ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಇಂಡಿಯನ್ ಸೀನಿಯರ್ ಛೇಂಬರ್ ಲೀಜನ್ನಿಂದ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಕೋವಿಡ್ ಮುಂಜಾಗ್ರತಾ ಕ್ರಮಕ್ಕಾಗಿ ಸುರಕ್ಷತಾ ಕೋವಿಡ್ ಕಿಟ್ಗಳನ್ನು ವಿತರಿಸಲಾಯಿತು.
ಲೀಜನ್ನ ಅಧ್ಯಕ್ಷ ಸೀನಿಯರ್ ಎನ್. ಕೆ. ಬಿಲ್ಲವ ಮತ್ತು ರಾಷ್ಟ್ರೀಯ ಸಂಯೋಜಕ ಸೀನಿಯರ್ ಗಿರೀಶ್ ಶ್ಯಾನುಭಾಗ್ ಸುರಕ್ಷತಾ ಕಿಟ್ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಎಂ. ಮುಂದಿನಮನಿ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಲೀಜನ್ನ ನಿಕಟಪೂರ್ವ ಕಾರ್ಯದರ್ಶಿ ಸೀನಿಯರ್ ರಾಮಕೃಷ್ಣ ದೇವಾಡಿಗ ಸ್ವಾಗತಿಸಿದರು. ಸಿಇಒ ಕರುಣಾಕರ ಶೆಟ್ಟಿ, ಲೀಜನ್ನ ನಿಕಟಪೂರ್ವ ಅಧ್ಯಕ್ಷರಾದ ಉದಯ ಡಿ. ಆರ್., ಕಛೇರಿಯ ಸಿಬ್ಬಂದಿಗಳಾದ ಗೋವಿಂದ ಗಾಣಿಗ, ಮೋಹನ್ ಉಪಸ್ಥಿತರಿದ್ದರು.