Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗೋಳಿಹೊಳೆ ಗ್ರಾಮಸಭೆಯಲ್ಲಿ ಗದ್ದಲ
    ಊರ್ಮನೆ ಸಮಾಚಾರ

    ಗೋಳಿಹೊಳೆ ಗ್ರಾಮಸಭೆಯಲ್ಲಿ ಗದ್ದಲ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಬೈಂದೂರು: ನಮ್ಮ ಗ್ರಾಮದ ಹೆಚ್ಚಿನ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಇಲಾಖೆ ವಿಫಲವಾಗಿದೆ. ಯಾವೂದೇ ಅಂಗಡಿಯಲ್ಲಿ ಒಂದು ಮದ್ಯದ ಬಾಟಲಿ ಸಿಕ್ಕಿದರೂ ಮಾರುವಾತನನ್ನು ಬಂಧಿಸುವುದಾಗಿ ಹೇಳಿದ ಉಡುಪಿ ಅಬಕಾರಿ ಕಛೇರಿಯ ಅಧಿಕಾರಿಗಳು, ಬಾಕ್ಸ್‌ಗಟ್ಟಲೆ ಅಕ್ರಮ ಮದ್ಯ ಸಿಕ್ಕಿದರೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಬೈಂದೂರು ಭಾಗದ ವೈನ್‌ಶಾಪ್ ಮಾಲೀಕರಿಗೆ ಹಣ ಮುಖ್ಯವಾಗಿದೆ. ಇವರು ಸಾಮಾಜಿಕ ಪಿಡುಗನ್ನು ಕಾನೂನು ರೀತಿಯಲ್ಲಿ ವಿಚಾರಿಸಬೇಕಾದ ಪೋಲೀಸ್ ಇಲಾಖೆಗೆ ಹಪ್ತಾ ನೀಡಿ ವ್ಯವಸ್ಥಿತವಾಗಿ ಬುಟ್ಟಿಗೆ ಹಾಕಿಕೊಂಡಿದ್ದಾರೆ.

    Click Here

    Call us

    Click Here

    -ಇದು ಯಾವುದೇ ಸಿನೆಮಾ ಡೈಲಾಗ್ ಅಲ್ಲ. ಗೋಳಿಹೊಳೆ ಗ್ರಾಮಸಭೆಯಲ್ಲಿ ಸ್ಥಳೀಯ ಮಹಿಳೆಯರು ಪಂಚಾಯತ್ ವಿರುದ್ದ ಹರಿಹಾಯ್ದ ರೀತಿ. ಗ್ರಾಮಸಭೆಗೆ ಅಬಕಾರಿ ಇಲಾಖಾಧಿಕಾರಿ ಗೈರಾಗಿದ್ದೆ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣವಾಯಿತು. ಸಂಜೆ ಸಮಯದಲ್ಲಿ ಮಾಮೂಲಿ ವಸೂಲಿಗಾಗಿ ಗೂಡಂಗಡಿಗಳಿಗೆ ಬರುವ ಅಬಕಾರಿ ಇಲಾಖಾ ಸಿಬ್ಬಂದಿಗಳಿಗೆ ಗ್ರಾಮಸಭೆಗೆ ಬರಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟಿಸಿದ ಮಹಿಳೆಯರ ಹಾಗೂ ಗ್ರಾಮಸ್ಥರ ಆಕ್ರೋಶ ತೀವೃ ಸ್ವರೂಪ ಪಡೆಯಿತು. ಈ ಬಗ್ಗೆ ಪಂಚಾಯತ್ ನಿರ್ಣಯ ಮಾಡಿ ಸಂಬಂಧಿಸಿದವರಿಗೆ ದೂರು ನೀಡುವುದಾಗಿ ನೊಡೆಲ್ ಅಧಿಕಾರಿಯಾಗಿ ಆಗಮಿಸಿದ ತೋಟಗಾರಿಕೆ ಇಲಾಖಾಧಿಕಾರಿ ರಾಘವೇಂದ್ರ ಭರವಸೆ ಕೊಟ್ಟ ಮೇಲೆ ಪರಿಸ್ಥಿತಿ ತಿಳಿಯಾಯಿತು. ಬಳಿಕ ಎರಡು ಬಣಗಳ ರಾಜಕೀಯ ಘರ್ಷಣೆಯಿಂದ ಕೆಲಕಾಲ ಪ್ರಕ್ಷುಬ್ದ ವಾತಾವರಣ ಸೃಷ್ಠಿಯಾಯಿತು. ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ ಜನಪ್ರತಿನಿಧಿಗಳ ನಡೆಗೆ ಕೋಪಗೊಂಡ ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದರು. ಬಳಿಕ ಮಾರ್ಗದರ್ಶಿ ಅಧಿಕಾರಿಗಳ ವಿನಂತಿಯ ಮೇರೆಗೆ ಗ್ರಾಮಸ್ಥರು ಬಹಿಷ್ಕಾರ ಹಿಂಪಡೆದರು.

    ಕೊಡಿಯಾಲ್‌ಕೇರಿ ಅಂಗನವಾಡಿ ಕಟ್ಟಡ ಮೂರು ವರ್ಷ ಕಳೆದರೂ ಮಂಜೂರಾಗದಿರುವುದು, ಕಳೆದರಡು ವರ್ಷದಿಂದ ಯಳಜಿತ್ ಸೋರುವ ಅಂಗನವಾಡಿ ಕಟ್ಟಡ ರಿಪೇರಿಯಾಗದಿರುವ ಕುರಿತು ಇಲಾಖಾ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅನುದಾನದ ಕೊರತೆಯಿಂದ ಇದು ಸಾಧ್ಯವಾಗಿಲ್ಲ ಎಂದು ಮಹಿಳಾ ಮತ್ತು ಶಿಶುಕಲ್ಯಾಣ ಇಲಾಖಾಧಿಕಾರಿ ಪೂರ್ಣಿಮಾ ಸಭೆಗೆ ತಿಳಿಸಿದರು. ಚಾರ್ಸಾಲು ಮರಾಠಿ ಕೇರಿಗೆ ಇದುವರೆಗೆ ವಿದುತ್ ಸಂಪರ್ಕ ನೀಡದಿರುವ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಲ್ಲೂರು ಶಾಖಾಧಿಕಾರಿ ಸಂತೋಷ್ ನಾಯಕ್, ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಸ್ವಲ್ಪಮಟ್ಟಿನ ಸಮಸ್ಯೆಯಾಗಿದೆ ಎಂದರು. ಗ್ರಾಮದಲ್ಲಿ ನಿವೇಶನ ರಹಿತರಿಗೆ ಹಾಗೂ ಅವಶ್ಯಕತೆ ಇರುವವರಿಗೆ ಆದ್ಯತೆ ನೀಡಬೇಕು. ಈಗಾಗಲೇ ಸ್ಥಳ ಇರುವವರಿಗೆ ಅಗತ್ಯ ಇಲ್ಲದವರಿಗೆ ನಿವೇಶನ ಹಂಚಿಕೆ ಮಾಡಬಾರದು ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಪಂಚಾಯತ್ತಿಗೆ ಆಗ್ರಹಿಸಿದರು. ಗೋಳಿಹೊಳೆ ಗ್ರಾಮದ ಸ.ನಂ.೩೫೦ರ ಐದು ಎಕ್ರೆ ಸರಕಾರಿ ಸ್ಥಳವನ್ನು ಬೇರೆ ಗ್ರಾಮಗಳಿಗೆ ಡಂಪಿಂಗ್ ಯಾರ್ಡ್‌ಗೆ ನೀಡಲು ಪ್ರಸ್ತಾವನೆ ಸಲ್ಲಿಸಿದ ವಿಚಾರದ ಕುರಿತು ಸಭೆಯ ಕೊನೆಯ ಹಂತದಲ್ಲಿ ಇನ್ನೊಮ್ಮೆ ಕೋಲಾಹಲವಾಯಿತು. ಬೇರೆ ಗ್ರಾಮಗಳ ಕಸವನ್ನು ಇಲ್ಲಿ ತಂದು ಹಾಕಲು ಸರ್ವಥಾ ಬಿಡುವುದಿಲ್ಲ. ಈ ಪ್ರಸ್ತಾವನೆ ಕೈ ಬಿಡದಿದ್ದರೆ ಉಗ್ರಹೋರಾಟಕಕ್ಕೂ ಹಿಂಜರಿಯಲಾರೆವು ಎಂದು ಗ್ರಾಮಸ್ಥರು ಒಕ್ಕೊರಳಿನಿಂದ ಕೂಗಿ ಗದ್ದಲ ಎಬ್ಬಿಸಿದರು. ಈ ವಿಷಯದ ಕುರಿತಂತೆ ಪಿಡಿಓ ಚಂದ್ರಶೇಖರ ಹೀಗಾದಂತೆ ಕ್ರಮ ಜರಿಗಿಸುವುದಾಗಿ ಸಮಾಧಾನ ಪಡಿಸಿದರು. ಒಟ್ಟಿನಲ್ಲಿ ಗ್ರಾಮಸಭೆ ಗದ್ದಲದ ಗೂಡಾಯಿತು.

    ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಗಾಯತ್ರಿದೇವಿ, ಅರಣ್ಯಾಧಿಕಾರಿ ಗೋವಿಂದ ಪಟಗಾರ್, ಆರೋಗ್ಯ ಇಲಾಖೆಯ ಗಾಯತ್ರಿ, ಪಶುವೈದ್ಯ ಡಾ. ವಿವೇಕಾನಂದ, ಗ್ರಾಮಲೆಕ್ಕಿಗ ಮಂಜುನಾಥ ತಮ್ಮ ಇಲಾಖೆಯ ಯೋಜನೆ, ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿದರು. ಗ್ರಾಪಂನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪಿಡಿಓ ಚಂದ್ರಶೇಖರ ಸ್ವಾಗತಿಸಿ, ಕಾರ್ಯದರ್ಶಿ ಅನ್ನಮ್ಮ ವಂದಿಸಿದರು. ವಾಸು ಗೌಡ ನಿರೂಪಿಸಿದರು.

    Like this:

    Like Loading...

    Related

    Byndoor
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಾರ್ಷಿಕೋತ್ಸವ

    08/12/2025

    ಗ್ರಾಮಾಭಿವೃದ್ಧಿ ಯೋಜನೆ ಸಮಾಜಕ್ಕೆ ಶಕ್ತಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

    08/12/2025

    ಬೈಂದೂರು: ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಿ ನಿಬ್ಬಣ ದಿನ

    08/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಾರ್ಷಿಕೋತ್ಸವ
    • ಗ್ರಾಮಾಭಿವೃದ್ಧಿ ಯೋಜನೆ ಸಮಾಜಕ್ಕೆ ಶಕ್ತಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
    • ಬೈಂದೂರು: ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಿ ನಿಬ್ಬಣ ದಿನ
    • ಅಂಪಾರು ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಶಿಶುವಿಹಾರದಲ್ಲಿ ಪತ್ರ ಬರವಣಿಗೆ ದಿನಾಚರಣೆ
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d