ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಶಿರೂರಿನ ದ್ವಿಬಾಷಾ ಕವಿಯತ್ರಿ ಹಾಗೂ ಲೇಖಕಿ ಪುಷ್ಪಾ ರಘುರಾಮ್ ಮೇಸ್ತ ಅವರ ‘ಅಂತರಂಗದ ಅಲೆ’ ಕವನ ಸಂಕಲನವು ಚಿತ್ರದುರ್ಗದ ತ. ರಾ .ಸು ರಂಗಮಂದಿರದಲ್ಲಿ ಬಿಡುಗಡೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕರಾದ ಡಾ . ಮಹೇಶ್ ಜೋಶಿ, ಹೊನ್ನುಡಿಗಳ ಗಾರುಡಿಗ ಹಾಗೂ ಸಾಹಿತಿಗಳಾದ ಮಹೇಂದ್ರ ಕುರ್ಡಿ, ರಾಜು ಸೂಲೇನ ಹಳ್ಳಿ, ಪದ್ಮಶ್ರೀ ಪುರಸ್ಕೃತರಾದ ಜೋಗತಿ ಮಂಜಮ್ಮ, ಚಲನಚಿತ್ರ ನಿರ್ದೇಶಕರಾದ ಮುರಳಿ ಹಬಿ, ಬಿಂದಾಸ್ ಚಲನಚಿತ್ರ ನಟರಾದ ಗುರು ಹಾಗೂ ಅನೇಕರು ಉಪಸ್ಥಿತರಿದ್ದರು.
ಪುಷ್ಪಾ ರಘುರಾಮ್ ಅವರು ಈಗಾಗಲೇ ಕೊಂಕಣಿಯಲ್ಲಿ ಒಟ್ಟು ಐದು ಕೃತಿಗಳನ್ನು ಹೊರತಂದಿದ್ದು, ರಾಷ್ಟ ಪ್ರಶಸ್ತಿ ಹಾಗು ಅನೇಕ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.