ಬಿಜೂರು ಕ್ವಾರಂಟೈನ್ ಕೇಂದ್ರದ ವಾಸಿಗಳಿಗೆ ನಂದಿಕೇಶ್ವರ ಫ್ರೆಂಡ್ಸ್ ನೆರವು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿಜೂರು ಸರಕಾರಿ ಪ್ರೌಢ ಶಾಲೆಯಲ್ಲಿ ಕ್ವಾರಂಟೈನ್  ಮಾಡಲಾಗಿದ್ದ ಮುಂಬೈ ಸೇರಿದಂತೆ ಇತರ ರಾಜ್ಯಗಳಿಂದ ಆಗಮಿಸಿದ್ದ ಜನರನ್ನು ಸ್ಥಳೀಯಾಡಳಿತದೊಂದಿಗೆ ಬಿಜೂರು ನಂದಿಕೇಶ್ವರ ಫ್ರೆಂಡ್ಸ್ ಸದಸ್ಯರು ವಿಶೇಷ ಮುತುವರ್ಜಿಯಿಂದ ಸಕಲ ವ್ಯವಸ್ಥೆ ಕಲ್ಪಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Call us

Click Here

72ಮಂದಿ ಕ್ವಾರಂಟೈನ್ ವಾಸಿಗಳಿಗೆ ಪ್ರತಿದಿನ ಕುಡಿಯಲು ಬಿಸಿ ನೀರು, ಮಕ್ಕಳಿಗೆ ಹಾಲು, ಸಂಜೆ ಉಪಾಹಾರ, ಒಂದು ದಿನ ಮೊಟ್ಟೆ, ಪಾಯಸವನ್ನು ವಿತರಿಸಲಾಗಿತ್ತು. ಸಂಘದ ವತಿಯಿಂದ ಪ್ರತಿಯೊಬ್ಬರ ಅಗತ್ಯಕ್ಕೂ ಸ್ಪಂದನೆ ನೀಡಲಾಗಿಗಿತ್ತು.

ಈ ಕಾರ್ಯಕ್ಕೆ ಪ್ರಿಯದರ್ಶಿನಿ ಬೆಸ್ಕೂರು, ಸಂತೋಷ ಶ್ಯಾನುಭಾಗ್, ಕುರುಣಾಕರ ಗಾಣಿಗ ಬಿಜೂರು, ಸಚಿನ್ ದೇವಾಡಿಗ ಬಿಜೂರು ಮೊದಲಾದವರು ಸಹಕರಿಸಿದರು. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಕ್ವಾರಂಟೈನ್ ನಿವಾಸಿಗಳಿಗೆ ಬಿಸ್ಕಟ್, ಕೇಕ್, ಮಾಸ್ಕ್, ಸ್ಯಾನಿಟೈಸರ್ ಒದಗಿಸಿದರು.

ಬಿಜೂರು ನಂದಿಕೇಶ್ವರ ಫ್ರೆಂಡ್ಸ್‌ನ ಅಧ್ಯಕ್ಷರು, ಗ್ರಾ.ಪಂ. ಸದಸ್ಯರಾದ ರಮೇಶ ದೇವಾಡಿಗ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಬಿಜೂರು ಹಾಗೂ ಸದಸ್ಯರು ಸರಕಾರದ ಆದೇಶದಂತೆ ಮೇ.28ರಂದು ಎಲ್ಲರನ್ನೂ ಬೀಳ್ಕೊಟ್ಟರು.

Click here

Click here

Click here

Click Here

Call us

Call us

Leave a Reply