಯ ವಿತರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೇವಾ ಭಾರತಿ ಬೈಂದೂರು ಶಾಖೆ ಹಾಗೂ ಬೆಸುಗೆ ಫೌಂಡೇಶನ್ ಬೈಂದೂರು ಸಹಯೋಗದೊಂದಿಗೆ ಬೈಂದೂರಿನ ವಿವಿಧ ಕ್ವಾರಂಟೈನ್ ಕೇಂದ್ರಗಲ್ಲಿರುವ ಮುಂಬೈ ಸೇರಿದಂತೆ ಹೊರರಾಜ್ಯಗಳ ಜನರಿಗೆ ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ತಿಂಡಿ ಹಾಗೂ ಪಾನೀಯಗಳನ್ನು ವಿತರಿಸಲಾಗುತ್ತಿದೆ.

Call us

Click Here

ಕಳೆದ ಹತ್ತು ದಿನಗಳಿಂದ ಉದ್ಯಮಿಗಳಾದ ಜಯಾನಂದ ಹೋಬಳಿದಾರ್, ಕೆ. ವೆಂಕಟೇಶ್ ಕಿಣಿ, ವೆಂಕಟರಮಣ ಬಿಜೂರು, ಸದಾಶಿವ ಪಡುವರಿ, ಗೋಪಾಲಕೃಷ್ಣ ಕಲ್ಮಕ್ಕಿ, ರಿಯಾಜ್ ಅಹಮ್ಮದ್, ಪ್ರಶಾಂತ್ ಪೂಜಾರಿ ನ್ಯಾಶನಲ್ ಬೇಕರಿ, ಸಂಸ್ಥೆಗಳಾದ ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಕುಂದಾಪುರ ಹಾಗೂ ಸೈಂಟ್ ಥಾಮಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬೈಂದೂರು ಸಹಕಾರದಿಂದ ನೆರವು ನೀಡಲಾಗಿದೆ. ಪ್ರತಿನಿತ್ಯವೂ ವಿವಿಧ ಬಗೆಯ ತಂಪು ಪಾನೀಯ, ಚಹಾ, ಕಷಾಯ ತಯಾರಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಿತರಣೆ ಮಾಡಲಾಗುತ್ತಿದೆ.

ಬೆಸುಗೆ ಫೌಡೇಶನ್‌ನ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದರೇ, ಸ್ವಯಂಸೇವಕ ಪ್ರಸಾದ್ ಬೈಂದೂರು ಕ್ವಾರಂಟೈನ್ ಕೇಂದ್ರಗಳಿಗೆ ವಿತರಿಸುವ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ:
► ಉಡುಪಿ ಜಿಲ್ಲೆ: ಮಂಗಳವಾರ ಮಧ್ಯಾಹ್ನ 3 ಪಾಸಿಟಿವ್. ಒಟ್ಟು 111ಕ್ಕೆ ಏರಿಕೆ – https://kundapraa.com/?p=37916 .

Click here

Click here

Click here

Click Here

Call us

Call us

Leave a Reply