ಸಿಎ ರಾಮಾನಂದ ಪ್ರಭು ಅವರಿಗೆ ಬೆಸ್ಟ್ ಓವರ್ಸಿಸ್ ಚಾಪ್ಟರ್ ಅವಾರ್ಡ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಸ್ಕತ್ ಚಾಪ್ಟರ್ ಐಸಿಎಐ ಇದರ ಚೇರಮೆನ್ ಆಗಿರುವ ಸಿಎ ಎನ್. ರಮಾನಂದ ಪ್ರಭು ಅವರಿಗೆ ಇತ್ತೀಚೆಗೆ ದೆಹಲಿಯ ಲೀಲಾ ಎಂಬಿಯನ್ಸ್ ಹೋಟೆಲಿನಲ್ಲಿ ನಡೆದ ಐಸಿಎಐನ 71ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಸ್ಕತ್ ಚ್ಯಾಪ್ಟರ್ ಐಸಿಎಐನ ಎಲ್ಲಾ ಸದಸ್ಯರ ಪ್ರತಿನಿಧಿಯಾಗಿ ಬೆಸ್ಟ್ ಓವರ್ಸಿಸ್ ಚಾಪ್ಟರ್ ಅವಾರ್ಡ್ ಐಸಿಎಐ 2020 ಪ್ರಶಸ್ತಿಯನ್ನು ಸ್ವೀಕರಿಸಿದರು.

Call us

Click Here

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾರ್ಲಿಮೆಂಟ್ ನ ಗೌರವಾನ್ವಿತ ಸದಸ್ಯರಾದ ಸಿಎ ಅರುಣ್ ಸಿಂಗ್ ಹಾಗೂ ಐಸಿಎಐ ನ ಅಧ್ಯಕ್ಷರಾದ ಸಿಎ ಅತುಲ್ ಕುಮಾರ್ ಗುಪ್ತ ಉಪಸ್ಥಿತರಿದ್ದರು.

ಜಾಗತಿಕ 43 ದೇಶಗಳ ಒಟ್ಟು 64 ಸಾಗರೋತ್ತರ ಐಸಿಎಐ ನ ಚ್ಯಾಪ್ಟರ್ ಗಳಲ್ಲಿ ಮಸ್ಕತ್ ಚ್ಯಾಪ್ಟರ್ ಐಸಿಎಐ ಅತ್ಯುತ್ತಮ ಚ್ಯಾಪ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮುಖೇನ ಐಸಿಎಐ 2020 ಇದರಿಂದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಸಿಎ ರಮಾನಂದ ಪ್ರಭು ಅವರು ಮೂಲತಃ ನಾಯ್ಕನಕಟ್ಟೆಯ ಪ್ರಭುಕೇರಿಯವರಾಗಿದ್ದು , ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.

Click here

Click here

Click here

Click Here

Call us

Call us

Leave a Reply