Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದನಾಡಿನ ಮನೆ ಮಗಳಂತಾದ ಸ್ಪೇನ್ ದೇಶದ ಯುವತಿ ತೆರೆಸಾ
    ವಿಶೇಷ ವರದಿ

    ಕುಂದನಾಡಿನ ಮನೆ ಮಗಳಂತಾದ ಸ್ಪೇನ್ ದೇಶದ ಯುವತಿ ತೆರೆಸಾ

    Updated:25/07/2020No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ.
    ಕುಂದಾಪುರ: ‘ಈ ಊರ್ ಚಂದ, ಈ ಊರ ಜನು ಚಂದ, ಈ ಊರ ಭಾಷೆ ಚಂದ, ನಾನಿಲ್ಲೇ ಇದ್ದುಬಿಡಲೆ ಅಂತ ಅನಿಸುತ್ತಿದೆ’ ಹಿಂಗೆ ಕುಂದಾಪುರದವರೇ ನಾಚುವಂತೆ ಕುಂದಾಪ್ರ ಕನ್ನಡದಲ್ಲಿ ಮನಬಿಚ್ಚಿ ಮಾತಾಡ್ತಾ ಹಳ್ಳಿಯ ಬದುಕಿನೊಂದಿಗೆ ಬೆರೆತುಹೋಗಿದ್ದಾರೆ ಸ್ಪೇನ್ ದೇಶದಿಂದ ಬಂದ ಯುವತಿ ತೆರೆಸಾ.

    Click Here

    Call us

    Click Here

    ದಕ್ಷಿಣ ಭಾರತ ಪ್ರವಾಸಕ್ಕೆಂದು ಮುಂಬೈಗೆ ಬಂದಿದ್ದ ತೆರೆಸಾ ಅವರು ಲಾಕ್‌ಡೌನ್ ಕಾರಣದಿಂದ ಸ್ಪೇಯ್ನ್ ದೇಶಕ್ಕೆ ಹಿಂದಿರುಗಲಾರದೇ ತನ್ನ ಅಣ್ಣ ಕಾರ್ಲೂಸ್ ಅವರ ಆಪ್ತ ಗೆಳೆಯ ಬೈಂದೂರು ತಾಲೂಕಿನ ಹೇರಂಜಾಲಿನ ಕೃಷ್ಣ ಪೂಜಾರಿ ಅವರೊಂದಿಗೆ ನಾಲ್ಕು ತಿಂಗಳ ಹಿಂದೆ ಬೈಂದೂರು ತಾಲೂಕಿನ ಹೆರಂಜಾಲಿಗೆ ಬಂದು, ಅವರು ಆ ಮನೆಯ ಮಗಳಾಗಿ ಹೋಗಿದ್ದಾರೆ. ಕೃಷ್ಣ ಪೂಜಾರಿ ಅವರ ತಂದೆ-ತಾಯಿ, ಸಹೋದರ-ಸಹೋದರಿಯರೊಂದಿಗೆ ಮನೆ ಮಂದಿಯಂತೆ  ಹಳ್ಳಿ ಸೊಗಡಿನೊಂದಿಗೆ ಬೆರೆತುಹೋಗಿದ್ದಾರೆ.  ಕುಂದಾಪ್ರ ಡಾಟ್ ಕಾಂ ವರದಿ.

    ತೆರೆಸಾ ಅವರು ಈಗ ಮನೆಮಂದಿಯ ಜತೆ ಕೃಷಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಗೊಬ್ಬರ ಹೊತ್ತು ಗದ್ದೆಗೆ, ತೋಟಕ್ಕೆ ಹಾಕುತ್ತಾರೆ. ಕೃಷ್ಣ ಪೂಜಾರರ ತಾಯಿ ಚಿಕ್ಕಮ್ಮ ಪೂಜಾರಿ ಅವರಿಂದ ರಂಗೋಲಿ ಹಾಕಲು, ದನದ ಹಾಲು ಕರೆಯಲು, ಮಡಲು ನೇಯಲು ಕಲಿತಿದ್ದಾರೆ. ಊರಿನ ಜನ ಮಾತನಾಡುವ ಕುಂದಾಪ್ರ ಕನ್ನಡದ ಹಲವು ಪದಗಳನ್ನು ಆಡಲು, ಮಕ್ಕಳಿಂದ ಕನ್ನಡ ಅಕ್ಷರಗಳನ್ನು ಬರೆಯಲು ಕಲಿತಿದ್ದಾರೆ. ಮನೆಯಲ್ಲಿ ಮಾಡುವ ಊರತಿಂಡಿಗಳಾದ ಕೊಟ್ಟೆಕಡುಬು, ಇಡ್ಲಿ, ದೋಸೆ, ಚಿಕ್ಕನ್ ಪಲ್ಯ, ಮೀನುಸಾರು, ತರಕಾರಿ ಸಾಂಬಾರು ನನಗೆ ಇಷ್ಟವಾಗಿದೆ ಎಂದು ಹೇಳಿ ಬಾಯಿ ಚಪ್ಪರಿಸುತ್ತಾರೆ. ಮನೆಯ ಸದಸ್ಯರ ಜತೆ ಬೆರೆತು ಖುಷಿಯಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

    ‘ಹ್ವಾಯ್ ಹೇಂಗಿದ್ರಿ’ ಅಂತ ಹೊಸಬರನ್ನು ಕಂಡೊಡನೆ ಮುಖವಿಡೀ ನಗೆಯಾಗುವ ತೆರೆಸಾ ಕುಂದಾಪ್ರ ಕನ್ನಡದಲ್ಲಿ ಮಾತಿಗೆ ಯತ್ನಿಸುತ್ತಾರೆ. ಈ ಭಾಷೆ ಹೇಗಿದೆ ಎಂದು ಪ್ರಶ್ನಿಸಿದರೆ ‘ಕುಂದಾಪ್ರ ಭಾಸಿ ಚೆಂದ್ ಗೋಂಪಿ’ ಎಂದು ಸ್ಪೇನಿಶ್ ದಾಟಿಯಲ್ಲಿ ಉತ್ತರಿಸುತ್ತಾರೆ/ಕುಂದಾಪ್ರ ಡಾಟ್ ಕಾಂ ವರದಿ/

    Click here

    Click here

    Click here

    Call us

    Call us

    ಮುಂಬೈಯಲ್ಲಿ ಅಮೇರಿಕಾ ಮೂಲದ ಕಂಪನಿಯಲ್ಲಿ ನಾನು ಹಾಗೂ ತೆರೆಸಾ ಸಹೋದರ ಕಾರ್ಲೂಸ್ ಒಟ್ಟಿಗೆ ಕೆಲಸ ಮಾಡುತ್ತೇವೆ. ಹಾಗಾಗಿ ಎಂಟು ವರ್ಷಗಳಿಂದ ಅವರ ಕುಟುಂಬ ನನಗೆ ಪರಿಚಯ. ಕಾರ್ಲೂಸ್ ಕೂಡ ಈ ಹಿಂದೆ ಹಲವು ಭಾರಿ ನಮ್ಮ ಮನೆಗೆ ಬಂದಿದ್ದರು. ಅಲ್ಲದೇ ಯಕ್ಷಗಾನವನ್ನೂ ಕಲಿತಿದ್ದರು. ನಾನು ಕಂಪೆನಿಯ ಕೆಲಸದ ನಿಮಿತ್ತ ಸ್ಪೇನ್ ದೇಶಕ್ಕೆ ತೆರಳಿದಾಗ ಕಾರ್ಲೂಸ್ ಮನೆಯಲ್ಲಿಯೇ ಉಳಿಯುತ್ತೇನೆ. ನಾಲ್ಕು ತಿಂಗಳ ಹಿಂದೆ ತೆರೆಸಾ ಸ್ವದೇಶಕ್ಕೆ ಮರಳಲಾಗದೆ ತೊಂದರೆಗೆ ಸಿಲುಕಿದ್ದರಿಂದ ನಮ್ಮಲ್ಲಿಗೆ ಬಂದಿದ್ದಾರೆ. ಅಲ್ಪಸ್ವಲ್ಪ ಕನ್ನಡ ಕಲಿತು ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಸಂತಸದಿಂದ ಭಾಗಿಯಾಗುತ್ತಿರುವುದರಿಂದ ಅವರು ನಾಲ್ಕು ತಿಂಗಳಿನಿಂದ ನಮ್ಮೂರ, ನಮ್ಮ ಮನೆಯ ಹುಡುಗಿ ಆಗಿದ್ದಾರೆ’ – ಕೃಷ್ಣ ಪೂಜಾರಿ, ಹೆರಂಜಾಲು ಕುಂದಾಪ್ರ ಡಾಟ್ ಕಾಂ ವರದಿ.

    ಇಲ್ಲಿನ ಭಾಷೆ, ಸಂಸ್ಕೃತಿ ಎಲ್ಲವೂ ನನಗೆ ಹಿಡಿಸಿದೆ. ಯಕ್ಷಗಾನವನ್ನು ಕಲಿತೆ ಹೋಗಬೇಕು ಎಂಬ ಬಯಸಿದ್ದೆ. ಆದರೆ ಲಾಕ್‌ಡೌನ್ ಇದ್ದುದರಿಂದ ಅದು ಸಾಧ್ಯವಾಗಲಿಲ್ಲ. ಸ್ಪೆಯ್ನಗೆ ಹೋಗಬೇಕು, ಆದರೆ ಹೇರಂಜಾಲು ಖುಷಿ ನೀಡಿದೆ. ಬಿಟ್ಟು ಹೋಗಲು ಬೇಸರವಾಗುತ್ತದೆ – ತೆರೆಸಾ, ಸ್ಪೇನ್ ಯುವತಿ     ಕುಂದಾಪ್ರ ಡಾಟ್ ಕಾಂ ವರದಿ

    Teresa, a young lady from Spain country who came for South India tour, now stayed in his friend Krishna Poojari’s home at Heranjalu Village (Byndoor taluk) due to lockdown. She is learning Kundapura Kannada Language and enjoying the day to day activities in the village. Now She is eager to learn Yakshagana and Loves Kundapura Kannada Language.

    ಚಿತ್ರಗಳು: ಉದಯ ಪಡಿಯಾರ್

     

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಅರಣ್ಯ ಲೋಕದ ಮರುಸೃಷ್ಟಿ – ಕುಮ್ರಿಕಾನ್. ‌ಬೈಂದೂರು ಉತ್ಸವದ ವಿಶೇಷ ಆಕರ್ಷಣೆ

    01/11/2024

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d