ಕತಾರ್ ಐಸಿಸಿ ನಿರ್ವಹಣಾ ಸಮಿತಿ ವರ್ಷದ ಮೊದಲ ಸಭೆ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕತಾರ್: ಭಾರತದ ರಾಯಭಾರಿ, ಘನತೆವೆತ್ತ ಡಾ. ದೀಪಕ್ ಮಿತ್ತಲ್ ಮತ್ತು ಭಾರತೀಯ ರಾಯಭಾರ ಕಚೇರಿಯ ಸಂಯೋಜಕ ಅಧಿಕಾರಿ ಎಸ್. ಝ್ಹೇವಿಯರ್ ಧನರಾಜ್ ಅವರ ನೇತ್ರತ್ವದಲ್ಲಿ ಭಾರತೀಯ ಸಾಂಸ್ಕ್ರತಿಕ ಕೇಂದ್ರ ( ಐಸಿಸಿ) ಕತಾರ್ನ ನೂತನ ನಿರ್ವಹಣಾ ಸಮಿತಿಯ ಮೊದಲ ಪರಿಚಯಾತ್ಮಕ ಸಭೆ ನಡೆಯಿತು.

Click Here

Call us

Click Here

ಎಲ್ಲಾ ನಿರ್ವಹಣಾ ಸಮಿತಿಯ ಸದಸ್ಯರನ್ನು ಐಸಿಸಿ ಅಧ್ಯಕ್ಷ ಪಿ.ಎನ್. ಬಾಬು ರಾಜನ್ ಪರಿಚಯಿಸಿದರು. ಪ್ರತಿಯೊಬ್ಬ ಸದಸ್ಯರ, ತಮ್ಮ ಹಿನ್ನೆಲೆ, ಪಾತ್ರ ಮತ್ತು ಪ್ರಸ್ತುತ ಐಸಿಸಿ 2021-22ರ ಅವಧಿಯಲ್ಲಿ ನಿಗದಿಪಡಿಸಿದ ಹೊಣೆಗಾರಿಕೆಯನ್ನು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಿದರು. ಡಾ.ದೀಪಕ್ ಮಿತ್ತಲ್ ಪರಿಚಯಾತ್ಮಕ ಭಾಷಣ ಮಾಡಿದರು, ಸಮಿತಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದರು.

ಈ ಸಂದರ್ಭದಲ್ಲಿ 15 ಆಗಸ್ಟ್ 2022ರಂದು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವತ್ತ ಭಾರತವನ್ನು ಪ್ರತಿನಿಧಿಸಲು ತಂಡವು ಸಂಪೂರ್ಣ ಉತ್ಸುಕವಾಗಿದೆ, ಮುಂದಿನ 75 ವಾರಗಳವರೆಗೆ ವಾರಕ್ಕೊಮ್ಮೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯಿಂದ ನಿರ್ಧರಿಸಲಾಯಿತು . ಐಸಿಸಿ ಉಪಾಧ್ಯಕ್ಷ, ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply