Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಶ್ರೀರಾಮಚಂದ್ರ ನಮ್ಮ ಆದರ್ಶಗಳ ಪ್ರತಿರೂಪ: ಡಾ. ವಸಂತಕುಮಾರ ಪೆರ್ಲ
    ಊರ್ಮನೆ ಸಮಾಚಾರ

    ಶ್ರೀರಾಮಚಂದ್ರ ನಮ್ಮ ಆದರ್ಶಗಳ ಪ್ರತಿರೂಪ: ಡಾ. ವಸಂತಕುಮಾರ ಪೆರ್ಲ

    Updated:02/02/2021No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ ಎಂಬ ಜಿಲ್ಲಾಮಟ್ಟದ ಕವಿಗೋಷ್ಠಿ ಮಂಗಳೂರು ನಗರದಲ್ಲಿ ನಡೆಯಿತು.

    Click Here

    Call us

    Click Here

    ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ, ಶ್ರೀರಾಮಚಂದ್ರ ಎಂಬ ಮಾದರಿ ವ್ಯಕ್ತಿತ್ವವು ನಮ್ಮ ಆದರ್ಶಗಳ ಒಂದು ಪ್ರತಿರೂಪ. ಜಾತಿ ಮತ ಪಂಥ ಪಂಗಡ ದೇಶ ಮೊದಲಾದ ಗಡಿರೇಖೆಗಳನ್ನು ಮೀರಿದ ಮಾನವತ್ವದ ಉತ್ತುಂಗತೆಯ ಸಂಕೇತವೇ ಶ್ರೀರಾಮಚಂದ್ರ. ಆತ ಮೌಲ್ಯಗಳ ಮೊತ್ತ. ಆತನ ಉದಾರ ವ್ಯಕ್ತಿತ್ವ ನಮ್ಮದಾಗಬೇಕೆಂಬ ಆದರ್ಶದಿಂದಾಗಿಯೇ ಶ್ರೀರಾಮಚಂದ್ರನು ಯಾವ ಕಾಲಕ್ಕೂ ಸಲ್ಲುವ ಓರ್ವ ನಾಯಕನಾಗಿ ಉಳಿದಿದ್ದಾನೆ. ಎಂದು ಹೇಳಿದರು.

    ವಿವಾದಗಳಿಗೆ ಹೊರತಾಗಿ ನಿಲ್ಲುವ ವ್ಯಕ್ತಿತ್ವ ಪ್ರಭು ಶ್ರೀರಾಮಚಂದ್ರನದು. ಆತನ ಬಗ್ಗೆ ಹೆಚ್ಚು ಹೆಚ್ಚು ಸಾಹಿತ್ಯ ನಿರ್ಮಾಣವಾದಂತೆ ಜನಸಾಮಾನ್ಯರ ಹೃದಯ ಮಂದಿರದಲ್ಲಿ ಸ್ಥಾನ ಪಡೆಯುವ ಅವಕಾಶ ಹೆಚ್ಚುತ್ತ ಹೋಗುತ್ತದೆ. ಎಲ್ಲ ಕವಿಗಳೂ ವಿಭಿನ್ನವಾಗಿ ಶ್ರೀರಾಮಚಂದ್ರನ ಕುರಿತು ಬರೆದಿದ್ದಾರೆ. ಇದೊಂದು ಹೊಸ ಪರಿಕಲ್ಪನೆ ಎಂದು ಹೇಳಿದರು.

    ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವಿಗಳು ಶ್ರೀರಾಮಚಂದ್ರನನ್ನು ಹೊಸ ಒಳನೋಟದಲ್ಲಿ ಸಾಹಿತ್ಯದಲ್ಲಿ ಕಡೆದು ನಿಲ್ಲಿಸುವ ಪ್ರಯತ್ನ ನಡೆಸಿದ್ದು ವಿನೂತನ ಪ್ರಯೋಗ. ಆ ಮೂಲಕ ಅಯೋಧ್ಯಾ ನಗರ ಮತ್ತು ಪ್ರಭು ಶ್ರೀರಾಮಚಂದ್ರ ನಮ್ಮೆಲ್ಲರ ಹೃದಯಗಳಲ್ಲಿ ನೆಲಸುವಂತಾಗಿದೆ ಎಂದು ಹೇಳಿದರು.

    ಮೊದಲ ಮೂರು ಸ್ಥಾನಗಳನ್ನು ಪಡೆದ ಕವಿಗಳಾದ ಅಶೋಕ ಎನ್. ಕಡೇಶಿವಾಲಯ, ಅಶ್ವತ್ಥ್ ಬರಿಮಾರು ಮತ್ತು ಪಾರ್ವತಿ ಶಾಸ್ತ್ರಿ ಅವರೊಂದಿಗೆ ಸಮಾಧಾನಕರ ಸ್ಥಾನ ಪಡೆದ ವಿದ್ಯಾಶ್ರೀ ಅಡೂರು, ಭಾರತಿ ಭಟ್ ಪಾಣಾಜೆ, ಪರಿಮಳಾ ರಾವ್, ಲಕ್ಷ್ಮೀ ವಿ. ಭಟ್ ತಲಂಜೇರಿ, ಭಾರತಿ ಎನ್. ಫಡ್ಕೆ, ಭಾರತಿ ಭಟ್ ಪಾಣಾಜೆ, ಹರಿಪ್ರಸಾದ್ ಈಶ್ವರಮಂಗಲ, ಅಶ್ವಿನಿ ಕೋಡಿಬೈಲು, ಕೆ. ಶಶಿಕಲಾ ಭಾಸ್ಕರ್, ರಾಜೇಶ್ವರಿ ಬಜ್ಪೆ, ದೀಪಕ್ ಎಸ್. ಕೋಟ್ಯಾನ್, ಹೇಮಂತಕುಮಾರ್ ಡಿ. ಬಂಟ್ವಾಳ, ಭವಾನಿ ಎಂ ಕುದ್ಪಾಜೆ, ಗಣಪತಿ ಭಟ್ ಮಧುರಕಾನನ, ಡಾ. ಸುರೇಶ ನೆಗಳಗುಳಿ ಮೊದಲಾದ ಇಪ್ಪತ್ತಮೂರು ಮಂದಿ ಕವಿಗಳು ಶ್ರೀರಾಮನ ಕುರಿತಾದ ತಮ್ಮ ಸ್ವರಚಿತ ಕವನಗಳನ್ನು ಮಂಡಿಸಿದರು.

    Click here

    Click here

    Click here

    Call us

    Call us

    ಕವಿಗೋಷ್ಠಿಯ ತೀರ್ಪುಗಾರರಾಗಿದ್ದ ರತ್ನಾವತಿ ಜೆ. ಬೈಕಾಡಿ, ಶೈಲಜಾ ಪುದುಕೋಳಿ ಮತ್ತು ರೂಪಕಲಾ ಆಳ್ವ ಉಪಸ್ಥಿತರಿದ್ದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದ. ಕ. ಘಟಕದ ಅಧ್ಯಕ್ಷ ಚ. ನ. ಶಂಕರ ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾನಾಡಿದರು. ನಿರೀಕ್ಷಾ ಯು. ಕೆ. ಪ್ರಾರ್ಥನೆ ಹಾಡಿದರು. ಧನಲಕ್ಷ್ಮಿ ಮೂಲ್ಕಿ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ನಾರಾಯಣ ವಂದಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ

    18/12/2025

    ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ

    18/12/2025

    ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ

    18/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.